ಮಹಿಷ ದಸರಾ ಆಚರಣೆಗೆ ಯತ್ನ; 20 ಮಂದಿ ಬಂಧನ
Team Udayavani, Oct 5, 2019, 4:45 PM IST
ಮೈಸೂರು: ಮಹಿಷ ದಸರಾ ಆಚರಣೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆಯಿಂದ ಬೆಟ್ಟಕ್ಕೆ ಪ್ರತಿಭಟನಾ ಜಾಥಾ ಹೊರಟಿದ್ದ ಮಹಿಷ ದಸರಾ ಆಚರಣೆ ಸಮಿತಿಯ ಸುಮಾರು 20 ಮಂದಿ ಸದಸ್ಯರನ್ನು ಪೊಲೀಸರು ಶನಿವಾರ ಬಂಧಿಸಿದರು.
ಮತ್ತೆ ಕೆಲವರು ಬೆಟ್ಟದ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಯತ್ನಿಸಿದರು. ಇವರನ್ನೂ ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.