ಕೇಂದ್ರ ಬಜೆಟ್ ಪ್ರತಿ ದಹಿಸಿ ಪ್ರತಿಭಟನೆ
Team Udayavani, Feb 6, 2022, 1:02 PM IST
ರಾಯಚೂರು: ಕೇಂದ್ರ ಸರ್ಕಾರದ ವಿತ್ತ ಸಚಿವರು ಮಂಡಿಸಿದ ಬಜೆಟ್ ಕಾರ್ಮಿಕ, ಬಡಜನರ ವಿರೋಧಿಯಾಗಿದೆ ಎಂದು ಆರೋಪಿಸಿ ಸಿಐಟಿಯು ಸಂಘಟನೆ ಹಾಗೂ ಸಿಪಿಐಎಂ ಪಕ್ಷದ ಕಾರ್ಯಕರ್ತರು ಶನಿವಾರ ಡಿಸಿ ಕಚೇರಿ ಎದುರು ಬಜೆಟ್ ಪ್ರತಿಯನ್ನು ದಹಿಸುವ ಮೂಲಕ ಪ್ರತಿಭಟನೆ ನಡೆಸಿದರು.
2022-23ರ ಬಜೆಟ್ ಯಾವುದೇ ಸತ್ವವಿಲ್ಲದ, ಖಾಲಿ ಡಬ್ಬಿಯಂತಿದೆ. ಒಂದು ದಿನದ ಹಿಂದೆ ಮಂಡಿಸಿದ ಆರ್ಥಿಕ ಸಮೀಕ್ಷೆಯ ಮುಂದುವರಿದ ಭಾಗದಂತೆ ಕಂಡು ಬಂದಿದೆ. ಜನರ ಜೀವನೋಪಾಯದ ಗಳಿಕೆಯ ನಷ್ಟ, ಬಡತನ, ನಿರುದ್ಯೋಗ ಸೇರಿದಂತೆ ಯಾವುದೇ ಪ್ರಮುಖ ವಿಷಯಗಳಿಗೆ ಬಜೆಟ್ನಲ್ಲಿ ಉತ್ತರವೇ ಸಿಕ್ಕಿಲ್ಲ. ಆದರೆ, ಕಾರ್ಪೊರೇಟ್ ವರ್ಗಗಳಿಂದ ಏಕಕಾಲದಲ್ಲಿ ಬೃಹತ್ ಸಂಪತ್ತನ್ನು ಗಳಿಸುವುದರೊಂದಿಗೆ ಬಹುಪಾಲು ಜನರನ್ನು ಬಳಲುವಂತೆ ಬಜೆಟ್ ಮಾಡಲಿದೆ ಎಂದು ಟೀಕಿಸಿದರು.
2022-23ರಲ್ಲಿ ಬಜೆಟ್ ಮಾಡಲಾದ 3.19 ಲಕ್ಷ ಕೋಟಿ ರೂ. ಆದಾಯ ವೆಚ್ಚವು ಪ್ರಧಾನ ಮಂತ್ರಿಯವರ ಹೆಸರಿನ ಕಲ್ಯಾಣ ಆತಿಥ್ಯ ಯೋಜನೆಗಳೆಂದು ಕರೆಯಲ್ಪಡುವ ಕಾರ್ಯಕ್ರಮಗಳಿಗೂ ಶೇ.1ಕ್ಕಿಂತ ಕಡಿಮೆ ಹೆಚ್ಚಳವನ್ನು ನೀಡಿದೆ. ಆದರೆ, ಹಣಕಾಸು ಸಚಿವರ ಹೆಮ್ಮೆ ಪಡುವಂತೆ ಜಿಎಸ್ಟಿ ಸಂಗ್ರಹಣೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಬಜೆಟ್ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಅಧ್ಯಕ್ಷ ವರಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪದಾಧಿಕಾರಿಗಳಾದ ಅಶೋಕ, ವೀರೇಶಸ್ವಾಮಿ, ಹನುಮಂತ ಗೋಳಿ, ವೆಂಕೋಬ, ಆಂಜನೇಯ, ಪಾರ್ವತಿ, ಸುಲೋಚನಾ, ಇಂದಿರಾ, ಶರಣಮ್ಮ, ರೇಣುಕಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ