ಬ್ಯಾಂಕ್‌ನಲ್ಲೇ ಕೊಳೆಯುತ್ತಿದೆ ಪಿಎಫ್‌ ಹಣ

ಭವಿಷ್ಯ ನಿಧಿ ಕಚೇರಿಗೆ 162 ಪೌರಕಾರ್ಮಿಕರ ಪಟ್ಟಿ ರವಾನೆ ವಿಳಂಬ | ಕಷ್ಟದಲ್ಲಿರುವ ಕಾರ್ಮಿಕರಿಗೆ ಸಿಗದ ನೆರವು

Team Udayavani, Jul 4, 2021, 9:49 PM IST

03-gvt-01

ಕೆ. ನಿಂಗಜ್ಜ

ಗಂಗಾವತಿ: ನಗರಸಭೆ ಪೌರಕಾರ್ಮಿಕರ ಭವಿಷ್ಯನಿಧಿ  ಹಣ ಎರಡು ವರ್ಷಗಳಿಂದ ಭವಿಷ್ಯ ನಿಧಿ  ಇಲಾಖೆಯ ಬ್ಯಾಂಕ್‌ ಖಾತೆಯಲ್ಲಿ ಕೊಳೆಯುತ್ತಿದೆ. ನಗರಸಭೆ 162 ಜನ ಪೌರಕಾರ್ಮಿಕರ ಪಟ್ಟಿಯನ್ನು ಭವಿಷ್ಯ ನಿಧಿ  ಕಚೇರಿಗೆ ರವಾನೆ ಮಾಡದೇ ಇರುವುದರಿಂದ 76 ಲಕ್ಷ ರೂ. ಭವಿಷ್ಯನಿಧಿ  ಕಚೇರಿಯ ಖಾತೆಯಲ್ಲಿದ್ದು, ಭವಿಷ್ಯ ನಿಧಿ ಯ ಲಾಭ ಪೌರಕಾರ್ಮಿಕರಿಗೆ ದೊರಕುತ್ತಿಲ್ಲ.

ನಗರಸಭೆಯ ಪೌರಕಾರ್ಮಿಕರ ಭವಿಷ್ಯ ನಿಧಿ  ಕಟಾವು ಮಾಡಿದರೂ ಅದನ್ನು ಭವಿಷ್ಯ ನಿ ಧಿ ಕಚೇರಿಗೆ ಕಳಿಸದೇ ನಗರಸಭೆಯವರು ನಿರ್ಲಕ್ಷ ವಹಿಸಿದ್ದರು. ಇದನ್ನು ಪ್ರಗತಿಪರ ಪೌರಕಾರ್ಮಿಕ ಸಂಘಟನೆ ಕಲಬುರ್ಗಿ ವಲಯದ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರ ಪರಿಣಾಮ ನಗರಸಭೆಯ ಎಲ್ಲ ಬ್ಯಾಂಕ್‌ ಖಾತೆಗಳನ್ನು ಕಾರ್ಮಿಕರ ಇಲಾಖೆ ಮತ್ತು ಭವಿಷ್ಯ ನಿಧಿ  ಕಚೇರಿಯ ಅಧಿ ಕಾರಿಗಳು ಸುಮಾರು 8 ತಿಂಗಳು ಸೀಜ್‌ ಮಾಡಿ ಖಾತೆಯಲ್ಲಿದ್ದ ಸುಮಾರು 76 ಲಕ್ಷ ರೂ. ಪೌರಕಾರ್ಮಿಕರ ಭವಿಷ್ಯ ನಿಧಿಗಾಗಿ ಭವಿಷ್ಯನಿಧಿ  ಬ್ಯಾಂಕ್‌ ಖಾತೆಗೆ ಜಮಾ ಮಾಡಿಕೊಂಡಿತ್ತು. ನಂತರ 162 ಜನ ಪೌರಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲು ಪಟ್ಟಿ ಕಳಿಸುವಂತೆ ಹಲವು ಸಲ ನಗರಸಭೆಗೆ ಪತ್ರ ವ್ಯವಹಾರ ಮಾಡಿದರೂ ಎರಡು ವರ್ಷಗಳಿಂದ ನಗರಸಭೆಯವರು ಪೌರಕಾರ್ಮಿಕರ ಪಟ್ಟಿ ಕಳಿಸಿಲ್ಲ. ಇದರಿಂದ 76 ಲಕ್ಷ ರೂ. ಭವಿಷ್ಯ ನಿಧಿ  ಕಚೇರಿಯ ಬ್ಯಾಂಕ್‌ ಖಾತೆಯಲ್ಲೇ ಕೊಳೆಯುತ್ತಿದೆ. ಈಗಾಗಲೇ ಪೌರಕಾರ್ಮಿಕರು ಹಲವು ಬಾರಿ ನಗರಕೋಶ ನಿರ್ದೇಶಕರು ಜಿಲ್ಲಾ ಧಿಕಾರಿಗಳು ಮತ್ತು ಪೌರಾಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನಿಯಮದಂತೆ ಭವಿಷ್ಯನಿಧಿಗಾಗಿ ಕಾರ್ಮಿಕರು ಮತ್ತು ನಗರಸಭೆಯಿಂದ ಪ್ರತಿ ತಿಂಗಳು ವೇತನದಲ್ಲಿ ವಂತಿಗೆ ಕಟಾವು ಮಾಡಿ ಬಳ್ಳಾರಿಯ ಭವಿಷ್ಯ ನಿ ಧಿ ಕಚೇರಿಗೆ ಕಳಿಸಬೇಕು. ಪ್ರತಿ ಇಲಾಖೆಯಲ್ಲೂ ಮತ್ತು ಖಾಸಗಿ ಕಂಪನಿಗಳಲ್ಲಿ ದುಡಿಯುವ ಕಾರ್ಮಿಕರಿಗೆ ಭವಷ್ಯ ನಿಧಿ ಯನ್ನು ಕಟಾವು ಮಾಡಿ ಭವಿಷ್ಯ ನಿಧಿ  ಖಾತೆಗೆ ಜಮಾ ಮಾಡಲಾಗುತ್ತದೆ. ನಗರಸಭೆಯಲ್ಲಿ ಕಾರ್ಮಿಕರ ವೇತನದಲ್ಲಿ ಭವಿಷ್ಯ ನಿ ಧಿಗಾಗಿ ಹಣ ಕಟಾವು ಮಾಡಲಾಗುತ್ತಿದ್ದು, ಭವಿಷ್ಯನಿ ಧಿಯ ಖಾತೆಗೆ ಹಣ ಜಮಾ ಮಾಡುತ್ತಿಲ್ಲ. ಕಾರ್ಮಿಕರು ತಮ್ಮ ಕಷ್ಟ ಕಾಲದಲ್ಲಿ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇತರೆ ಅಗತ್ಯ ಸಂದರ್ಭದಲ್ಲಿ ಭವಿಷ್ಯ ನಿಧಿ ಯಲ್ಲಿರುವ ಹಣವನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದ್ದು, ಗಂಗಾವತಿ ನಗರಸಭೆ ಪೌರಕಾರ್ಮಿಕರಿಗೆ 3 ವರ್ಷಗಳಿಂದ ಭವಿಷ್ಯ ನಿಧಿ  ಹಣ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.