ಹುಣಸೂರು: ಸರಕಾರದ ವೀಕ್ಎಂಡ್ ಕರ್ಫ್ಯೂಗೆ ಜನರ ನಿರ್ಲಕ್ಷ್ಯ
Team Udayavani, Jan 8, 2022, 10:54 AM IST
ಹುಣಸೂರು: ಸರಕಾರವೇನೋ ಕೊರೋನಾ ದಿಂದ ಜನರನ್ನು ರಕ್ಷಿಸಲು ವೀಕ್ ಎಂಡ್ ಕರ್ಫ್ಯೂ ಜಾರಿಗೊಳಿಸಿ,ಪ್ರಕಟಣೆ ಹೊರಡಿಸಿದೆ. ಆದರೆ ಹುಣಸೂರಲ್ಲಿ ಮಾತ್ರ ಇದ್ಯಾವುದನ್ನೂ ಲೆಕ್ಕಿಸದ ಜನರು ಎಂದಿನಂತೆ ದೇವಸ್ಥಾನಗಳಲ್ಲಿ ನಡೆಯುವ ಧನುರ್ಮಾಸದ ಪೂಜೆಯಲ್ಲಿ ನಿರತರಾಗಿದ್ದಾರೆ.
ನಗರದ ಎಲ್ಲಾ ರಾಮ ಮಂದಿರಗಳಲ್ಲಿ ಧನುರ್ಮಾಸದ ಭಜನೆ ಆಯೋಜನೆ ಮಂದಿರದೊಳಗೆ ಎಂದಿನಂತೆ ನಡೆದಿದ್ದು.ಪ್ರಸಾದ ವಿನಿಯೋಗದ ವೇಳೆ ನಾಮುಂದು ತಾ ಮುಂದು ಎಂದು ಪ್ರಸಾದ ಪಡೆಯುತ್ತಿರುವುದು ಕಾಣ ಸಿಗುತ್ತಿದೆ.
ಇನ್ನು ಫುಟ್ ಬಾತ್ ವ್ಯಾಪಾರಿಗಳು. ಫಾಸ್ಟ್ ಪುಡ್ ಗಳು ಮಾತ್ರ ತಮ್ಮ ವ್ಯಾಪಾರ ಸ್ಥಗಿತಗೊಳಿಸಿದ್ದು. ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಜಾರಿಯಲ್ಲಿದೆ. ಇನ್ನು ಸಾರಿಗೆ ಬಸ್ ಸಂಚಾರ ಪ್ರಯಾಣಿಕರಿಲ್ಲದೆ. ರಸ್ತೆಗಳಲ್ಲೂ ಜನರ ಓಡಾಟ ವಿರಳವಾಗಿದೆ.