ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡಿ
Team Udayavani, Feb 6, 2021, 3:21 PM IST
ಲಿಂಗಸುಗೂರು: ಪರಿಶಿಷ್ಟ ಪಂಗಡಕ್ಕೆ ಸದ್ಯ ಇರುವ ಶೇ.3ರಷ್ಟು ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ನಾಯಕ ಮಹಾಸಭಾದ ಪದಾಧಿ ಕಾರಿಗಳು ಶುಕ್ರವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಪಂಗಡದ ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಅನೇಕ ಭಾರಿ ಹೋರಾಟ, ಮನವಿ ಸಲ್ಲಿಸಿದರೂ ಸರ್ಕಾರ ಮಾತ್ರ ಮೀಸಲಾತಿ ಪ್ರಮಾಣ ಹೆಚ್ಚಿಸುವಲ್ಲಿ ನಿರ್ಲಕ್ಷ ವಹಿಸಿದೆ. ಆದರೆ ಸರ್ಕಾರ ಅನ್ಯಜಾತಿಗಳನ್ನು ಎಸ್ ಟಿಗೆ ಸೇರಿಸುವುದಕ್ಕೆ ಕಾಳಜಿ ತೋರುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡಕ್ಕೆ ಅನ್ಯ ಜಾತಿಗಳನ್ನು ಸೇರಿಸಬಾರದು. ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ತೆರಿಗೆ ಸಂಗ್ರಹ ಗುರಿ ಸಾಧಿಸಲು ಗ್ರಾಪಂಗಳಿಗೆ ಡೆಡ್ಲೈನ್
ಮಹಾಸಭಾದ ಗೌರವಾಧ್ಯಕ್ಷ ಗಂಗಾಧರ ನಾಯಕ, ತಾಲೂಕು ಅಧ್ಯಕ್ಷ ಬಸವ ಪಟೇಲ್, ಜೀವಾ ನಾಯಕ, ಸೋಮನಗೌಡ ಪಾಳೇಗಾರ ಇದ್ದರು.