Hunsur: ಬಿರುಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಬೆಳೆ; ಲಕ್ಷಾಂತರ ರೂ ನಷ್ಟ
ಸೂಕ್ತ ಪರಿಹಾರಕ್ಕೆ ರೈತರ ಮನವಿ
Team Udayavani, Oct 30, 2023, 9:31 PM IST
ಹುಣಸೂರು: ತಾಲೂಕಿನಲ್ಲಿ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಮಳೆಗೆ ಹನಗೋಡು ಹೋಬಳಿಯಲ್ಲಿ ಮೂರು ಎಕರೆ ನೇಂದ್ರ ಬಾಳೆ ಬೆಳೆ ನೆಲಕಚ್ಚಿದ್ದು, ಎರಡು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಹನಗೋಡು ಹೋಬಳಿಯ ಬಿ.ಆರ್.ಕಾವಲು ಗ್ರಾಮದ ಚಲುವರಾಜ್ರಿಗೆ ಸೇರಿದ ಎರಡು ಎಕರೆ ಹಾಗೂ ಪ್ರಕಾಶ್ರ ಒಂದು ಎಕರೆ ನೇಂದ್ರ ಬಾಳೆಬೆಳೆ ಬಿರುಗಾಳಿ ಮಳೆಗೆ ಸಂಪೂರ್ಣ ಮುರಿದು ಬಿದ್ದು ನೆಲ ಕಚ್ಚಿದ್ದು, ಇನ್ನೇನು ಕಟಾವಿಗೆ ಬಂದಿದ್ದ ಫಲಭರಿತ ನೇಂದ್ರ ಬಾಳೆ ಬೆಳೆ ಒಂದೇ ರಾತ್ರಿಯಲ್ಲಿ ಬೀಸಿದ ಬಿರುಗಾಳಿಗೆ ಬೆಳೆ ನಾಶವಾಗಿದ್ದು ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕೆಂದು ತಾ.ಪಂ.ಮಾಜಿ ಸದಸ್ಯೆ ರೂಪ ನಂದೀಶ್ ಒತ್ತಾಯಿಸಿದ್ದಾರೆ. ಕಂದಾಯ ಅಧಿಕಾರಿಗಳು ಭೇಟಿ ಇತ್ತು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ನೊಂದ ರೈತರು ಮನವಿ ಮಾಡಿದ್ದಾರೆ.