ಕೊವಿಡ್19 ವಲಸಿಗರಿಗೆ ಕೂಲಿಕೆಲಸ ಕೊಡುವ ನೆಪದಲ್ಲಿ ಮಾದರಿಯಾದ ಉಪಕಾಲುವೆ ದುರಸ್ತಿ ಕಾರ್ಯ
Team Udayavani, May 11, 2020, 9:30 AM IST
ಗಂಗಾವತಿ: ಕೊವಿಡ್ 19 ಸಂದರ್ಭದಲ್ಲಿ ಗುಳೆ ಹೋಗಿದ್ದ ನೂರಾರು ಕೂಲಿಕಾರ್ಮಿಕರು ವಾಪಸ್ ಗ್ರಾಮಗಳಿಗೆ ಬಂದಿದ್ದು ಅವರುಗಳಿಗೆ ಪರ್ಯಾಯ ಕೂಲಿಕೆಲಸ ಕೊಡುವುದು ದೊಡ್ಡಸಮಸ್ಯೆಯಾಗಿತ್ತು. ಗಂಗಾವತಿ ತಾಲೂಕಿನಾದ್ಯಂತ ನರೇಗಾ ಯೋಜನೆಯಲ್ಲಿ ಇವರಿಗೆಲ್ಲಾ ಕೂಲಿಕೆಲಸ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.
ತಾಲೂಕಿನ ದಾಸನಾಳ ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಯ ಉಪಕಾಲುವೆಯ ಜಂಗಲ್ ಕಟಿಂಗ್ ಹಾಗೂ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದು ಕಳೆದ ಒಂದು ವಾರದಿಂದ ಸುಮಾರು 100ಕ್ಕೂ ಹೆಚ್ಚು ಕೂಲಿಕಾರ್ಮಿಕರು ಕೆಲಸ ಮಾಡಿ ಕಾಲುವೆ ಸ್ವಚ್ಛ ಮಾಡಿದ್ದಾರೆ.
ರೈತರಿಗೆ ನೆರವು: ದಾಸನಾಳ ಹತ್ತಿರ ತುಂಗಭದ್ರಾ ಉಪಕಾಲುವೆ ಹಲವು ವರ್ಷಗಳಿಂದ ಗಿಡಕಂಟಿಗಳಿಂದ ನೀರು ಹರಿಯದಂತಹ ಸ್ಥಿತಿಯುಂಟಾಗಿತ್ತು ರೈತರು ಹಲವು ಭಾರಿ ಕಾಲುವೆ ಹೂಳು ತೆಗೆಸುವಂತೆ ಶಾಸಕರಿಗೆ ಮನವಿ ಮಾಡಿದ್ದರು. ಶಾಸಕರ ಸೂಚನೆ ಮೇರೆಗೆ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ಕೊಡುವ ನೆಪದಲ್ಲಿ ನರೇಗಾ ಯೋಜನೆಯಡಿ ಕಾಲುವೆ ಸ್ವಚ್ಛಗೊಳಿಸಲಾಗಿದ್ದು ರೈತರಿಗೆ ಅನುಕೂಲವಾಗಿದೆ ಎಂದು ತಾ.ಪಂ ಇಒ ಡಾ.ಮೋಹನ ಕುಮಾರ ಉದಯವಾಣಿ ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ