ಮುದಗಲ್ಲ: ಈರುಳ್ಳಿ ಬೆಳೆದವರಲ್ಲಿ “ಬರೀ ಕಣ್ಣೀರು’

ಭೂಮಿಗೆ ಬೀಜ ಹಾಕಿದಾಗಿನಿಂದ 45ದಿನ ಈರುಳ್ಳಿ ಸಸಿ ಮಡಿ ಬೆಳೆಸಬೇಕು

Team Udayavani, Jul 30, 2022, 6:10 PM IST

ಮುದಗಲ್ಲ: ಈರುಳ್ಳಿ ಬೆಳೆದವರಲ್ಲಿ “ಬರೀ ಕಣ್ಣೀರು’

ಮುದಗಲ್ಲ: ರೋಗ ಹಾಗೂ ದರ ಕುಸಿತದಿಂದ ಬೇಸತ್ತ ಈ ಭಾಗದ ಬಹುತೇಕ ರೈತರು ಪರ್ಯಾಯ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆಮದಿಹಾಳ, ನಾಗಲಾಪೂರ, ಛತ್ತರ, ಪಿಕಳಿಹಾಳ, ವ್ಯಾಕರನಾಳ, ಕನ್ನಾಳ, ಹಡಗಲಿ, ಕುಮಾರಖೇಡ, ಉಳಿಮೇಶ್ವರ, ಹಡಗಲಿ ತಾಂಡಾ, ಮರಳಿ, ಹುನೂರ ಸೇರಿದಂತೆ ಮುದಗಲ್ಲ ಭಾಗದ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಈರುಳ್ಳಿ ಸಸಿ ಹೆಚ್ಚಾಗಿ ನಾಟಿ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾದರೂ ಈರುಳ್ಳಿಗೆ ಅಂಟಿಕೊಂಡಿರುವ ಬೂದಿ ರೋಗ, ಚುಕ್ಕಿರೋಗಕ್ಕೆ ಬೇಸತ್ತ ರೈತರು ಬಹಳಷ್ಟು ಜನರು ಪರ್ಯಾಯ ಬೆಳೆಗೆ
ಅವಲಂಬಿತರಾಗುತ್ತಿದ್ದಾರೆ.

ರೋಗ ಹತೋಟಿ ಮಾಡಿ ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ನಷ್ಟ ಅನುಭವಿಸಿದ ರೈತರು ಈ ವರ್ಷ ಅದರ ತಂಟೆಯೇ ಬೇಡವೆಂದು ಹೆಚ್ಚಿನ ರೈತರು ಸೂರ್ಯಕಾಂತಿ ಮತ್ತು ತೊಗರಿ ಬೆಳೆಯಲು ಮುಂದಾಗಿದ್ದಾರೆ. ವರುಣನ ಕೃಪೆಯಿಂದ ಜುಲೈ ತಿಂಗಳು ಆರಂಭದಲ್ಲಿ ಉತ್ತಮ ಮಳೆಯಾಗಿ ಜಲ ಮೂಲಗಳಾದ ಕೆರೆ, ತೆರೆದ ಬಾವಿ, ಕೊಳವೆಬಾವಿಗಳು ತುಂಬಿ ಹರಿದರೂ ಈ ಬಾರಿ ಇಲ್ಲಿನ ನೂರಾರು ರೈತರು ಈರುಳ್ಳಿ ನಾಟಿಯ ಬಗ್ಗೆ ಚಕಾರವೆತ್ತಿಲ್ಲ. ಕೆಲವೇ ಬೆರಳೆಣಿಕೆಯಷ್ಟು ರೈತರು ಈರುಳ್ಳಿ ಬೆಳೆಯಲು ಮುಂದಾಗಿರುವುದು ಕಂಡು ಬಂದಿದೆ. ಆದರೆ ಮುಸುಕಿನ ವಾತಾವರಣ ಈರುಳ್ಳಿ ಬೆಳೆಯುವ ರೈತರಿಗೆ ಕಂಟಕವಾಗಿ ಪರಿಣಮಿಸಿದೆ.

ಭೂಮಿಗೆ ಬೀಜ ಹಾಕಿದಾಗಿನಿಂದ 45ದಿನ ಈರುಳ್ಳಿ ಸಸಿ ಮಡಿ ಬೆಳೆಸಬೇಕು. ನಂತರದಲ್ಲಿ ಭೂಮಿ ಹದಗೊಳಿಸಿ ಹೊಲದಲ್ಲಿ ನಾಟಿ ಮಾಡಿ ನಾಲ್ಕು ತಿಂಗಳ ಪಾಲನೆ ಮಾಡಿದ ಬಳಿಕ ಈರುಳ್ಳಿ ಬೆಳೆ ಕೈಗೆ ಬರುತ್ತದೆ. ಇದಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ ಈ ಬಾರಿ ನೀರು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿದೆ.

ವಿದ್ಯುತ್‌ ಸಮಸ್ಯೆ: ಈರುಳ್ಳಿ (ಉಳ್ಳಾಗಡ್ಡೆ)ಸಸಿ ನಾಟಿ ಮಾಡಲು ಮುಂದಾಗಿರುವ ರೈತರಿಗೆ 7ತಾಸು ಸರಿಯಾಗಿ ವಿದ್ಯುತ್‌ ನೀಡುತ್ತಿಲ್ಲ, ಸರಕಾರದ ನಿಯಮದಂತೆ ಪ್ರತಿದಿನ 7ಗಂಟೆ 3ಫೇಸ್‌ ವಿದ್ಯುತ್‌ ನೀಡಬೇಕು ಆದರೆ ವಿದ್ಯುತ್‌ ಕಡಿತ ಮಾಡುವ ಅಧಿ ಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೇಸಾಯಿ ಬೋಗಾಪುರ ಗ್ರಾಮದ ಶಂಕ್ರಪ್ಪ, ಡಾಕಪ್ಪ ಗೊಲ್ಲರಹಟ್ಟಿಯ ಹನುಮಂತಪ್ಪ ಆರೋಪಿಸಿದ್ದಾರೆ.

ಈ ಭಾಗದ ಹಳ್ಳಿಗಳಲ್ಲಿ ಯಾವತ್ತೂ 7 ತಾಸು ವಿದ್ಯುತ್‌ ನೀಡಿಲ್ಲ. ಕುಡಿಯುವ ನೀರು ಹಾಗೂ ಬೀದಿದೀಪಕ್ಕೂ ವಿದ್ಯುತ್‌ ಸಮಸ್ಯೆ ಎದುರಾಗಿದೆ ಎಂದು ರೈತರು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪದೇ ಪದೇ ವಿದ್ಯುತ್‌ ಕಡಿತದಿಂದ ಜನರು ರೋಸಿ ಹೋಗಿದ್ದಾರೆ.

ಪ್ರತಿ ವರ್ಷ 3 ಸಾವಿರ ಹೆ. ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ ಈ ಬಾರಿ 200 ಎಕರೆ ಸಹ ಈರುಳ್ಳಿ ಬೆಳೆದಿಲ್ಲ.
ಸುರೇಶ, ತೋಟಗಾರಿಕೆ
ಇಲಾಖೆ ಅಧಿಕಾರಿ

*ದೇವಪ್ಪ ರಾಠೋಡ

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.