ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು
Team Udayavani, Sep 20, 2021, 5:22 PM IST
ಮೈಸೂರು: ದಸರಾ ಸಿದ್ದತೆಯಲ್ಲಿರುವ ಮೈಸೂರು ಅರಮನೆಯಲ್ಲಿ ಹೆಣ್ಣಾನೆಯೊಂದು ರಂಪಾಟ ನಡೆಸಿದ ಘಟನೆ ಸೋಮವಾರ ನಡೆದಿದೆ.
ಜಮಿನಿ ಎಂಬ ಹೆಣ್ಣಾನೆಯೊಂದು ತನ್ನ ಸಂಕೋಲೆ ಕಿತ್ತುಕೊಂಡು ಕೆಲಕಾಲ ರಂಪಾಟ ನಡೆಸಿತು. ಜಮಿನಿ ಆನೆಯ ರಂಪಾಟದಿಂದ ಅರಮನೆ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ:ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಅರಮನೆಯಲ್ಲೆ ಇರುವ ಹೆಣ್ಣಾನೆ ಜಮಿನಿಯನ್ನು ನಿಯಂತ್ರಿಸಲು ಮಾವುತರು, ಕಾವಾಡಿಗರು ಹರಸಾಹಸ ಪಡಬೇಕಾಯಿತು. ಕೊನೆಗೆ ದಸರಾ ಅಭಿಮನ್ಯು, ಧನಂಜಯ ಆನೆಗಳ ಮೂಲಕ ನಿಯಂತ್ರಣ ಮಾಡಲಾಯಿತು.