ಮಂಡ್ಯ:ಬೃಹತ್ ವೇಶ್ಯಾವಾಟಿಕೆ ಅಡ್ಡೆಗೆ ಎಸ್ಪಿ ದಾಳಿ ;22 ಸೆರೆ
Team Udayavani, Aug 20, 2017, 11:36 AM IST
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿರುವ ನಗುವನಳ್ಳಿ ಗೇಟ್ನ ಡಾಬಾವೊಂದರಲ್ಲಿ ನಡೆಯುತ್ತಿದ್ದ ಭಾರೀ ವೇಶ್ಯಾವಾಟಿಗೆ ಅಡ್ಡೆಯ ಮೇಲೆ ಶನಿವಾರ ತಡರಾತ್ರಿ ಮಂಡ್ಯ ಎಸ್ಪಿ ರಾಧಿಕಾ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ 22 ಮಂದಿಯನ್ನು ಬಂಧಿಸಿದ್ದು, 7 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಕಾರ್ಯಾಚರಣೆ ವೇಳೆ ಮಹಿಳೆಯರನನ್ನು ಅಡಗಿಸಿಡಲುನಿರ್ಮಿಸಲಾಗಿದ್ದ ಸುರಂಗಗಳೂ ಪತ್ತೆಯಾಗಿವೆ. ರಕ್ಷಣೆಗೊಳಗಾದ ಮಹಿಳೆಯರು ಬಾಂಗ್ಲಾ, ಮುಂಬಯಿ ಮತ್ತು ಕೋಲ್ಕತಾ ಮೂಲದವರು ಎಂದು ವರದಿಯಾಗಿದೆ.
ಇದೇ ಡಾಬಾದ ಮೇಲೆ 10 ವರ್ಷದ ಹಿಂದೆ ದಾಳಿ ಮಾಡಲಾಗಿತ್ತಾದರೂ ಕೆಲ ವರ್ಷಗಳಿಂದ ಮತ್ತೆ ಮಾಂಸ ದಂಧೆ ಶುರುವಾಗಿತ್ತು ಎನ್ನಲಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಎಸ್ಪಿಯೇ ದಾಳಿಗಿಳಿದಿದ್ದಾರೆ ಎನ್ನಲಾಗಿದೆ.
ಶ್ರೀರಂಗ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ