ಕುಷ್ಟಗಿ: ಗ್ರಾಮಕ್ಕೆ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಗೈರು
Team Udayavani, Jun 2, 2022, 12:50 PM IST
ಕುಷ್ಟಗಿ: ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮುಳ್ಳು ಕಂಟಿ ಕಾರಣದಿಂದ ತೋಪಲಕಟ್ಟಿ ಗ್ರಾಮಕ್ಕೆ ಬಸ್ ಬಾರದೇ ಇರುವ ಕಾರಣ ವಿದ್ಯಾರ್ಥಿಗಳು ತರಗತಿ ತಪ್ಪಿಸಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ತೋಪಲಕಟ್ಟಿ ಗ್ರಾಮದಿಂದ ತಳವಗೇರಾ ಗ್ರಾಮಕ್ಕೆ 64 ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬರುತ್ತಿದ್ದು, ಸದರಿ ಒಳ ಮಾರ್ಗದ ರಸ್ತೆ ಬದಿಯ ಮುಳ್ಳು ಕಂಟಿ ಬೆಳೆದಿದ್ದರಿಂದ ಬಸ್ ಬರುವುದು ನಿಲ್ಲಿಸಿದೆ. ಸಂಬಂಧಿಸಿ ಗ್ರಾ.ಪಂ. ಹಾಗೂ ಪಿಡಬ್ಲ್ಯೂಡಿ ಇಲಾಖೆ ರಸ್ತೆಬದಿಯ ಮುಳ್ಳುಕಂಟಿ ತೆರವುಗೊಳಿಸಿಲ್ಲ.
ಇದೇ ಕಾರಣದಿಂದ ಕುಷ್ಟಗಿ, ಬಿಜಕಲ್, ಬೋದೂರು, ತಾಂಡ, ತೋಪಲಕಟ್ಟಿ, ತಳವಗೇರಾ, ಕುಷ್ಟಗಿ ಗೆ ಬರುವ ಬಸ್ಸು ಕೆಲ ದಿನಗಳಿಂದ ಬಿಜಕಲ್ ಗೆ ಬಂದು ವಾಪಸ್ಸು ಕುಷ್ಟಗಿಗೆ ಹೋಗುತ್ತಿದೆ. ಈ ಕಾರಣದಿಂದ ಬಸ್ ಬಾರದೇ ಇರುವುದು ಇತ್ತ ಮುಳ್ಳು ಕಂಟಿ ತೆರವುಗೊಳಿಸದೇ ಇರುವುದು ಸಮಸ್ಯೆಯಾಗಿದೆ. ರಸ್ತೆಯ ಬದಿಯ ಮುಳ್ಳು ಕಂಟಿ ತೆರವುಗೊಳಿಸುವರೆಗೂ ಬಸ್ ಬರಲ್ಲ ಎನ್ನುವುದು ಗೊತ್ತಾಗಿದೆ.
ಈ ಬೆಳವಣಿಗೆಯ ಹಿನ್ನೆಲೆ ವಿದ್ಯಾರ್ಥಿಗಳು ಖಾಸಗಿ ವಾಹನ ನೆಚ್ಚಿಕೊಳ್ಳುವಂತಾಗಿದ್ದು, ಕಾಲ್ನಡಿಗೆ ಮೂಲಕ ಶಾಲೆಗೆ ಬಂದು ಹೋಗುವುದು ಅನಿವಾರ್ಯವಾಗಿದೆ. ಮಳೆಗಾಲದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮುಳ್ಳಿನ ಕಂಟಿ ತೆರವುಗೊಳಿಸಿ ಸುಗಮ ಸಂಚಾರದ ಬಸ್ ಸೇವೆಯ ಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯರಾದ ಕನಕನಗೌಡ ಪೋಲಿಸ್ ಪಾಟೀಲ, ಮಹಾಂತಗೌಡ ಪೊಲೀಸ್ ಪಾಟೀಲ, ಚಂದಪ್ಪ ಜಂಗಣ್ಣಿ, ಶೇಖಪ್ಪ ಗುಗ್ಗರಿ ಬಸವಂತಪ್ಪ ಉಪ್ನಾಳ, ಸಂಕಣ್ಣ ಹುಲಿಕೇರಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ