ಕಾರಂಜಿ ಕೆರೆ ಆವರಣದಲ್ಲಿ ಕಾಂಕ್ರೀಟ್‌ ಕಾಮಗಾರಿ ಮಾಡದಿರಿ


Team Udayavani, Dec 18, 2019, 3:00 AM IST

karanji

ಮೈಸೂರು: ಕಾರಂಜಿ ಕೆರೆ ಆವರಣ ಸುಂದರವಾಗಿದೆ ಎಂದು ಕಾಂಕ್ರೀಟ್‌ ಹಾಕಿ ವನ್ಯ ಜೀವಿಗಳಿಗೆ ಧಕ್ಕೆ ತರದೇ ಕೆರೆ ಸಂರಕ್ಷಿಸಬೇಕು ಎಂದು ಜಲತಜ್ಞ ಯು.ಎನ್‌. ರವಿಕುಮಾರ್‌ ತಿಳಿಸಿದರು. ಮೈಸೂರು ಮೃಗಾಲಯ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವತಿಯಿಂದ ಕಾರಂಜಿ ಕೆರೆ ಆವರಣದಲ್ಲಿ ಆಯೋಜಿಸಿರುವ ಕಾರಂಜಿ ಕೆರೆ ಹಬ್ಬದ ಎರಡನೇ ದಿನವಾದ ಮಂಗಳವಾರ ಕೆರೆ ಸಂರಕ್ಷಣೆ ಕುರಿತು ಮಾತನಾಡಿದರು.

ಕೆರೆಗೆ ಚರಂಡಿ ನೀರು: ಮೈಸೂರು ನಗರದಲ್ಲಿ 80ರ ದಶಕದಲ್ಲಿ ಹಲವು ಕೆರೆಗಳು ಬತ್ತಿ ಹೋಗಿದ್ದವು. ಆಗ 90ರ ದಶಕದಲ್ಲಿ ಕೆರೆಗಳಿಗೆ ಒಳಚರಂಡಿ ನೀರು ಹರಿಸಲು ಪ್ರಾರಂಭಿಸಲಾಯಿತು. ಇದರಿಂದ ಕೆರೆಯಲ್ಲಿ ಕಲುಷಿತ ನೀರು ಹೆಚ್ಚುತ್ತಿದ್ದ ಕಾರಣ 2000ದಲ್ಲಿ ಒಳಚರಂಡಿ ನೀರು ಕೆರೆಗೆ ಬಾರದಂತೆ ನೋಡಿಕೊಳ್ಳಲಾಯಿತು. ಆದರೆ, ಇಂದಿಗೂ ಕೆಲ ಕೆರೆಗಳಿಗೆ ಒಳಚರಂಡಿ ನೀರು ಹರಿದು ಬರುತ್ತಿರುವುದನ್ನು ತಡೆಯಲು ಸಾಧ್ಯವಾಗಿಲ್ಲ ಎಂದರು.

ಕೆರೆಯಲ್ಲಿ ಜೋಂಡು ಬೆಳೆಯುವುದು ಕೆರೆಗೆ ಅಪಾಯ ಎನ್ನುತ್ತಾರೆ, ಅದು ಅಪಾಯವಲ್ಲ. ಕೆರೆಯಲ್ಲಿ ಜೋಂಡು ಬೆಳೆಯುವುದರಿಂದ ಕೆರೆಗೆ ಮತ್ತು ಅಲ್ಲಿನ ಜೀವರಾಶಿಗಳಿಗೆ ಉಪಯುಕ್ತತೆ ಇರುತ್ತದೆ. ಹಾಗೆಯೇ, ಕೆರೆಯಲ್ಲಿ ಮೀನುಗಾರಿಕೆ ಮಾಡುವುದರಿಂದಲೂ ಅಲ್ಲಿನ ಜೀವ ವೈವಿಧ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಿವರಿಸಿದರು.

ದೋಣಿ ವಿಹಾರ: ಕೆರೆಯ ಪಾರಂಪರಿಕತೆ ಕುರಿತು ಮಾತನಾಡಿದ ಇತಿಹಾಸ ತಜ್ಞ ಈಚನೂರು ಕುಮಾರ್‌, ಮೈಸೂರು ರಾಜಮನೆತನ ಕೆರೆಗಳ ಸಂರಕ್ಷಣೆಗೆ ಬಹಳ ಒತ್ತು ನೀಡಿತ್ತು. ಹಿಂದೆ ಅರಮನೆ ಸುತ್ತಲೂ ದೋಣಿ ವಿಹಾರ ನಡೆಸುವ ಸಲುವಾಗಿ ಕೆರೆ ನಿರ್ಮಿಸಲು ಸಯ್ನಾಜಿ ರಾವ್‌ ರಸ್ತೆಯಲ್ಲಿ ರಾಜಕಾಲುವೆ ನಿರ್ಮಿಸಲು ಮುಂದಾಗಿದ್ದರು. ಆ ಸಮಯದಲ್ಲಿ ಕೆ.ಆರ್‌.ವೃತ್ತದಲ್ಲಿ ಒಡೆಯಲಾಗದ ಬಂಡೆಯಿಂದ ಕಾಮಗಾರಿ ಸ್ಥಗಿತವಾಯಿತು.

ಕಾಲುವೆ ಪೂರ್ಣಗೊಳಿಸುವ ಕೆಲಸ ಕೈಗೂಡಲೇ ಇಲ್ಲ. ನಂತರ ಕಾಲುವೆ ನಿರ್ಮಾಣಕ್ಕಾಗಿ ತೋಡಿದ ಹಳ್ಳವನ್ನು ಮುಚ್ಚಲಾಯಿತು ಎಂದು ತಿಳಿಸಿದರು. ಅರಮನೆ ಬಳಿ ಪ್ರತಿನಿತ್ಯ ಹುಲಿ ಪ್ರತ್ಯಕ್ಷ ಆಗುತ್ತಿತ್ತು. ನಂತರದಲ್ಲಿ ಅದು ನಿಗೂಢವಾಗಿ ಕಣ್ಮರೆಯಾಯಿತು. ಇದರ ಸ್ಮರಣಾರ್ಥವಾಗಿ ಕಂಚಿನ ಲೋಹದಿಂದ 8 ಹುಲಿಗಳ ಶಿಲ್ಪ ಕೆತ್ತಿಸಲಾಗಿದೆ ಎಂದರು.

ಹಿಂದೆ ದೊಡ್ಡ ಕೆರೆ, ಜೀವನರಾಯನ ಕೆರೆ, ಸುಬ್ಬರಾಯನ ಕೆರೆಗಳಲ್ಲಿ ನೀರು ತುಂಬಿರುತ್ತಿತ್ತು. ಅವೆಲ್ಲ ಈಗ ಬರಿದಾಗಿವೆ. ಮುಂದೆ ಇಂತಹ ಕೆರೆ ನಿರ್ಮಿಸಲು ಸಾಧ್ಯವಿಲ್ಲ. ಹಾಗಾಗಿ ಇರುವ ಕೆರೆಗಳನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪರಿಸರ ಪ್ರಿಯರು ಕೆರೆ ಆವರಣದಲ್ಲಿ ಪರಿಸರ ನಡಿಗೆಯಲ್ಲಿ ಪಾಲ್ಗೊಂಡು, ಕೆರೆಯ ಆವರಣದಲ್ಲಿರುವ ನಾನಾ ಪ್ರಬೇಧಗಳ ಸಸ್ಯಗಳು, ಅವುಗಳ ಮೂಲ, ಅದರ ಪ್ರಯೋಜನದ ಬಗ್ಗೆ ತಿಳಿದುಕೊಂಡರು. ನಂತರ ದಟ್ಟ ಹಸಿರು ವಾತಾವರಣದ ನಡುವೆ ಸ್ವತ್ಛಂದವಾಗಿ ಹಾರುವ ಪಕ್ಷಿಗಳನ್ನು ವೀಕ್ಷಿಸಿ ಪಕ್ಷಿಪ್ರೇಮಿಗಳು ಮನ ತಂಪಾಗಿಸಿಕೊಂಡರು.

ಮೈಸೂರಿನ 69 ಕೆರೆ ಪೈಕಿ 42 ಕೆರೆ ಅಳಿವಿನ ಅಂಚಿನಲ್ಲಿ: ಮೈಸೂರಿನ ವಿವಿಧ ಭಾಗಗಳಲ್ಲಿ ಗುರುತಿಸಿದ್ದ 106 ಕೆರೆಗಳಲ್ಲಿ ಇಂದು 37 ಕೆರೆಗಳು ಕಣ್ಮರೆಯಾಗಿದ್ದು, 69 ಕೆರೆಗಳು ಮಾತ್ರ ಉಳಿದಿವೆ. ಅವುಗಳಲ್ಲಿ 42 ಕೆರೆಗಳು ಅಳಿವಿನ ಅಂಚಿನಲ್ಲಿದ್ದು, ಈ ಪೈಕಿ 2 ಕೆರೆಗಳು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿವೆ.

5 ಕೆರೆಗಳು ಮೈಸೂರು ತಾಲೂಕು ವ್ಯಾಪ್ತಿಗೆ ಬರುತ್ತವೆ ಎಂದು ಜಲತಜ್ಞ ಯು.ಎನ್‌. ರವಿಕುಮಾರ್‌ ವಿವರಿಸಿದರು. ಸದ್ಯಕ್ಕೆ ಉಳಿದಿರುವ 69 ಕೆರೆಗಳಲ್ಲಿ 35 ಕೆರೆಗಳು 10 ಖುತುವಿನಲ್ಲೂ ನೀರು ತುಂಬುವುದರಿಂದ ವರ್ಷಪೂರ್ತಿ ತುಂಬಿರಲಿವೆ. 6 ಕೆರೆಗಳಿಗೆ ಮಾತ್ರ ನೀರು ಬಾರದಂತಾಗಿದೆ. ಒಂದು ಕೆರೆ ಅಧ್ಯಯನ ಮಾಡಿದರೆ, ಜೀವಶಾಸ್ತ್ರ ಓದಿದಂತೆ, ಏಕೆಂದರೆ ಅಷ್ಟು ಬಗೆಯ ಸಹಸ್ರಾರು ಕೀಟ, ಸಸ್ಯ ಹಾಗೂ ಜೀವಿಗಳು ಅಲ್ಲಿರುತ್ತವೆ ಎಂದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.