Hunsur: ಸ್ಕೇಟಿಂಗ್ ಮೂಲಕ ಪುಟಾಣಿಗಳ ಕನ್ನಡ ಪ್ರೇಮ
ಕನ್ನಡದ ಬಾವುಟ ಹಿಡಿದು ಕಣ್ಮನ ಸೆಳೆದ ಪುಟಾಣಿಗಳು
Team Udayavani, Nov 1, 2023, 11:23 PM IST
ಹುಣಸೂರು : ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಅಂಗವಾಗಿ ಮಕ್ಕಳು ಕೆ.ಆರ್.ನಗರದಿಂದ ಹುಣಸೂರಿಗೆ ಸ್ಕೇಟಿಂಗ್ ಮೂಲಕ ಆಗಮಿಸಿ ಕನ್ನಡ ಪ್ರೇಮ ಮೆರೆದರು.
ಹುಣಸೂರು ಮತ್ತು ಕೆ.ಆರ್.ನಗರದಲ್ಲಿನ ಕಿಂಗ್ಸ್ ಕರಾಟೆ ಮತ್ತು ಸ್ಕೇಟಿಂಗ್ ಅಕಾಡೆಮಿಯ ಮುಖ್ಯಸ್ಥ ಮುಸಾವೀರ್ ಪಾಷಾ ನೇತೃತ್ವದಲ್ಲಿ ಆಯೋಜಿಸಿದ್ದ ಸ್ಕೇಟಿಂಗ್ ಮೂಲಕ 15 ಬಾಲಕರು ಮತ್ತು 15 ಮಂದಿ ಬಾಲಕಿಯರು ಸೇರಿದಂತೆ 30 ಪುಟಾಣಿಗಳು ಕೈಯಲ್ಲಿ ಕನ್ನಡದ ಬಾವುಟ ಹಿಡಿದು ಕೇವಲ ಒಂದು ಗಂಟೆ ಅವಧಿಯಲ್ಲಿ ಹುಣಸೂರಿಗೆ ಆಗಮಿಸಿ ಕನ್ನಡ ಹಬ್ಬದ ಮೆರವಣಿಗೆಯಲ್ಲಿ ಬಾಗವಹಿಸಿದ್ದರು.
ನಗರಸಭಾ ಮೈದಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಕ್ಕಳು ಸ್ಕೇಟಿಂಗ್ ಮೂಲಕ 20 ಕಿ.ಮೀ. ಕ್ರಮಿಸಿ ಬಂದಿದ್ದನ್ನು ಕೊಂಡಾಡಿದ ಶಾಸಕ ಜಿ.ಡಿ.ಹರೀಶ್ಗೌಡರು ಮಕ್ಕಳನ್ನು ಅಭಿನಂದಿಸಿ, ಪ್ರಶಸ್ತಿ ಪತ್ರ ವಿತರಿಸಿದರು. ಮಾರ್ಗ ಮದ್ಯೆ ಕಟ್ಟೆಮಳಲವಾಡಿ ಹಾಗೂ ಗಾವಡಗೆರೆಯಲ್ಲಿ ಗ್ರಾಮಸ್ಥರು ಮಕ್ಕಳ ಕನ್ನಡ ಪ್ರೇಮವನ್ನು ಕೊಂಡಾಡಿ ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ