ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ
Team Udayavani, Nov 14, 2022, 2:46 PM IST
ಕನಕಪುರ: ಆಶಾ ಫಾರ್ ಎಜುಕೇಷನ್ ಮತ್ತು ಶಿಕ್ಷಣ ಪೌಂಡೇಶನ್ ಸಹಯೋಗ ದೊಂದಿಗೆ ತಾಲೂಕಿನ 8 ಗ್ರಾಮ ಡಿಜಿ ವಿಕಾಸ ಗ್ರಂಥಾಲಯ ಕೇಂದ್ರಗಳಲ್ಲಿ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಶಿಕ್ಷಣ ಫೌಂಡೇಷನ್ ಮತ್ತು ಆಶಾ ಫಾರ್ ಎಜುಕೇಷನ್ ಸಂಸ್ಥೆ ಸಹಭಾಗಿ ತ್ವದಲ್ಲಿ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಆಯ್ಕೆಯಾದ ತಾಲೂಕಿನ 8 ಗ್ರಾಪಂ ಗ್ರಂಥಾಲಯಗಳಿಗೆ ಮೊಬೈಲ್, ಟೀವಿ ಹಾಗೂ ವೈಫೈ ರೂಟರ್ ಜೊತೆಗೆ ಒಂದು ವರ್ಷದ ಇಂಟರ್ನೆಟ್ ಡಿಜಿಟಲ್ ಸಾಮಗ್ರಿಗಳ ವಿತರಣೆ ಮಾಡಲಾಗಿತ್ತು. ಆ ಗ್ರಂಥಾಲಯಗಳಲ್ಲಿ ಪ್ರತಿ ತಿಂಗಳಿಗೊಂದ ರಂತೆ ಗ್ರಾಮ ಡಿಜಿ ವಿಕಾಸ ಗ್ರಂಥಾಲಯ ಕೇಂದ್ರಗಳಲ್ಲಿ ಯುವಕರು ಆಯ್ಕೆ ಮಾಡಿದ ವಿಷಯದ ಮೇಲೆ ಆನ್ಲೈನ್ ಮೂಲಕ ಕಾರ್ಯಗಾರ ಏರ್ಪಡಿಸಲಾಗಿತ್ತು. ನವೆಂಬರ್ ತಿಂಗಳಲ್ಲಿ ಆಯ್ಕೆಯಾಗಿದ್ದ ವೃತ್ತಿ ಮಾರ್ಗದರ್ಶನ ವಿಷಯದ ತರಬೇತಿ ಕಾರ್ಯಗಾರಕ್ಕೆ 8 ಗ್ರಂಥಾ ಲಯ ಕೇಂದ್ರದಿಂದ 185 ಯುವಕರು ಆನ್ಲೈನ್ ವೇದಿಕೆ ಮೂಲಕ ಭಾಗವಹಿಸಿದ್ದರು. ಜಿಎಚ್ಪಿಎಸ್ ಕಲ್ಲಹಳ್ಳಿ ಶಾಲೆಯ ಮುಖ್ಯೋ ಪಾಧ್ಯಯ ಕೆ.ಟಿ. ಶ್ರೀನಿವಾಸ ಮೂರ್ತಿ ರವರು ಆನ್ಲೈನ್ ವೇದಿಕೆ ಮೂಲಕ ವೃತ್ತಿ ಮಾರ್ಗದರ್ಶನ ತರ ಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಚೀಲೂರು, ಹಳ್ಳಿಮಾರನಹಳ್ಳಿ, ಮರ ಳವಾಡಿ, ಕೊಳಗೊಂಡನಹಳ್ಳಿ, ಟಿ. ಬೇಕುಪೆ, ದೊಡ್ಡ ಮುದುವಾಡಿ, ಕಬ್ಟಾಳು, ನಾರಾಯಣಪುರ ಗ್ರಂಥಾಲ ಯದ ಮೇಲ್ವಿಚಾರಕರು ಹಾಗೂ ಮಾರ್ಗ ದರ್ಶಕ ಕುಮಾರಸ್ವಾಮಿ, ಮುನಿಮಹಾ ದೇವ, ರಾಜಶೇಖರ್, ರಾಮಚಂದ್ರ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!