ಅಕ್ರಮ ಸಂಬಂಧವಿರುವಂತೆ ಫೋಟೋ: ಪ್ರಶ್ನಿಸಿದ ಮಹಿಳೆಗೆ ವಕೀಲನಿಂದ ಕೊಲೆ ಬೆದರಿಕೆ
ದೂರು ದಾಖಲು; ವಕೀಲನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಕೆ
Team Udayavani, Jul 13, 2023, 9:06 PM IST
ಪಿರಿಯಾಪಟ್ಟಣ: ವಕೀಲರೊಬ್ಬರು ತನ್ನ ಹಾಗೂ ಆತನ ಅಳಿಯನ ಫೋಟೋ ಎಡಿಟ್ ಮಾಡಿ ನ್ಯಾಯಾಲಯಕ್ಕೆ ಸುಳ್ಳು ದೂರು ದಾಖಲಿಸಿದ್ದರು ಈ ಬಗ್ಗೆ ಪ್ರಶ್ನೆ ಮಾಡಿದ ನನಗೆ ಕೊಲೆ ಬೆದರಿಕೆ ಹಾಕಿ ನಿಂಧಿಸಿರುವ ವಕೀಲರ ವಿರುದ್ದ ಪೋಲಿಸ್ ಠಾಣೆಗೆ ದೂರು ನೀಡಿದ ಪರಿಣಾಮ ನ್ಯಾಯಾಲಯಕ್ಕೆ ಅವರ ದೋಷಾರೋಪಣೆ ಸಲ್ಲಿಸಲಾಗಿದೆ ಎಂದು ಸಂತ್ರಸ್ತ ಮಹಿಳೆ ಕೀರ್ತಿ ತಿಳಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಬೆಂಗಳೂರಿನ ನಿವಾಸಿಯಾಗಿದ್ದು, ಪ್ರವೀಣ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿದ್ದು, ಕಾರ್ಯಕ್ರಮವೊಂದರಲ್ಲಿ ನಾನು ಪತಿ ಪ್ರವೀಣ್ ಹಾಗೂ ಅವರ ಸ್ನೇಹಿತ ಸುಪ್ರಿತ್ ವಿ.ರಾವ್ ಎಂಬುವವರು ಒಟ್ಟಿಗೆ ತೆಗೆಸಿದ ಗ್ರೂಪ್ ಪೋಟೋವನ್ನು ಪಿರಿಯಾಪಟ್ಟಣದ ಹಿರಿಯ ವಕೀಲ ಸಿ.ಕೆ.ಮಂಜುನಾಥ್ ಎಂಬುವವರು ನನ್ನ ಹಾಗೂ ಆತನ ಮಗಳ ಗಂಡ ಸುಪ್ರಿತ್ ವಿ.ರಾವ್ ರವರೊಂದಿಗೆ ಅಕ್ರಮ ಸಂಬಂಧವಿರುವಂತೆ ಫೋಟೋ ಎಡಿಟ್ ಮಾಡಿ ಮೈಸೂರಿನ 8 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ತ್ರ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುತ್ತಾರೆ. ಈ ವಿಷಯ ತಿಳಿದು ವಕೀಲ ಸಿ.ಕೆ.ಮಂಜುನಾಥ್ ರವರನ್ನು ಪ್ರಶ್ನಿಸಲು ಅವರ ಮನೆಯ ಬಳಿ ಹೋದಾಗ ಮಂಜುನಾಥ್ ಆತನ ಪತ್ನಿ ಜಯಲಕ್ಷ್ಮೀ , ಮಗಳು ಪದ್ಮಿನಿ ಎಂಬುವವರು ನಮಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಈ ಬಗ್ಗೆ ನಾನು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದಾಗ ಅವರ ಐಪಿಸಿ ಸಕ್ಪನ್ 504, 354, 323, 506, 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿರುತ್ತಾರೆ.
ಇದರಿಂದ ರೋಷಗೊಂಡ ವಕೀಲ ಮಂಜುನಾಥ್ ತನ್ನ ಹಿರಿಯ ಅಳಿಯ ಭಾರಧ್ವಜ್ ಹಾಗೂ ಆತನ ಸಹಚರರನ್ನು ನನ್ನ ತಾಯಿಯ ಊರಾದ ಚಿಕ್ಕಮಗಳೂರಿನ ಕಳಸಕ್ಕೆ ನಾನು ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಕಳುಹಿಸಿ ದೂರನ್ನು ಹಿಂಪಡೆಯುವಂತೆ ಇಲ್ಲದಿದ್ದರೆ ನೀನು ಹಾಗೂ ನಿನ್ನ ಗಂಡನಾದ ಪ್ರವೀಣ್ ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆದ್ದರಿಂದ ನಮಗೆ ರಕ್ಷಣೆ ಬೇಕಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸುಪ್ರಿತ್ ವಿ.ರಾವ್, ನಿರಂಜನ್ ಹಾಜರಿದ್ದರು.