ಸಿದ್ದು ಅವರದು ರಾಕ್ಷಸಿ ಪ್ರವೃತ್ತಿ: ಡಾ.ಕಲ್ಲಡ್ಕ ಪ್ರಭಾಕರ ಭಟ್
Team Udayavani, Sep 14, 2017, 6:40 AM IST
ಮೈಸೂರು: “ಸಿದ್ದರಾಮಯ್ಯ ಅವರದು ರಾಕ್ಷಸಿ ಪ್ರವೃತ್ತಿ’ ಎಂದು ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು.
ಸರ್ಕಾರ ಮಧ್ಯಾಹ್ನದ ಬಿಸಿಯೂಟ ಸರಬರಾಜು ನಿಲ್ಲಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಭಿûಾಂದೇಹಿ ಕಾರ್ಯಕ್ರಮದ ಮೂಲಕ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಶಾಲೆಗೆ ಮೈಸೂರಿಗರು ಸಂಗ್ರಹಿಸಿ ನೀಡಿದ 555 ಚೀಲ ಅಕ್ಕಿ ಸ್ವೀಕರಿಸಿ ಅವರು ಮಾತನಾಡಿದರು. “ರಾಜಕೀಯ ವಿಚಾರಗಳನ್ನಿಟ್ಟುಕೊಂಡು ಮಕ್ಕಳ ಜೊತೆ ಆಟ ಆಡಬಾರದು. ಅದರಲ್ಲೂ ಮಕ್ಕಳ ಹೊಟ್ಟೆಗೆ ಹೊಡೆಯುವಂತಹ ಕೆಲಸ ಮಾಡಬಾರದು. ಇಲ್ಲಿರುವ ಎಲ್ಲ ಜನರಿಗೆ ಅನ್ನ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ. ಸರ್ಕಾರ 3,500 ಮಕ್ಕಳಿಗೆ ಕೊಡುವ ಅನ್ನವನ್ನು ನಿಲ್ಲಿಸಿರುವುದು ಅಕ್ಷಮ್ಯ ಅಪರಾಧ. ರಾಕ್ಷಸಿ ಪ್ರವೃತ್ತಿ, ಅಧರ್ಮದ ಕೆಲಸ ಮಾಡಿದವರ ಹತ್ತಿರ ಮತ್ತೆ ಹೋಗಿ ನಿಲ್ಲುವ ಪ್ರಶ್ನೆಯೇ ಇಲ್ಲ. ಜನರ ಹತ್ತಿರ ಬೇಡುತ್ತೇನೆ’ ಎಂದು ಅವರು ಕಿಡಿ ಕಾರಿದರು.
ನನಗೆ ಗೌರಿಯಾಗಲಿ, ಅವರ ತಂದೆಯಾಗಲಿ ಗೊತ್ತಿಲ್ಲ. ಅವರ ಪತ್ರಿಕೆಯಲ್ಲಿ ನನ್ನ ವಿರುದ್ಧ ಬರೆದಿದ್ದರೂ ನನಗೆ ದುಃಖವಿಲ್ಲ. ಅವರು ಯಾವುದೋ ಒಂದು ವಿಚಾರದ ಆಧಾರದಲ್ಲಿ ಹೋಗುತ್ತಿದ್ದರು ಅನ್ನಿಸುತ್ತೆ.
– ಡಾ.ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಹಿರಿಯ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ