ಆಟಗಾಯಿ- ಕಥಾ ಸಂಕಲನ ಬಿಡುಗಡೆ


Team Udayavani, Jun 6, 2022, 5:18 PM IST

ಆಟಗಾಯಿ- ಕಥಾ ಸಂಕಲನ ಬಿಡುಗಡೆ

ಮೈಸೂರು: ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯವನ್ನು ಮಾತ್ರ ಓದಿಕೊಂಡಿರುವವರು ಮಾತ್ರವಲ್ಲದೇ, ವೃತ್ತಿಪರರು, ಬೇರೆ ಕ್ಷೇತ್ರದವರೂ ಬರೆಯುತ್ತಿರುವುದರಿಂದ ಹೊಸ ಅನುಭವ, ದೃಷ್ಟಿಕೋನ ಬಂದಿದೆ ಎಂದು ಕಥೆಗಾರ ಕೇಶವ ಮಳಗಿ ತಿಳಿಸಿದರು.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಂಕಥನ ಪ್ರಕಾಶನ ಹೊರ ತಂದಿರುವ ಆನಂದ್‌ ಗೋಪಾಲ್‌ ಅವರ ಆಟಗಾಯಿ- ಕಥಾ ಸಂಕಲನವನ್ನು ಅವರು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಕಥೆಗಾರ ಆನಂದ್‌ ಗೋಪಾಲ್‌ ಅವರಲ್ಲಿ ಅಪಾರವಾದ ಕಥಾ ಸಾಮರ್ಥ್ಯವಿದ್ದು, ಗಟ್ಟಿ ಕಥೆಗಾರರಾಗಿದ್ದಾರೆ. ಕಥಾ ವಸ್ತುವಿನಲ್ಲಿ ವೈವಿಧ್ಯತೆ ಇದೆ. ಅವರಿಂದ ಮತ್ತಷ್ಟು ಗಟ್ಟಿಯಾದ ಕಥೆಗಳು ಬರಲಿ ಎಂದು ಶುಭ ಹಾರೈಸಿದ ಅವರು, ಕಥೆಗಾರರು ಜನಪ್ರಿಯ ಸಂಸ್ಕೃತಿ, ಸಿದ್ಧ ಮಾದರಿ ಕಥೆಗಳಿಗೆ ಜೋತು ಬೀಳಬಾರದು ಎಂದು ಕಿವಿಮಾತು ಹೇಳಿದರು.

ಪ್ರತಿ 50 ವರ್ಷಕ್ಕೊಮ್ಮೆ ಸಮಾಜವು ಯೌವ್ವನಕ್ಕೆ ಹೋಗುತ್ತದೆಂದು ಸಮಾಜಶಾಸ್ತ್ರಜ್ಞರು ಹೇಳಿದ್ದಾರೆ. ಹಾಗೆಯೇ, ಪ್ರತಿ 25 ವರ್ಷಕ್ಕೆ ಸಮಾಜವು ಸಮಗ್ರವಾಗಿ ಬದಲಾಗುತ್ತಿದೆ. ಈಗಿನ ಸಮಾಜವು ತರುಣರಿಗೆ ಸೇರಿದೆ. 70- 80ರ ದಶಕದ ಸಮಾಜಕ್ಕೂ 2000 ದಶಕದ ನಂತರ ಸಮಾಜಕ್ಕೂ ಸಾಮಥ್ಯ ಇದೆ ಎಂದರು. ಪ್ರಸ್ತುತ ತರುಣ, ತರುಣಿಯರಿಂದಲೇ ಹೊಸ ವಿಚಾರ, ಜಗಳ, ವಾಗ್ವಾದ ಆಗಬೇಕು. 70- 80ರ ದಶಕದಲ್ಲಿ ನಿರುದ್ಯೋಗ ಸಮಸ್ಯೆ ವಿಪರೀತ ಇತ್ತು. ಜೊತೆಗೆ ಜಾತೀಯತೆ, ಆರ್ಥಿಕ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ಆದರೆ, ಈಗಿನ ಕಲಿಕೆ ವಿಧಾನ, ಜೀವನ ನೋಡುವ ವಿಧಾನವು ಬದಲಾಗಿದೆ. ಹಿಂದೆ ಸಿದ್ಧಾಂತದ ಭಾರವಿತ್ತು. ಈಗ ಸಾಮಾಜಿಕ ಜಾಲತಾಣಗಳಿಂದ ಅತಿರೇಕದ ಭಾರ ಇದೆ ಎಂದು ಅವರು ಹೇಳಿದರು.

ಸಮಕಾಲೀನ ವಿಚಾರಗಳನ್ನು ಬರೆಯಬೇಕು: ಕೃತಿ ಕುರಿತು ಬರಹಗಾರ ಚ.ಹ.ರಘುನಾಥ ಮಾತನಾಡಿ, ಕಥೆಗಾರರು ಬರೆದ ಕಥೆಯನ್ನು ಮತ್ತೂಮ್ಮೆ ಓದದೇ, ಲೈಕ್‌, ಶೇರ್‌ಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವುದರಿಂದ ಆ ಕಥೆಗಳು ಕಳೆದು ಹೋಗುತ್ತವೆ. ಈಗಿನ ಓದುಗರು ಸಮಕಾಲೀನ ವಿಚಾರಗಳನ್ನು ಬರೆಯಬೇಕೆಂದು ಭಾವಿಸುತ್ತಾರೆ. ಬರಹಗಾರರು ವರ್ತಮಾನದ ಆಗುಹೋಗುಗಳಿಗೆ ತಕ್ಕಂತೆ ಬರೆಯುವ ಸೃಜನಶೀಲತೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಲೇಖಕಿ ಶೈಲಜಾ ನಾಗರಘಟ್ಟ, ಕೃತಿಯ ಕರ್ತೃ ಆನಂದ್‌ ಗೋಪಾಲ್‌ ಇದ್ದರು.

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.