Love: ಬುದ್ದಿವಾದ ಹೇಳಿದ್ದಕ್ಕೆ ನೊಂದು ಅಪ್ರಾಪ್ತೆ ನೇಣಿಗೆ ಶರಣು
ಕಾರು ಚಾಲಕನನ್ನು ಪ್ರೀತಿಸುತ್ತಿದ್ದಳು...
Team Udayavani, Feb 9, 2024, 3:57 PM IST
ಮಾನ್ವಿ: ತನ್ನ ಪ್ರೀತಿಗೆ ಪಾಲಕರು ಒಪ್ಪದೆ ಇರುವುದಕ್ಕೆ ಮನನೊಂದು ಮನೆಯಲ್ಲಿಯೇ ಅಪ್ರಾಪ್ತ ವಯಸ್ಕ ಬಾಲಕಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಪಟ್ಟಣದ ನಮಾಜಗೇರಿ ಗುಡ್ಡದಲ್ಲಿ ವಾಸವಿರುವ ಸಂಗೀತ (17) ನೇಣಿಗೆ ಶರಣಾದ ಬಾಲಕಿ. ಪಟ್ಟಣದ ಕಾರು ಚಾಲಕ ಕೃಷ್ಣ ಎನ್ನುವಾತನ ಜತೆ ಅನೇಕ ದಿನಗಳಿಂದ ಪ್ರಿತಿಸುತ್ತಿದ್ದಳು. ತನ್ನ ಪ್ರಿಯಕರನ ಜತೆ ಹೋಗಲು ಪಾಲಕರು ಒಪ್ಪದೆ ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.
ಮಾನ್ವಿ ಠಾಣೆಯ ಪಿ.ಐ. ವೀರಭದ್ರಪ್ಪ ಹಿರೆಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.