ನೀರಿನ ದರ ಹೆಚ್ಚಳ ಖಂಡಿಸಿ ಧರಣಿ


Team Udayavani, Dec 24, 2017, 5:20 PM IST

ram-.jpg

ಚನ್ನಪಟ್ಟಣ: ಪಟ್ಟಣದ ಮಂಗಳವಾರಪೇಟೆಯ ನಿವಾಸಿಗಳು ಕುಡಿವ ಕಾವೇರಿ ನೀರಿನ ದರ ಹೆಚ್ಚಳ ವಿರೋಧಿಸಿ ನಗರಸಭೆ ಆಡಳಿತ ಮಂಡಳಿ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿ ಹಾಲಿ ದರವನ್ನು ಮುಂದುವರಿಸುವಂತೆ ಮನವಿ ಸಲ್ಲಿಸಿದರು. ಸರ್ಕಾರದ ಆದೇಶದಂತೆ ಕುಡಿವ ಕಾವೇರಿ ನೀರಿನ ದರವನ್ನು 120ರಿಂದ 220 ರೂ.ಗೆ ಹೆಚ್ಚಿಸುವಂತೆ ಕಾವೇರಿ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ನೀಡಿದ್ದ ಮನವಿಗೆ ಇಲ್ಲಿನ ನಗರಸಭೆಯು ಹಿಂದಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದ್ದು, ಇದನ್ನು ಹಿಂಪಡೆದು ಹಾಲಿ 120 ರೂ. ದರವನ್ನೇ ನಿಗದಿ ಮಾಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ಶ್ರೀನಿವಾಸ ಮಾತನಾಡಿ, ಕಾವೇರಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿರ್ವಹಣೆ ವೆಚ್ಚ ಭರಿಸಲು ಹಣದ ಮುಗ್ಗಟ್ಟು ಇರುವುದರಿಂದ ಕುಡಿವ ಕಾವೇರಿ ನೀರಿನ ದರವನ್ನು ಹೆಚ್ಚಿಸುವುದಾಗಿ ಪ್ರಕಟಣೆ ತಿಳಿಸಿದೆ. ಸರ್ಕಾರ ಇಲ್ಲಸಲ್ಲದ ಭಾಗ್ಯಗಳಿಗೆ ಹಣ ವೆಚ್ಚ ಮಾಡುತ್ತಿದ್ದು, ಕುಡಿವ ನೀರಿನ ನಿರ್ವಹಣೆಗೆ ಹಣದ ಕೊರತೆ ನೀಗಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಮಂಡಳಿ ಪಟ್ಟಣ ಪ್ರದೇಶದಲ್ಲಿ ನೀಡಿರುವ ನೀರಿನ ಸಂಪರ್ಕಗಳನ್ನು ಪರಿಶೀಲಿಸಿ, ಅವುಗಳಿಂದ ಬರುತ್ತಿರುವ ಆದಾಯ ಮತ್ತು ವೆಚ್ಚಗಳನ್ನು ಗಮನಿಸಿ, ಸೋರಿಕೆಯನ್ನು ತಡೆದು ಉಳಿಕೆ ಹಣವನ್ನು ನಗರಸಭೆಯಿಂದ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಬರೆ: ಮಂಗಳವಾರಪೇಟೆ ನಿವಾಸಿ ನಾರಾಯಣ ಮಾತನಾಡಿ, ಪಕ್ಕದ ತಮಿಳು ನಾಡಿಗೆ ಪುಕ್ಕಟ್ಟೆ ನೀರು ನೀಡುವ ರಾಜ್ಯದಲ್ಲಿ ನಾವು ನಮ್ಮ ನೀರಿಗೆ ಹಣತೆತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾಯಿತ ಜನಪ್ರತಿ ನಿಧಿಗಳು, ಸರ್ಕಾರಗಳು ಚುನಾವಣೆಯ ವೇಳೆ ಮಾತ್ರ ಬಡವರು, ರೈತರ ಹಿತಕಾಯು ವ ನೆಪವೊಡ್ಡಿ ಪ್ರಚಾರ ಪಡೆಯುತ್ತಾರೆ.

ಆದರೆ ಅವರು ಅಧಿಕಾರಕ್ಕೆ ಬಂದ ಬಳಿಕ 5 ವರ್ಷ ಬಡವರು, ರೈತರನ್ನು ಮರೆಯುತ್ತಾರೆ. ಸರ್ಕಾರ ಯಾವಾಗಲೂ ಬಡವರ ಮೇಲೆ ಬರೆ ಎಳೆಯುತ್ತಾ ನಮ್ಮನ್ನು ಗಿರವಿ ಆಭರಣ ಮಾಡಿಕೊಂಡಿದ್ದಾರೆ ಎಂದು ದೂರಿದರು. 

ನೀರಿನ ಭಾಗ್ಯ ನೀಡಿ: ಬಿಟ್ಟಿ ಅಕ್ಕಿ, ಬಿಟ್ಟಿ ಊಟ, ಬಿಟ್ಟಿ ಹಾಲು, ನೀಡುವ ಸರ್ಕಾರ ಜನರಿಗೆ ಕುಡಿಯುವ ನೀರನ್ನು ಬಿಟ್ಟಿಯಾಗಿ
ನೀಡಬಹುದಲ್ಲವೇ. ಹಾಗಯೇ ರೈತರ ಸಾಲಮನ್ನಾ ಮಾಡುವ ಸರ್ಕಾರ ನೀರಿನ ಹಳೆ ಬಾಕಿ ಹಣವನ್ನು ಮನ್ನಾ ಮಾಡಬೇಕು.

ಸರ್ಕಾರ ಯಾವುದೇ ಭಾಗ್ಯ ನೀಡಲಿ, ಯಾವುದೇ ಸಾಲ ಮನ್ನಾ ಮಾಡಲಿ ಎಲ್ಲಾ ಹಣ ನಮ್ಮ ತೆರಿಗೆಯ ಹಣವೇ ಹೊರತು, ಯಾವ ಸರ್ಕಾರದ ಹಣವೂ ಅಲ್ಲ ಎಂದು ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

10 ನಿಮಿಷ ನೀರಿಗೆ 220 ರೂ. ಬಿಲ್‌: ನಮ್ಮ ಬಡಾವಣೆಗಳಲ್ಲಿ ಕೇವಲ 10 ನಿಮಿಷ ಮಾತ್ರ ಕಾವೇರಿ ಕುಡಿವ ನೀರನ್ನು
ಸರಬರಾಜು ಮಾಡುತ್ತಾರೆ. ಹಿಂದೆಯೇ ಬೋರ್‌ ನೀರು ಸರಬರಾಜು ಮಾಡುತ್ತಾರೆ. ತಿಂಗಳಿಗೆ 220 ರೂ. ಶುಲ್ಕ ವಿಧಿಸುತ್ತಾರೆ. ಹಿಂದೆ ಪೈಪ್‌ ಜೋಡಣೆ ಶುಲ್ಕವಾಗಿ 6 ಸಾವಿರ ಶುಲ್ಕ ನೀಡಿದ್ದರು. ಆದರ ಬಾಕಿ ಉಳಿದಿದ್ದು, ಇದೀಗ ಆ ಹಣಕ್ಕೆ ಬಡ್ಡಿ ಸೇರಿ 20 ಸಾವಿರ ಬಿಲ್‌ ನೀಡಿದ್ದಾರೆ. ದಿನನಿತ್ಯದ ಆದಾಯವನ್ನು ನಂಬಿ ಬದುಕುತ್ತಿರುವ ನಾವು ತಿಂಗಳಿಗೆ 20 ಸಾವಿರ ಕಟ್ಟುವುದು ಸಾಧ್ಯವೇ ಎಂದು ಪ್ರಶ್ನಿಸಿದ ಗೌರಮ್ಮ, ನಾವು ನೀಡುವ ತಿಂಗಳ ಶುಲ್ಕವನ್ನು ಬಡ್ಡಿ ಹಣಕ್ಕೆ ವಜಾ ಮಾಡುತ್ತಿದ್ದಾರೆ. ನಮ್ಮ ನೀರಿಗೆ ನಾವೇ ಬಡ್ಡಿ ಕಟ್ಟಬೇಕೆ ಎಂದು ಖಂಡಿಸಿದರು.

ಇದಕ್ಕೂ ಮುನ್ನ ಪಟ್ಟಣದ ಮಂಗಳವಾರಪೇಟೆಯಿಂದ ಮೆರವಣಿಗೆ ಹೊರಟ ಸಾರ್ವಜನಿಕರು ಬಿ.ಎಂ.ರಸ್ತೆ ಮೂಲಕ ಸಾಗಿ ಪಟ್ಟಣದ ಎಂ.ಜಿ ರಸ್ತೆ ಮೂಲಕ ನಗರಸಭೆ ಆವರಣದಲ್ಲಿ ಸಮಾವೇಶಕೊಂಡರು. ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಮುದ್ದುಕೃಷ್ಣ, ಎಸ್‌.ಉಮಾಶಂಕರ್‌, ಶಶಿಕುಮಾರ್‌, ಶ್ವೇತಾ, ಅರುಣ್‌ಕುಮಾರ್‌, ಎಂ.ವಿ.ಸಂತೋಷ್‌, ಎಂಟಿಆರ್‌ ತಿಮ್ಮರಾಜು, ಎಂ.ಪಿ.ರವಿಕುಮಾರ್‌, ಡಿ.ಕೃಷ್ಣ, ದೊಡ್ಡಯ್ಯ, ಕೆ.ವೇಣುಗೋಪಾಲ, ರವಿ, ಕೆಂಪಯ್ಯ, ಸಿ.ಚಂದ್ರಪ್ಪ, ಬೋರಲಿಂಗೇಗೌಡ, ಬಾಬು, ಪುಟ್ಟರಾಮಣ್ಣ, ಮುತ್ತಯ್ಯ, ಸಿ.ರೋಹಿತ್‌ಕುಮಾರ್‌ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.