ಕೋತಿ, ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಹಾಕಿ ‌


Team Udayavani, Jul 22, 2023, 3:32 PM IST

ಕೋತಿ, ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಹಾಕಿ ‌

ಎಚ್‌.ಡಿ.ಕೋಟೆ: ಪಟ್ಟಣದ ಹಾದಿ ಬೀದಿಗಳಲ್ಲಿ ಎಲ್ಲಿ ನೋಡಿದರೂ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ಬೀದಿ ನಾಯಿಗಳು, ಇದು ಸಾಲದು ಎಂಬಂತೆ ಕೋತಿಗಳ ಕಾಟದಿಂದ ಎಚ್‌.ಡಿ. ಕೋಟೆ ಜನತೆ ತತ್ತರಿಸಿ ಹೊಗಿದ್ದಾರೆ. ಈ ಸಮಸ್ಯೆ ದಿನೇ ದಿನೆ ಜಟಿಲವಾಗುತ್ತಿದ್ದರೂ ಇವುಗಳನ್ನು ಸೆರೆ ಹಿಡಿಸಿ ಜನರಲ್ಲಿ ನೆಮ್ಮದಿ ವಾತಾವರಣ ಕಲ್ಪಿಸಬೇಕಾದ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಮಾತ್ರ ಸಮಸ್ಯೆಗೂ ನಮಗೂ ಸಂಬಂಧವೇ ಇಲ್ಲದಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಪಟ್ಟಣದ ಎಲ್ಲಾ 23 ವಾರ್ಡುಗಳಲ್ಲಿಯೂ ಬೀದಿ ನಾಯಿ ಮತ್ತು ಕೋತಿಗಳು ಹಾವಳಿ ಹೆಚ್ಚಾಗಿದ್ದು, ಶಾಲೆಗೆ ತೆರಳುವ ಮಕ್ಕಳಿಂದ ಹಿಡಿದು ವಯೋವೃದ್ಧರನ್ನು ಸಹ ಬಿಡದ ಬೀದಿ ನಾಯಿಗಳು ದಾಳಿ ಮಾಡಿ ಇದುವರೆಗೂ ಅನೇಕರನ್ನು ಕಚ್ಚಿ ಆಸ್ಪತ್ರೆ ಸೇರುವಂತೆ ಮಾಡಿವೆ. ಇದು ಸಾಲದು ಎಂಬಂತೆ ನಿತ್ಯ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುವುದು ಹಾಗೂ ಅಡ್ಡ ಬರುವುದು ಮಾಡುವುದರಿಂದ ಅನೇಕ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಮನೆ ನುಗ್ಗುವ ಕೋತಿಗಳು: ಮನೆ ಹೊಕ್ಕುವ ಕೋತಿಗಳ ಕಾಟಕ್ಕೆ ಬೆಚ್ಚಿದ ನಿವಾಸಿಗಳು, ಮರದಲ್ಲಿ ರುವ ಎಳನೀರನ್ನು ಬಿಡ್ತಿಲ್ಲ, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕೋತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಬೀದಿ ನಾಯಿಗಳ ಉಪಟಳವನ್ನು ಮೀರಿಸುವಂತೆ ತಾಲೂಕು ಆಡಳಿತ ಸೌಧ ಸೇರಿದಂತೆ ಪಟ್ಟಣದ ಹಲವಾರು ಪ್ರದೇಶಗಳಲ್ಲಿ ತನ್ನ ಮರಿಗಳ ಸಹಿತ ಬೀಡು ಬಿಟ್ಟಿರುವ ಕೋಟಿಗಳ ಹಿಂಡು, ಪಟ್ಟಣದ ಮನೆ ಮನೆಗಳಲ್ಲಿ ಗೃಹಿಣಿ ಯರನ್ನು ಇನ್ನಿಲ್ಲದಂತೆ ಕಾಡುತ್ತಿವೆ.

ಒಂಟಿಯಾಗಿ ಮನೆಯಲ್ಲಿರಲು ಹೆದರು ಜನ: ಕೋತಿಗಳ ಹಾವಳಿ ಎಷ್ಟರ ಮಟ್ಟಿಗೆ ಮಿತಿಮಿರಿದೆ ಎಂದರೆ ಮನೆಗಳ ಹೆಂಚುಗಳನ್ನು ತೆಗೆದು ಕೆಳಗೆ ಬಿಸಾಡಿ ಹೊಡೆದು ಹಾಕಿ ಮನೆ ಒಳಹೊಕ್ಕು ಕೆಲ ಉಪಕರಣಗಳನ್ನು ಕಿತ್ತು ನಾಶ ಮಾಡುವುದಲ್ಲದೆ, ಆಡುಗೆ ಮನೆಯಲ್ಲಿ ಸಿಕ್ಕ ಸಿಕ್ಕ ಆಹಾರ ಸಾಮಗ್ರಿ, ತರಕಾರಿ, ದಿನಸಿ ಪದಾರ್ಥಗಳನ್ನು ತಿಂದು ಚೆಲ್ಲಾಡಿ ನಾಶಪಡಿಸುವುದರ ಜೊತೆಗೆ ಮನೆಯಲ್ಲಿರುವ ಹಣ್ಣು ಹಂಪಲು ಮತ್ತು ತಿಂಡಿ ತಿನಿಸುಗಳನ್ನು ಹೊತ್ತೂಯ್ಯುತ್ತಿವೆ. ಮನೆ ಹಿಂದೆ ಮುಂದೆ ಇರುವ ತೆಂಗಿನ ಮರದ ಎಳನೀರನ್ನು ಕಿತ್ತು ಕುಡಿದು ಬಿಸಾಡುತ್ತಿದ್ದು, ಕೋತಿಗಳ ಮೀತಿ ಮೀರಿದ ಹಾವಳಿಯಿಂದಾಗಿ ಇಲ್ಲಿನ ನಿವಾಸಿಗಳು ಮನೆಯಲ್ಲಿ ಒಂಟಿಯಾಗಿ ಇರಲು ಹೆದರುವ ವಾತಾವರಣ ಸೃಷ್ಟಿಯಾಗಿದೆ. ಈಗಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಬೀದಿನಾಯಿ ಮತ್ತು ಕೋತಿಗಳ ಮಿತಿಮಿರಿದ ಹಾವಳಿಯಿಂದ ಏನಾದರೂ ಅವಘಡ ಸಂಭವಿಸುವ ಮೊದಲೇ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಶಾಶ್ವತ ಪರಿಹಾರ ಹುಡುಬೇಕು.

ಶೀಘ್ರ ಕೋತಿ ಹಿಡಿಯುವ ತಂಡವನ್ನು ಕರೆಸಿಕೊಂಡು ಕೋತಿಗಳನ್ನು ಸೆರೆಹಿಡಿಸುತ್ತೇವೆ. ಆದರೆ ಸುಪ್ರೀಂ ಕೋರ್ಟ್‌ ಆದೇಶ ಪ್ರಕಾರ ಬೀದಿನಾಯಿಗಳನ್ನು ಸೆರೆ ಹಿಡಿದು ಬೇರೆ ಕಡೆ ಬಿಡುವಂತಿಲ್ಲ, ಕೊಲ್ಲುವಂತು ಇಲ್ಲ, ಅವುಗಳ ನಿಯಂತ್ರಣಕ್ಕೆ ಸಂತಾನಹರಣ (ಎಬಿಸಿ) ಚಿಕಿತ್ಸೆ ಒಳಪಡಿಸಲು ಅವಕಾಶವಿದೆ. ಆದರೆ ಇದಕ್ಕೆ ಹೆಚ್ಚಿನ ಅನುದಾನ ಬೇಕಿರುವುದರಿಂದ ಶೀಘ್ರದಲ್ಲೇ ಆಡಳಿತ ಮಂಡಳಿ ಒಪ್ಪಿಗೆ ಪಡೆದು ಬೀದಿ ನಾಯಿ ಮತ್ತು ಕೋತಿಗಳ ಹಾವಳಿ ನಿಯಂತ್ರಣಕ್ಕೆ ಶ್ರಮಿಸುತ್ತೇನೆ. ●ಸುರೇಶ್‌.ಪಿ, ಮುಖ್ಯಾಧಿಕಾರಿ, ಪುರಸಭೆ

ಎಚ್‌.ಡಿ.ಕೋಟೆಟ ಬಡಾವಣೆಯಲ್ಲಿ ಕೋತಿ ಮತ್ತು ಬೀದಿನಾಯಿಗಳ ಕಾಟ ಹೇಳತೀರದಾಗಿದೆ. ಕೋತಿಗಳಂತು ಮನೆ ನುಗ್ಗಿ ಅಡುಗೆ ಮನೆಗೆ ಹೋಗಿ ಸಿಕ್ಕ ಸಿಕ್ಕ ಪದಾರ್ಥಗಳನ್ನೆಲ್ಲ ತಿಂದು, ಚೆಲ್ಲಾಡಿ ಹೊತ್ತೋಯ್ಯುತ್ತಿವೆ. ನಮಗೆ ಸೇರಿದ 5 ತೆಂಗಿನ ಮರಗಳಲ್ಲಿ ಎಳನೀರನ್ನು ಕಿತ್ತು ಕೋತಿಗಳು ನಾಶಪಡಿಸುತ್ತಿದ್ದು ನಾನೇ ಅಂಗಡಿಯಲ್ಲಿ ತೆಂಗಿನಕಾಯಿ ಕೊಂಡುಕೊಳ್ಳುತ್ತಿದ್ದೇನೆ. ನಮ್ಮ ಬಡಾವಣೆ ಜನರೇ ಹಣ ನೀಡುತ್ತೇವೆ. ಮೊದಲು ಕೋತಿ, ಬೀದಿನಾಯಿಗಳಿಂದ ನಮಗೆ ಮುಕ್ತಿ ನೀಡಿ. ●ನಾಗಲಕ್ಷ್ಮೀ, ಗೃಹಣಿ, 7ನೇ ವಾರ್ಡ್‌

-ಬಿ.ನಿಂಗಣ್ಣಕೋಟ

ಟಾಪ್ ನ್ಯೂಸ್

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.