ವಿಶ್ವನಾಥ್ ಎಂದಿಗೂ ಒಂದ್ ಒಳ್ಳೆ ಸಲಹೆ ನೀಡಿಲ್ಲ
Team Udayavani, Jun 6, 2021, 6:38 PM IST
ಹುಣಸೂರು: ಮೈಸೂರಿನ ಇಬ್ಬರು ಐಎಎಸ್ಅಧಿಕಾರಿಗಳ ತಿಕ್ಕಾಟದ ಪರಿಸ್ಥಿತಿಯನ್ನು ಕೆಲವುಮೇಧಾವಿಗಳು, ಮಹಾನ್ ಬುದ್ಧಿವಂತರುತಿರುಚಲು ಯತ್ನಿಸುತ್ತಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಅರಸು ಕಲ್ಲಹಳ್ಳಿಗೆ ಶನಿವಾರ ಭೇಟಿನೀಡಿದ್ದ ವೇಳೆ ಈ ವಿವಾದದ ಹಿಂದೆ ಭೂಮಾμಯಾದವರ ಚಿತಾವಣೆ ಇದೆ ಎಂಬಆರೋಪವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದಸಚಿವರು, ಇದುವರೆಗೆ ಆ ಮಹಾನುಭಾವ ಒಂದೇಒಂದು ಒಳ್ಳೆಯ ಸಲಹೆ ಕೊಟ್ಟಿದ್ದನ್ನು ನೋಡಿದ್ದೀರಾಎಂದು ಎಚ್. ವಿಶ್ವನಾಥ್ಗೆ ಪರೋಕ್ಷವಾಗಿತಿರುಗೇಟು ನೀಡಿದರು.
ಈ ವಿವಾದವೀಗ ಮುಖ್ಯಮಂತ್ರಿಗಳಅಂಗಳದಲ್ಲಿದ್ದು, ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಂದ ಎಲ್ಲ ಮಾಹಿತಿ ಪಡೆದುಕೊಂಡಿದ್ದು, ಸೂಕ್ತತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.ವಿವಾದಕ್ಕೆ ಸಂಬಂಧಿಸಿದಂತೆ ಮಠದಲ್ಲಿ ಚರ್ಚೆಯಾಗಿರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದಸಚಿವರು, ಮಠದಲ್ಲಿ ಮೈಸೂರು ನಾಗರೀಕಸಮಿತಿಯವರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿಭಾಗಿಯಾಗಿದ್ದೆ. ಅಲ್ಲಿ ಯಾವುದೇ ಚರ್ಚೆಯಾಗಿಲ್ಲಎಂದು ಸ್ಪಷ್ಟನೆ ನೀಡಿದರು.