Maski; ಶಾಲೆಯಲ್ಲಿ ಹೃದಯಾಘಾತದಿಂದ ನಿಧನರಾದ ಮುಖ್ಯಶಿಕ್ಷಕ
Team Udayavani, Dec 26, 2023, 4:30 PM IST
ಮಸ್ಕಿ: ತಾಲೂಕಿನ ಗದ್ರಟಗಿ ಸರಕಾರಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಕುರ್ಚಿ ಮೇಲೆ ಕುಳಿತಲ್ಲಿಯೇ ಹೃದಯಘಾತವಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಸೂರ್ಯಕುಮಾರ ಜಾಡರ ಹೃದಯಘಾತದಿಂದ ಮೃತಪಟ್ಟ ಮುಖ್ಯಗುರು. ಮೂಲತಃ ಹಿರೇಕೆರೂರು ತಾಲೂಕಿನವರಾಗಿದ್ದು ಹಲವು ವರ್ಷಗಳಿಂದ ಗದ್ರಟಗಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆಗಿದ್ದೇನು?: ಸಿಬ್ಬಂದಿ ಕೊಠಡಿಯಲ್ಲಿ ಮುಖ್ಯಗುರುವಿನ ಕುರ್ಚಿ ಮೇಲೆ ಸೂರ್ಯಕುಮಾರ ಎಂದಿನಂತೆ ಕುಳಿತು ಬರೆಯುತ್ತಿರುವಾಗ ದಿಢೀರನೇ ಎದೆ ನೋವು ಕಾಣಿಸಿದೆ. ಸ್ಥಳದಲ್ಲಿದ್ದ ಸಿಬ್ಬಂದಿ, ಅಡುಗೆ ಸಹಾಯಕರು ನೀರು ಕುಡಿಸಿ ಎದೆ ಒತ್ತಿದ್ದಾರೆ. ಆದರೆ ಸ್ಥಳದಲ್ಲಿಯೇ ಮುಖ್ಯ ಶಿಕ್ಷಕ ಸಾವನಪ್ಪಿದ್ದಾರೆ.ಕೆಲವೇ ನಿಮಿಷಯಗಳಲ್ಲಿ ನಡೆದ ಈ ಘಟನೆ ಕಂಡು ಸಿಬ್ಬಂದಿಗಳು, ವಿದ್ಯಾರ್ಥಿಗಳ ಆಕ್ರಂದನ ಮುಗಿಲುಮುಟ್ಟಿತ್ತು.