ಶ್ರೀರಂಗಪಟ್ಟಣ : ಪರ್ಸಂಟೇಜ್ ಗಾಗಿ ಪಿಡಿಓಗಳಿಗೆ ಕಿರುಕುಳ ನೀಡುತ್ತಿದ್ದ ಅಧಿಕಾರಿಯ ಅಮಾನತು
Team Udayavani, Feb 3, 2022, 1:31 PM IST
ಶ್ರೀರಂಗಪಟ್ಟಣ : ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಪರ್ಸಂಟೆಜ್ ಗಾಗಿ ಕಿರುಕುಳ ನೀಡುವ ಶ್ರೀರಂಗಪಟ್ಟಣ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭೈರಪ್ಪನನ್ನು ಅಮಾನತು ಮಾಡಲು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿ ಯೋಜನೆಯಲ್ಲಿ ತನಗೆ ಪರ್ಸಂಟೇಜ್ ನೀಡದಿದ್ದರೆ ತೊಂದರೆ ಕೊಟ್ಟು ಮೇಲಧಿಕಾರಿಗೆ ದೂರು ಕೊಡುವ ಎಚ್ಚರಿಕೆ ನೀಡುತ್ತಿದ್ದ ಭೈರಪ್ಪ ಕಾಮಗಾರಿ ಹಾಗೂ ಯೋಜನೆಗಳ ಬಿಲ್ ಮಂಜೂರು ಮಾಡಲು ಪರ್ಸಂಟೇಜ್ ಕೊಡಬೇಕು ಪರ್ಸಂಟೆಜ್ ನೀಡಲಿಲ್ಲ ಎಂದರೆ ಬಿಲ್ ಪಾಸ್ ಮಾಡಲ್ಲ ಎಂಬ ಬೆದರಿಕೆ ಬೇರೆ ಹಾಕ್ತಾರಂತೆ. ಶೇ.4ರಿಂದ ಶೇ.20ರಷ್ಟು ಪರ್ಸಂಟೆಜ್ಗೆ ಪೀಡಿಸುವ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಇ- ಸ್ವತ್ತು ಮಾಡಿಸುವವರಿಂದ ಹಣ ಪಡೆದು ತನಗೂ ಕೊಡಿ ಎನ್ನುತಾನಂತೆ ಇದರಿಂದ ರೋಸಿಹೋದ ಶ್ರೀರಂಗಪಟ್ಟ ಣ ತಾಲೂಕು ವ್ಯಾಪ್ತಿಯ ಪಿಡಿಓ ಗಳು ಗಂಭೀರ ಆರೋಪ ಮಾಡಿದ್ದರು.
ಈ ಕುರಿತು ಮಾಧ್ಯಮಗಳಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಸಚಿವ ಕೆ. ಎಸ್. ಈಶ್ವರಪ್ಪ ಅವರು ಅಧಿಕಾರಿಯನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಜೇಮ್ಸ್ ಡಬ್ಬಿಂಗ್ ಮುಗಿಸಿದ ಶಿವರಾಜ್ ಕುಮಾರ್;ಅಪ್ಪು ವಾಯ್ಸ್ ಉಳಿಸಿಕೊಳ್ಳಲು ಶತಪ್ರಯತ್ನ