CM ಆಗಲು ನಮ್ಮ ಬಳಿ ಕೈಕಟ್ಟಿ ನಿಂತಿದ್ದ ಎಚ್ಡಿಕೆ: ಸಚಿವ ಚಲುವರಾಯಸ್ವಾಮಿ
Team Udayavani, Mar 16, 2024, 10:16 PM IST
ಮಂಡ್ಯ: ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಎಚ್.ಡಿ.ಕುಮಾರಸ್ವಾಮಿ ನಮ್ಮ 39 ಶಾಸಕರ ಮುಂದೆ ಕೈಕಟ್ಟಿ ನಿಂತಿದ್ದರು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಮಂತ್ರಿ ಮಾಡುವಂತೆ ನನ್ನ ಮುಂದೆ ಗೋಳಾಡಿದ್ದರು ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮೇಲಿನಂತೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ಮುಖ್ಯಮಂತ್ರಿಯನ್ನಾಗಿ ಮಾಡಲು ನಮ್ಮ ಮುಂದೆ ಅವರೇ ಕೈ ಕಟ್ಟಿ ನಿಂತಿದ್ದರೆಂದು ಕಿಡಿಕಾರಿದರು. ಅವರಪ್ಪ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಭಾವ ಬೇಡ ಎಂದಾಗ ನಮ್ಮ 39 ಶಾಸಕರ ಮುಂದೆ ಕೈಕಟ್ಟಿ ನಿಂತಿದ್ದರು. ಅವರು ಹೇಗೆ ನಿಂತಿದ್ದರೆಂಬುದನ್ನು ಒಮ್ಮೆ ಅವರನ್ನೇ ಕೇಳಿ. ಆಗ ನಾವು 120 ಇರಲಿಲ್ಲ, 39 ಮಂದಿ ಮಾತ್ರ ಶಾಸಕರಿದ್ದೆವು. ಮುಖ್ಯಮಂತ್ರಿ ಮಾಡಲು ದೇವೇಗೌಡರು ಹಾಗೂ ಮನೆಯವರು ಒಪ್ಪಿರಲಿಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ