ಹುಣಸೂರು : ರಾತ್ರಿ ಇಡೀ ಸುರಿದ ಜಡಿ ಮಳೆಗೆ ಬಡಾವಣೆಗಳು ಜಲಾವೃತ, ಜನರ ಪರದಾಟ
Team Udayavani, Oct 10, 2022, 8:51 AM IST
ಹುಣಸೂರು : ರಾತ್ರಿ ಇಡೀ ಸುರಿದ ಮಳೆಗೆ ನಗರದ ಸಾಕೇತ, ಮಂಜುನಾಥ ಬಡಾವಣೆಯ ಕೆಲ ರಸ್ತೆಗಳು ಜಲಾವೃತವಾಗಿದ್ದು ಜನರು ಪರದಾಡುವಂತಾಗಿದೆ.
ಸಾಕೇತ ಬಡಾವಣೆಯ ಬೀದಿಗಳಲ್ಲಿ ರಸ್ತೆಯೂ ಇಲ್ಲ, ಚರಂಡೀಯೂ ಇಲ್ಲದೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದ್ದು. ಗಲೀಜು ನೀರು ತಗ್ಗು ಪ್ರದೇಶದ ಮನೆಯೊಳಕ್ಕೂ ನುಗ್ಗಿದೆ. ಇದೇ ಬಡಾವಣೆ ಪಕ್ಕದ ವಳ್ಳಮ್ಮನಕಟ್ಟೆ ತುಂಬಿ ರಾಜ ಕಾಲುವೆಯಲ್ಲಿ ಹರಿಯಬೇಕಾಗಿದ್ದ ನೀರು ಬಡಾವಣೆ ನಿರ್ಮಿಸಿದವರು ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರಿಂದಾಗಿ ನೀರಿನ ಹರಿವಿಗೆ ಸಮರ್ಪಕ ಕಾಲುವೆ ಇಲ್ಲದೆ ಬಡಾವಣೆಯ ಹಳ್ಳಗಳಲ್ಲಿ ನೀರು ತುಂಬಿಕೊಂಡಿದೆ.
ಈ ವರ್ಷದಲ್ಲಿ ಮೂರನೇ ಬಾರಿಗೆ ಬಡಾವಣೆ ಜಲಾವೃತವಾಗಿದೆ. ಬಡಾವಣೆ ನಿವಾಸಿಗಳಿಂದ ತೆರಿಗೆ ವಸೂಲಿ ಮಾಡುವ ನಗರಸಭೆ ಅಧಿಕಾರಿಗಳು ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ಸಮರ್ಪಕ ರಸ್ತೆ, ಚರಂಡಿ ನಿರ್ಮಿಸಬೇಕೆಂದು ತಾಲೂಕು ಕ.ರ.ವೇ. ಅಧ್ಯಕ್ಷ ಪುರುಷೋತ್ತಮ್. ಬಡಾವಣೆ ನಿವಾಸಿಗಳಾದ ರವಿಶಂಕರ್, ನಾರಾಯಣ್, ವಾಸುಕಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ದೆಹಲಿಯಲ್ಲಿ ಭಾರಿ ಮಳೆ: ಕಟ್ಟಡ ಕುಸಿದು 3 ಮಂದಿ ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು