72 ಗಂಟೆ ಕಾಯಿರಿ; ಕುತೂಹಲ ಮೂಡಿಸಿದ ಜನಾರ್ದನ ರೆಡ್ಡಿ ಹೇಳಿಕೆ
Team Udayavani, Dec 21, 2022, 3:09 PM IST
ರಾಯಚೂರು : 72 ಗಂಟೆ ಕಾಯಿರಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ನೀಡಿರುವ ಹೇಳಿಕೆ ಈಗ ಕುತೂಹಲಕ್ಕೆ ಕಾರಣವಾಗಿದ್ದು, ಹೊಸ ಪಕ್ಷ ಸ್ಥಾಪನೆಯ ಘೋಷಣೆಮಾಡುವ ಸಾಧ್ಯತೆ ಇದೆ.
ರಾಯಚೂರಿನ ಮಸ್ಕಿಯಲ್ಲಿ ಬುಧವಾರ ಮಾತನಾಡಿದ ಜನಾರ್ದನ ರೆಡ್ಡಿ, ”ಪ್ರಮುಖರನ್ನ ಭೇಟಿಯಾಗಲು ಮಸ್ಕಿಗೆ ಬಂದಿದ್ದೇನೆ. ಈ ಹಿಂದೆಯೂ ಸಾಕಷ್ಟು ಬಾರಿ ಕಾರ್ಯಕ್ರಮಕ್ಕೆ ಮಸ್ಕಿಗೆ ಬಂದಿದ್ದೇನೆ. ಈಗ ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ. ರಾಜಕೀಯ ಜೀವನ ಆರಂಭಿಸಲು ಓಡಾಡುತ್ತಿದ್ದೇನೆ” ಎಂದರು.
”ಡಿ.25ರಂದು ಎಲ್ಲವನ್ನೂ ಹೇಳುತ್ತೇನೆ. ನನ್ನ ಜೊತೆ ಯಾರು ಇರ್ತಾರೆ? ಯಾರು ಬರ್ತಾರೆ? ಅನ್ನೋದನ್ನ ಅಂದು ಹೇಳುತ್ತೇನೆ. ಎಲ್ಲಾ ಪ್ರಶ್ನೆಗಳಿಗೆ 25ನೇ ತಾರೀಕಿಗೆ ಉತ್ತರ ಸಿಗುತ್ತೆ. ಅಂದು ಶುಭ ದಿನ. ಇನ್ನು 72 ಗಂಟೆ ಕಾಯಿರಿ” ಎಂದರು.