ಪಿರಿಯಾಪಟ್ಟಣ: ಬಸ್ ಢಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು
Team Udayavani, Jan 31, 2022, 6:43 PM IST
ಪಿರಿಯಾಪಟ್ಟಣ: ಹುಣಸೂರಿನ ಕಳ್ಳಬೆಟ್ಟ ಜಂಕ್ಷನ್ ಬಳಿ ಮಡಿಕೇರಿ-ವಿರಾಜಪೇಟೆಗೆ ತೆರಳುವ ಮಾರ್ಗಮದ್ಯದಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಮಂಜು (50) ಮೃತ ದುರ್ಧೈವಿ.
ಸೋಮವಾರ 12 ಗಂಟೆಯ ಸಮಯದಲ್ಲಿ ಪಿರಿಯಾಟ್ಟಣದಿಂದ ಮೈಸೂರಿಗೆ ಬೈಕಿನಲ್ಲಿ ತೆರಳುತ್ತಿರುವಾಗ ಹುಣಸೂರಿನ ಕಳ್ಳಬೆಟ್ಟದ ಬಳಿ ಹಿಂದಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಜು ಅವರಿಗೆ ಪತ್ನಿ ರುಕ್ಮಿಣಿ ಸೇರಿದಂತೆ ದಿವ್ಯಾ ಮತ್ತು ಅಂಬಿಕಾ ಎಂಬ ಇಬ್ಬರು ಮಕ್ಕಳಿದ್ದು ಪ್ರಕರಣ ಕುರಿತು ಹುಣಸೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.