ಪತಿ ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಡಿಕ್ಕಿ: ಪತ್ನಿ ಸಾವು
Team Udayavani, Sep 25, 2018, 6:50 AM IST
ಲಿಂಗಸುಗೂರು: ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ರಸ್ತೆ ಬದಿ ನಿಂತಿದ್ದ-ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೃತ ಪತಿಯ
ಶವದೊಂದಿಗೆ ಆಂಬ್ಯುಲೆನ್ಸ್ನಲ್ಲಿ ಬರುತ್ತಿದ್ದ ಪತ್ನಿ ಕೂಡ ಮೃತಪಟ್ಟ ಘಟನೆ ತಾಲೂಕಿನ ಸಂತೆಕೆಲ್ಲೂರು ಗ್ರಾಮದ ಬಳಿ ಸಂಭವಿಸಿದ್ದು,
ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.
ಸುರಪುರದ ನಿವಾಸಿ ಗಂಗಾಧರ ಕಬ್ಬೇರ (45) ಮತ್ತು ಪತ್ನಿ ಶ್ರೀದೇವಿ (35) ಸಾವಲ್ಲೂ ಒಂದಾದವರು. ಅನಾರೋಗ್ಯಕ್ಕೀಡಾಗಿದ್ದ ಗಂಗಾಧರ ಕಬ್ಬೇರ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದರು. ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದರು. ಮೃತದೇಹವನ್ನು ಬೆಂಗಳೂರಿನಿಂದ ಸುರಪುರಕ್ಕೆ ತರುವಾಗ ಆಂಬ್ಯುಲೆನ್ಸ್ ಸಂತೆಕೆಲ್ಲೂರಿನ ಬಳಿಯ ಗಡ್ಡಿ ಹಳ್ಳದ ಹತ್ತಿರ ನಿಂತ -ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ.ಪರಿಣಾಮ ತೀವ್ರ ಗಾಯಗೊಂಡಿದ್ದ ಮೃತ ಗಂಗಾಧರನ ಪತ್ನಿ ಶ್ರೀದೇವಿ ಲಿಂಗಸುಗೂರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಘಟನೆಗೆ ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷéವೇ ಕಾರಣ ಎನ್ನಲಾಗಿದೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.