ರಾಯಚೂರಲ್ಲಿ ಕಚೇರಿಗೆ ಬೀಗ-ಸಿಂದಗಿಯಲ್ಲಿ ಮದುವೆಗೆ ಹಾಜರ್
Team Udayavani, Jan 1, 2019, 9:11 AM IST
ರಾಯಚೂರು: ವಿಜಯಪುರ ಜಿಲ್ಲೆಯಲ್ಲಿ ನಡೆದ ಇಲ್ಲಿನ ನಗರಸಭೆ ಪೌರಾಯುಕ್ತರ ಮಗನ ಮದುವೆಗೆ ಬಹುತೇಕ ಅಧಿಕಾರಿ, ಸಿಬ್ಬಂದಿ ತೆರಳಿದ್ದು ಸಮಸ್ಯೆ ಹೊತ್ತು ಬಂದ ಜನರಿಗೆ ಸ್ಪಂದನೆ ನೀಡುವವರೇ ಇಲ್ಲದ ಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.
ಪೌರಾಯುಕ್ತ ರಮೇಶ ಅವರ ಪುತ್ರನ ಮದುವೆ ಸೋಮವಾರ ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಗರಸಭೆಯ ಎಲ್ಲ ಹಂತದ ಅಧಿಕಾರಿ, ಬಹುತೇಕ ಸಿಬ್ಬಂದಿ ತೆರಳಿದ್ದರು. ಕಚೇರಿಯ ಬಹುತೇಕ ಅಧಿಕಾರಿಗಳು ಅಲಭ್ಯವಾಗಿದ್ದ ಕಾರಣ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲದೆ ಹಿಂದಿರುಗಿದರು. ಒಂದೆಡೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ.
ಇದರಿಂದ ಅಧಿಕಾರಿಗಳಿಗೆ ಹೇಳುವವರು ಕೇಳುವವರಿಲ್ಲದ ಸ್ಥಿತಿ ಇದೆ. ಕೆಲಸದ ದಿನ ಹೀಗೆ ಎಲ್ಲ ಅಧಿಕಾರಿಗಳಿಗೂ ರಜೆ ನೀಡಬಾರದು ಎಂಬ ನಿಯಮಗಳಿಗೆ ಇಲ್ಲಿ ಬೆಲೆಯೇ ಇಲ್ಲದಾಗಿದೆ. ನಗರಸಭೆ ಅಧಿಕಾರಿಗಳು ಜವಾಬ್ದಾರಿ ಮರೆತು ಹೀಗೆ ಕಾರ್ಯಕ್ರಮಕ್ಕೆ ತೆರಳಿರುವುದು ಅಕ್ಷಮ್ಯ. ಜನಸೇವಕರಾದ ಅವರು ಮೊದಲು ಜನರ ಕೆಲಸ ಮಾಡಬೇಕು.
ಮೇಲಧಿಕಾರಿ ಮೇಲಿನ ಗೌರವಕ್ಕಾಗಿ ಹೀಗೆ ಎಲ್ಲರೂ ರಜೆ ಹೋಗಿರುವುದು ಸರಿಯಲ್ಲ. ಕೂಡಲೇ ಜಿಲ್ಲಾ ಧಿಕಾರಿಗಳು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಯಚೂರು ನವನಿರ್ಮಾಣ ಸಂಘಟನೆ ಮುಖಂಡ ಸಿರಾಜ್ ಜಾಫ್ರಿ ಒತ್ತಾಯಿಸಿದ್ದಾರೆ. ನಗರಸಭೆಯಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ರಜೆ ಹೋಗಿರುವ ವಿಚಾರ ಗಮನಕ್ಕೆ ಬಂದಿದೆ. ಪೌರಾಯುಕ್ತರ ಕುಟುಂಬದ ವಿವಾಹ ಸಮಾರಂಭ ಇತ್ತು. ಆದರೆ, ಅದರಲ್ಲಿ ಎಷ್ಟು ಜನ ರಜೆ ಸಹಿತ ಮತ್ತು ರಜೆ ರಹಿತ ಹೋಗಿದ್ದಾರೆ ಎಂಬುದನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು.
ಶರತ್ ಬಿ., ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ