Ganesh Chaturthi ಮೈಸೂರಿನಲ್ಲಿ ಗಮನ ಸೆಳೆಯುತ್ತಿರುವ ಚಂದ್ರಯಾನ ಗಣಪತಿ
Team Udayavani, Sep 18, 2023, 7:48 PM IST
ಮೈಸೂರು: ಮೂರ್ತಿಯ ರೂಪದಲ್ಲೂ ಅನಾವರಣಗೊಂಡ ಚಂದ್ರಯಾನ-3 ಗಣಪತಿ. ಚಂದ್ರಯಾನದ ವಿವಿಧ ಆಯಾಮಗಳಿಗೆ ಮೂರ್ತಿ ರೂಪದಲ್ಲಿ ಅಂತಿಮ ಸ್ಪರ್ಶ ನೀಡಿದ್ದಾರೆ. ದೇವರಾಜ ಮೊಹಲ್ಲಾದ ಕೊತ್ತಾಲ್ ರಾಮಯ್ಯ ರಸ್ತೆಯ ರಾಮಮಂದಿರದ ಬಳಿ ಗಣಪತಿ ಮೂರ್ತಿ ಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಚಂದ್ರಯಾನ 3 ರ ಉಪಗ್ರಹ ಭೂಮಿಯ ಕಕ್ಷೆಯಿಂದ ಉಡಾವಣೆಗೊಂಡು ಚಂದ್ರನ ಕಕ್ಷೆ ಸೇರಿದ ಬಳಿಕ ವಿಕ್ರಮ್ ಲ್ಯಾಂಡರ್ ರೋವರ್ ಹೊರಬಂದು ಕಾರ್ಯಾಚರಣೆ ಮಾಡಿದ್ದನ್ನು ಬಿಂಬಿಸುವ ರೀತಿ ಚಿತ್ರ ಬಿಡಿಸಿರುವ ಕಲಾವಿದ ಮಂಜು.
ಕಲಾವಿದ ಮಂಜುರವರ ಕುಂಚದಲ್ಲಿ ಮೂಡಿ ಬಂದಿರುವ ಚಂದ್ರಯಾನ-3 ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ.