ಅಂಬರೀಶ್ ಜೆಡಿಎಸ್ಗೆ ಬಂದರೆ ಸ್ವಾಗತ: ಎಚ್ಡಿಕೆ
Team Udayavani, Apr 26, 2018, 7:20 AM IST
ಮದ್ದೂರು: “ಅಂಬರೀಶ್ ಅಜಾತ ಶತ್ರು. ಕಾಂಗ್ರೆಸ್ನಲ್ಲಿದ್ದರೂ ಜೆಡಿಎಸ್ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಪಕ್ಷ ಸೇರುವುದಾದರೆ ಮುಕ್ತವಾಗಿ ಸ್ವಾಗತಿಸುತ್ತೇನೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಅಂಬರೀಶ್ಗೆ ಹಿಂದಿನಿಂದಲೂ ದೇವೇಗೌಡರ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿದೆ.
ಅದಕ್ಕಾಗಿಯೇ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅವರು ಮತ್ತು ತಾವು ಅಣ್ಣ-ತಮ್ಮಂದಿರಿದ್ದಂತೆ ಎಂದರು. “ಅಂಬರೀಶ್ ಚುನಾವಣಾ ರಾಜಕಾರಣದಿಂದಷ್ಟೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಕ್ರಿಯ ರಾಜಕಾರಣದಿಂದ ಅವರಿನ್ನೂ ದೂರವಾಗಿಲ್ಲ. ಜೆಡಿಎಸ್ ಸೇರ್ಪಡೆ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆಸಿಲ್ಲ. ಅವಕಾಶ ಬಿದ್ದರೆ ಅಂಬರೀಶ್ ಅವರನ್ನು ನೇರವಾಗಿ ಭೇಟಿ ಮಾಡುತ್ತೇನೆ ಎಂದರು.