ಕೈಲಾಗದವನು ಮೈಪರಚಿಕೊಂಡ: ಸಿದ್ದರಾಮಯ್ಯಗೆ ಸೋಮಣ್ಣ ತಿರುಗೇಟು
Team Udayavani, Nov 2, 2019, 10:32 AM IST
ಮೈಸೂರು: ಕೈಲಾಗದವನು ಮೈಪರಚಿಕೊಂಡ ಎಂಬಂತೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ತಾವು ಮುಖ್ಯಮಂತ್ರಿ ಆಗಿದ್ದಾಗ ನೂರು ದಿನದಲ್ಲಿ ಏನು ಮಾಡಿದ್ದರು? ಎಂದು ಸಚಿವ ವಿ ಸೋಮಣ್ಣ ಪ್ರಶ್ನಿಸಿದರು.
ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಸಾಧನೆ ಶೂನ್ಯ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ ಮಾತನಾಡಿದ ಅವರು ಯಡಿಯೂರಪ್ಪ ನೂರು ದಿನಗಳಲ್ಲಿ ಅತೀವೃಷ್ಟಿ ಪೀಡಿತ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಅನುಭವದ ಕೊರತೆಯಿಂದಲೋ, ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಮೆಚ್ಚಿಸಲು ಕೆಲಸ ಮಾಡುವುದು ಬಿಟ್ಟು ಹಳೆಯ ಸಿದ್ದರಾಮಯ್ಯ ಆಗಿ ಹೇಳಿಕೆ ನೀಡಿದರೆ ಒಳ್ಳೆಯದು ಎಂದು ಸೋಮಣ್ಣ ಹೇಳಿದರು.