ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶಕ್ಕೆ ಶಕ್ತಿ: ಶಾಸಕ ಪರಣ್ಣ ಮುನವಳ್ಳಿ
Team Udayavani, May 15, 2020, 9:10 AM IST
ಗಂಗಾವತಿ: ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶದ ಆರ್ಥಿಕ ಶಕ್ತಿ ಹೆಚ್ಚಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕೊವಿಡ್-19 ವಿರುದ್ಧ 4ನೇ ಹಂತಹೋರಾಟದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದ್ದು ಜನರು ಅವರ ಕೈ ಬಲಪಡಿಸಲು ಜನಸಾಮಾನ್ಯರು ತಯಾರಿಸುವ ವಸ್ತುಗಳನ್ನು ಹೆಚ್ಚು ಖರೀದಿ ಮಾಡುವ ಮೂಲಕ ಗೃಹಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ವಿದೇಶಿ ವಸ್ತುಗಳನ್ನು ಖರೀದಿ ಕಡಿಮೆಮಾಡಿ ವಿದೇಶಿ ವಿನಿಮಯ ದೇಶದಲ್ಲಿ ಉಳಿಯುವಂತೆ ಮಾಡಬೇಕು. ಯುವಜನರು ದೇಶದ ಆಸಕ್ತಿಗಾಗಿ ಕೆಲಸ ಮಾಡುವ ಮೂಲಕ ಕೊವಿಡ್-19 ರೋಗವನ್ನು ನಿಯಂತ್ರಣ ಮಾಡಲು ಸಹಕರಿಸಬೇಕೆಂದರು.