ಯಾವ ಪುರುಷಾರ್ಥಕ್ಕೆ ಎಚ್ಡಿಕೆ ಸರ್ಕಾರ ಬೀಳಿಸಿದ್ದೇವೊ ಅನ್ನಿಸುತ್ತಿದೆ
ಬಿಎಸ್ವೈ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟತೆ
Team Udayavani, Mar 21, 2021, 7:37 PM IST
ಮೈಸೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟತೆ ನೋಡಿದ್ರೆ, ನಾವೆಲ್ಲಾ ದಂಗೆ ಎದ್ದು ಯಾವ ಪುರುಷಾರ್ಥಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಿದ್ದೇವೊ ಅನ್ನಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಭ್ರಷ್ಟಾ ಚಾರ ಎಲ್ಲೆ ಮೀರಿದೆ. ಭ್ರಷ್ಟಾಚಾರ ಮಾತ್ರವಲ್ಲದೆ ಸಿಡಿ ಕೇಸ್ ನಲ್ಲಿ ಕೂಡ ಅಡ್ಜೆಸ್ಟ್ಮೆಂಟ್ ನಡೆ ಯುತ್ತಿದೆ. ಇದು ಒಬ್ಬರಿ ಗೊಬ್ಬರು ಅಡ್ಜೆಸ್ಟ್ ಮಾಡಿಕೊಳ್ಳುತ್ತಿರುವ ಯಡಿಯೂರಪ್ಪ ಅವರ ನ್ಯಾಷನಲ್ ಗೌರ್ನಮೆಂಟ್.
ಸಿದ್ದರಾಮಯ್ಯ ಅವರು ತಮ್ಮ ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ ಮುಚ್ಚಿ ಹಾಕಲು ಸಿಎಂ ಜೊತೆ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ- ಕುಮಾರಸ್ವಾಮಿ ಪರಸ್ಪರರನ್ನು ರಕ್ಷಣೆ ಮಾಡಿ ಕೊಳ್ಳು ತ್ತಿದ್ದಾರೆ. ಇಬ್ಬರೂ ಸೇರಿಕೊಂಡು ಯಡಿಯೂರಪ್ಪ ಅವರನ್ನು ರಕ್ಷಿಸುತ್ತಿದ್ದಾರೆ. ಇದು ಒಬ್ಬೊರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.