ವರನನ್ನು ಹುಡುಕಿಕೊಡುವ ನೆಪದಲ್ಲಿ ಅತ್ಯಾಚಾರ: ದೂರು
Team Udayavani, Dec 13, 2021, 3:11 PM IST
Representative Image used
ಕೊಳ್ಳೇಗಾಲ: ವರನನ್ನು ಹುಡುಕಿಕೊಡುವ ನೆಪದಲ್ಲಿ ಪುಸಲಾಯಿಸಿ ಅತ್ಯಾಚಾರದ ನಂತರ ಕೈಕೊಟ್ಟು ಪರಾರಿಯಾಗಿರುವ ಘಟ ನೆ ಸಂಬಂಧ ಪಟ್ಟಣ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ. ತಾಲೂಕಿನ ಹಳೆ ಅಣಗಳ್ಳಿ ಗ್ರಾಮದ ದೊರೆಸ್ವಾಮಿ(30) ಅತ್ಯಾಚಾರವೆಸಗಿದವ. ಈತ, ಯುವತಿಯ ತಾಯಿ ಅಕ್ಕನ ಮಗ ಆಗಿದ್ದಾನೆ.
ಪಟ್ಟಣದ ಆದರ್ಶನಗರ ಬಡಾವಣೆಯೊಂದರ ಯುವತಿಗೆ ವಧುವನ್ನು ಹುಡುಕಿಕೊಡುವ ನೆಪದಲ್ಲಿ ಪುಸಲಾಯಿಸಿ ಅತ್ಯಾಚಾರದ ಬಳಿಕ ಕೈಕೊಟ್ಟಿದ್ದಾನೆ. ಈ ಸಂಬಂಧ ಅತ್ಯಾಚಾರಕ್ಕೆ ಒಳಗಾದ ಯುವತಿ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ: ಯುವತಿಗೆ ವರನನ್ನು ಹುಡುಕಿಕೊಡುವ ನೆಪದಲ್ಲಿ ಮನೆಗೆ ಬಂದ ಆರೋಪಿ, ಯುವತಿಯನ್ನು ಬೇರೆಡೆಗೆ ಕರೆದುಕೊಂಡು ಹೋಗಲು ಪುಸಲಾಯಿಸಿ ಸ್ನೇಹಿತರ ಆಫೀಸಿಗೆ ಕರೆದುಕೊಂಡು ಹೋಗಿದ್ದನು.
ನಂತರ ಅವರ ಹಳೇ ಗ್ರಾಮದ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ಪ್ರಶ್ನಿಸಿದಾಗ, 10 ನಿಮಿಷದಲ್ಲಿ ಬರುತ್ತಾರೆಂದು ಉತ್ತರಿಸಿ ಯುವ ತಿಗೆ ಕುಡಿಯಲು ನೀರು ನೀಡಿದಾಗ ಪ್ರಜ್ಞಾಹೀನಳಾಗಿ ಬಿದ್ದಳು. ಈ ಸಂದರ್ಭದಲ್ಲಿ ಯುವತಿಯನ್ನು ವಿವಸ್ತ್ರಗೊಳಿಸಿ ಆರೋಪಿ ಅತ್ಯಾಚಾರವೆಸಗಿ, ಪ್ರಾಣ ಬೆದರಿಕೆವೊಡ್ಡಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಟ್ಟಣ ಠಾಣೆ ಪಿಎಸ್ಐ ಚೇತನ್ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.