Mysore; ಸಿಎಂ ತವರಲ್ಲಿ ಇಲಿ ಹೆಗ್ಗಣಗಳ ವಾಸಸ್ಥಾನವಾದ ಅಂಗನವಾಡಿ
Team Udayavani, Dec 7, 2023, 12:28 PM IST
ಮೈಸೂರು: ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿರುವ ಅಂಗನವಾಡಿ ಕೇಂದ್ರವೊಂದು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಮುರಿದ ಗುಡಿಸಲಿನಲ್ಲಿ ಮಕ್ಕಳಿರಬೇಕಾದ ಪರಿಸ್ಥಿತಿಯಿದೆ.
ಮೈಸೂರಿನ ಬನ್ನಿಮಂಟಪದ ಎಲ್ಲಮ್ಮ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ನೆಲದ ಮಣ್ಣಿನಲ್ಲಿಯೇ ಆಡುವ ಮಕ್ಕಳು ಬಳಿಕ ಅಲ್ಲೇ ಆಹಾರ ಸೇವಿಸಬೇಕಾಗಿದೆ. ಸದ್ಯ ಜೋಪಡಿಯಂತಿದ್ದ ಗುಡಿಸಲ ನೆಲವನ್ನು ಇಲಿ, ಹೆಗ್ಗಣಗಳು ಕೊರೆದು ಹಾಕಿವೆ.
ಸುಮಾರು 60 ಮಕ್ಕಳ ಸಂಖ್ಯೆ ಬಲ ಹೊಂದಿರುವ ಅಂಗನವಾಡಿ ಕೇಂದ್ರಕ್ಕೆ ಪ್ರತಿ ನಿತ್ಯವೂ ಸುಮಾರು 25 ಮಕ್ಕಳು ಅಂಗನವಾಡಿಗೆ ಬರುತ್ತಿದ್ದಾರೆ. ಬಡವರ ಮಕ್ಕಳು ಬರುವ ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ.
ಸ್ವಚ್ಛ ನಗರಿ ಎಂದು ಹೇಳುವ ಅಧಿಕಾರಿಗಳು, ಪಾಲಿಕೆ ಎಲ್ಲಮ್ಮ ಬಡಾವಣೆಯ ಸ್ಲಮ್ ನಲ್ಲಿರುವ ಈ ಗುಡಿಸಲು ಅಂಗನವಾಡಿ ಕೇಂದ್ರದತ್ತ ಗಮನ ಹರಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ