ಜನಸೇವೆಯಲ್ಲೇ ಶಿವಪೂಜೆ ಕಂಡವರು ವಿಭೂತಿ ಪುರುಷರು


Team Udayavani, Feb 4, 2019, 7:24 AM IST

m2-janaseve.jpg

ಮೈಸೂರು: ಜನಸೇವೆಯಲ್ಲೇ ಶಿವಪೂಜೆಯನ್ನು ಕಂಡ ವಿಭೂತಿ ಪುರುಷರು ಈ ನೆಲದಲ್ಲಿ ದೇವರಾದರು, ನರ ನಾರಾಯಣನಾಗುವ ಸಾಧ್ಯತೆ ಇದ್ದರೆ ಅದು ಭಾರತದಲ್ಲಿ ಮಾತ್ರ. ಅದಕ್ಕೇ ಭಾರತವನ್ನು ಕರ್ಮಭೂಮಿ ಎಂದು ಕರೆಯಲಾಗುತ್ತೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್‌ ಹೆಗ್ಡೆ ಹೇಳಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ಸುತ್ತೂರಿನ ಈ ನೆಲದಲ್ಲಿ ವಿಭೂತಿ ಪುರುಷರು ನಡೆದಾಡುತ್ತಿದ್ದರು ಎಂಬುದೇ ಭಕ್ತಿ. ಭಾರತೀಯರಿಗೆ ಇಂದು ಸಭ್ಯತೆಯ ಪಾಠ ಹೇಳಿಕೊಡುವ ಪುಸ್ತಕಗಳ್ಯಾವುವು ಅಂದು ಬಿಡುಗಡೆಯಾಗಿರಲಿಲ್ಲ. ಆ ಸಂದರ್ಭದಲ್ಲೇ ಈ ನೆಲದಲ್ಲಿ ದೈವಿಕ ಪುರುಷರಿದ್ದರು, ಇತಿಹಾಸದ ಪುಟಗಳಿಗೇ ನನ್ನ ಬದುಕು ಬರೆದುಕೊಳ್ಳುವಂತೆ ಹೇಳಿದರು. ಇದೇ ಭಾರತದ ಹಿರಿಮೆ. ಈ ಪವಿತ್ರ ನೆಲದಲ್ಲಿ ಮಕ್ಕಳಾಗಿ ಹುಟ್ಟಿರುವ ನಾವು ಈ ನೆಲಕ್ಕೆ ಹಣೆಯನ್ನು ಸ್ಪರ್ಶ ಮಾಡುವುದೇ ಜೀವನದ ಧನ್ಯತೆ ಎಂದರು.

ಜಾತ್ರೆ ಎಂದರೆ ಮನರಂಜನೆ, ಉತ್ಸುಕತೆ, ಸಂಭ್ರಮ, ಸಡಗರ ಕೆಲವರಿಗೆ. ಆದರೆ ನಮ್ಮ ಹಿರಿಯರು ಸಾವಿರಾರು ಜನರು ಒಟ್ಟಿಗೆ ಸೇರಿಸಲು ಜಾತ್ರೆಗಳನ್ನು ಆರಂಭಿಸಿದರು. ಈ ರೀತಿ ಸಾವಿರಾರು ಜನರು ಒಟ್ಟಾಗಿ ಸೇರಿ ಆಚರಿಸುವುದೇ ಶಿವತ್ವ ಎಂದು ಅವರು ಹೇಳಿದರು. ಚಿತ್ರಗಳಲ್ಲಿ ಕಾಣುವ ಶಿವನಿಗೆ ರೂಪ ಕೊಟ್ಟಿರುವುದು ನಾವು. ಆದರೆ, ಶಿವನ ರೂಪ ಗಂಧ, ರಸವನ್ನೂ ಮೀರಿದ್ದು, ಧನಾತ್ಮಕವಾದ ಮಂಗಲಮಯವಾದ ಶಕ್ತಿಯೇ ಶಿವತ್ವ. ಧನಾತ್ಮಕತೆಯೆಡೆಗೆ ಹೆಜ್ಜೆ ಇಡುವುದು, ಧ್ಯಾನಸ್ಥ ಸ್ಥಿತಿಯಲ್ಲಿರುವುದೇ ಶಿವಪೂಜೆ.

ಧರ್ಮ ಎಂಬುದು ಅರ್ಥವಾಗದ ಶಬ್ದ, ನಿಘಂಟಲ್ಲ. ಅದೊಂದು ಬದುಕಿನ ಶೈಲಿ. ಬದುಕಿನ ಶೈಲಿ ಸಮಗ್ರವಾಗಿರುವುದೇ ಧರ್ಮ. ಇಂತಹ ಧರ್ಮದ ಹಾದಿಯಲ್ಲಿ ನಡೆದವರನ್ನು ವಿಭೂತಿ ಪುರುಷರೆಂದು ಗೌರವಿಸುತ್ತೇವೆ. ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಬದುಕಿದ್ದಾಗ ನಾವು ಇದ್ದೆವು ಎಂಬುದೇ ನಮ್ಮ ಜೀವನದ ಧನ್ಯತೆ ಎಂದು ಹೇಳಿದರು.

ದಯೆ ಧರ್ಮದ ಮೂಲ: ಉಪನ್ಯಾಸ ನೀಡಿದ ಮೈಸೂರು ಕ್ಯಾಥೋಲಿಕ್‌ ಧರ್ಮಪ್ರಾಂತ್ಯದ ರೆ.ಲೆಸ್ಲಿ ಮೊರಾಸ್‌, ದಯೆಯೇ ಧರ್ಮದ ಮೂಲವಯ್ಯ ಎಂದು ವಚನಕಾರರು ಹೇಳಿದ್ದಾರೆ. ಎಲ್ಲಾ ಧರ್ಮಗಳ ಸಾರವು ಇದೆ. ಈ ಪ್ರಪಂಚದಲ್ಲಿ ನಾವೆಲ್ಲರೂ ಯಾತ್ರಿಗಳು, ಹೀಗಾಗಿ ಪ್ರೀತಿ ಎಲ್ಲರಿಗೂ ಅಗತ್ಯ. ಧರ್ಮ, ಭಾಷೆ, ಸಂಸ್ಕೃತಿಗಳು ನಮ್ಮನ್ನು ವಿಭಜಿಸುತ್ತವೆ. ಸನ್ಮಾರ್ಗದಲ್ಲಿ ನಡೆದು ಪರೋಪಕಾರದಿಂದ ಕೈಲಾಸವನ್ನು ಕಾಣಬಹುದು. ಈ ಮೂಲಕ ಸಮಾಜವನ್ನು ಬೆಸೆಯಬಹುದು ಎಂದರು.

ಕೇಡು ಬಯಸಬೇಡಿ: ಕುಂದೂರು ಮಠದ ಡಾ.ಶರತಶ್ಚಂದ್ರ ಸ್ವಾಮೀಜಿ ಮಾತನಾಡಿ, ಧರ್ಮ ಎಂಬುದು ನಮ್ಮನ್ನು ಸುಮ್ಮನಿರಿಸುವ ಸಾಧನವಾಗದೆ ನಮ್ಮನ್ನು ಒಡೆದು ಜಗಳಗಳನ್ನು ತಂದಿಟ್ಟಿದೆ. ವಿಘಟನೆ ಇದ್ದ ಕಡೆ ಧರ್ಮ ಇರಲ್ಲ. ವಾದ-ವಿವಾದಗಳಿಂದ ಮೀರಿದ್ದು ಧರ್ಮ, ಮತ್ತೂಬ್ಬರಿಗೆ ಕೆಡಕು ಬಯಸಿದಿರುವುದೇ ಧರ್ಮ. ಆದರೆ, ಇಂದು ಧರಿಸಿದ ವೇಷದಂತೆ ಆಚರಣೆ ಇಲ್ಲದಿರುವುದೇ ಸಮಸ್ಯೆಯಾಗಿದೆ. ಕಾಷಾಯ ಧರಿಸಿದವರೆಲ್ಲ ಸನ್ಯಾಸಿಗಳಾಗಿರಲ್ಲ. ಖಾದಿ ಧರಿಸಿದವರೆಲ್ಲ ರಾಜಕಾರಣಿಗಳಾಗಿಲ್ಲದಿರುವುದು ದುರಂತ ಎಂದು ಅವರು ತಿಳಿಸಿದರು.

ಸುತ್ತೂರು ಶ್ರೀ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹುಬ್ಬಳ್ಳಿ ವರೂರಿನ ಶ್ರೀಕ್ಷೇತ್ರ ನವಗ್ರಹ ತೀರ್ಥ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ನ್ಯೂಜೆರ್ಸಿಯ ಅಂತಾರಾಷ್ಟ್ರೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಹಿರಿಯ ಉಪಾಧ್ಯಕ್ಷ ಡಾ.ಜೇಮ್ಸ್‌ ಸಿ.ಗ್ರಿಪಿಥ್ಸ್, ಶಾಸಕ ಅಮರೇಗೌಡ ಬಯ್ನಾಪುರ, ವಿಧಾನಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ, ಸಂಸದ ಎಲ್‌.ಆರ್‌.ಶಿವರಾಮೇಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿವರಾತ್ರೀಶ್ವರ ಪಂಚಾಗವನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.