ವರುಣಾ: ನೋಟಾ ಅಭಿಯಾನ
Team Udayavani, Apr 27, 2018, 6:30 AM IST
ಮೈಸೂರು: ಯಡಿಯೂರಪ್ಪಪುತ್ರ ಬಿ.ವೈ.ವಿಜಯೇಂದ್ರಗೆ ವರುಣಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನೊಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಹೆಸರಲ್ಲಿ ಕ್ಷೇತ್ರದಲ್ಲೀಗ ನೋಟಾ ಅಭಿಯಾನ ಶುರುವಾಗಿದೆ.
ನೋಟಾ ಅಭಿಯಾನ ಕರಪತ್ರದಲ್ಲಿ “ಮಿ.ಅನಂತಕುಮಾರ್ ಹಾಗೂ ಸಂತೋಷ್, ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿದ ಒಂದೇ ಕಾರಣದಿಂದಾಗಿ ಚಾಮರಾಜ ನಗರ ಮತ್ತು ಮೈಸೂರು ಜಿಲ್ಲೆಯ ಸುಮಾರು 9 ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೂ ಭಂಗವಾಗಬಹುದು, ಇದು ನಿಮಗೆ ತಿಳಿಯಲಿಲ್ಲವೆ’ ಎಂದು ಪ್ರಶ್ನಿಸಲಾಗಿದೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಮಣ್ಣುಪಾಲು ಮಾಡಿದ ಇವರಿಬ್ಬರ ಗರ್ವಭಂಗಕ್ಕೆ ನೋಟಾ ಚಲಾವಣೆ ಅನಿವಾರ್ಯ ಎಂದು ಹೇಳಲಾಗಿದೆ.