ಸಾಂಪ್ರದಾಯಿಕ ಕಾಮನ ಹಬ್ಬ ಆಚರಣೆ ಪ್ರಾರಂಭ


Team Udayavani, Mar 23, 2021, 1:45 PM IST

ಸಾಂಪ್ರದಾಯಿಕ ಕಾಮನ ಹಬ್ಬ ಆಚರಣೆ ಪ್ರಾರಂಭ

ಚನ್ನಪಟ್ಟಣ: ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕಾಮನ ಹಬ್ಬವನ್ನು ಇಲ್ಲಿನ ಮಂಡಿಪೇಟೆ ಗರುಡಗಂಭದ ಬೀದಿಯಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಈಗಾಗಲೇ ಕಾಮಣ್ಣನ ಉತ್ಸವ, ರತಿ-ಮನ್ಮಥನ ಮೂರ್ತಿಪ್ರತಿಷ್ಠಾಪನೆ ಯೊಂದಿಗೆ ಆರಂಭಗೊಂಡಿದ್ದು, ಮಾ.29 ರವರೆಗೆ ನಡೆಯಲಿದೆ.

ಹಳೇ ಮೈಸೂರು ಭಾಗದಲ್ಲಿ ಚನ್ನಪಟ್ಟಣದಲ್ಲಿ ವಿಶೇಷವಾಗಿ ಕಾಮನ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ಇಡೀ ನಗರಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. 15 ದಿನ ನಡೆಯಲಿರುವ ಆಚರಣೆಗೆ ಕಾಮನ ಹಬ್ಬದ ಉತ್ಸವ ಸಮಿತಿ ನೇತೃತ್ವವಹಿಸಿಕೊಂಡಿದೆ. ರತಿ ಮನ್ಮಥರಿಗೆ ವಿಶೇಷ ವೇಷಭೂಷಣತೊಡಿಸುವ ಜತೆಗೆ ಬೈಕ್‌, ಕಾರುಗಳಲ್ಲಿ ಕುಳ್ಳಿರಿಸಿಯೂ ವಿಶೇಷ ಪ್ರದರ್ಶನ ನಡೆಸಲಾಗುತ್ತದೆ.

ಕಾಮನ ಉತ್ಸವ ನಿಲ್ಲುವುದಿಲ್ಲ: 15 ದಿನ ಮಂಡಿಪೇಟೆ ಸೇರಿ ಪಟ್ಟಣದ ವಿವಿಧೆಡೆ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆಯುತ್ತಾರೆ. ಕಾಮನ ಹಬ್ಬಮಾಡದಿದ್ದರೆ ಕೆಡಕು ಉಂಟಾಗುತ್ತದೆ, ಮಳೆ ಬಾರದೆಬೆಳೆಯಾಗುವುದಿಲ್ಲ ಎನ್ನುವ ನಂಬಿಕೆಯೂ ಇಲ್ಲಿನ ಜನರಲ್ಲಿದೆ.ಹಾಗಾಗಿ ಯಾವ ಹಬ್ಬ ನಿಂತರೂ ಕಾಮನ ಉತ್ಸವ ಮಾತ್ರ ಎಂದಿಗೂ ನಿಲ್ಲುವುದಿಲ್ಲ.

ಮಂಡಿಪೇಟೆಯಲ್ಲಿ ವಿಶೇಷ: ಹೋಳಿ ಹಬ್ಬ ಮೋಜು, ಮಸ್ತಿಗಾಗಿ ಆಡುವ ದೊಡ್ಡ ಫ್ಯಾಷನ್‌ ಆಗಿ ಬದಲಾಗಿದೆ. ಕಾಮನ ಹಬ್ಬಕ್ಕೆಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ. ಹಿರಿಯರು,ಕಿರಿಯರು ಅನ್ನದೇ ಪ್ರತಿಯೊಬ್ಬರು ಖುಷಿಯಾಗಿ ಹೋಳಿಸಂಭ್ರಮಾಚರಣೆ ಮಾಡುತ್ತಾರೆ. ವಿವಿಧ ಬಣ್ಣಗಳ ಓಕುಳಿ ಹರಿಸಿ,ಇಡೀ ವರ್ಷ ಸಂತೋಷದಿಂದ ಕೂಡಿರಲಿ ಎಂದು ಹಾರೈಸುವರಂಗಿನ ಹಬ್ಬ ಇದು, ಆದರೆ, ಮಂಡಿಪೇಟೆಯಲ್ಲಿ ನಡೆಯುವಉತ್ಸವದಲ್ಲಿ, ಕೇವಲ ಬಣ್ಣ ಎರಚುವುದಷ್ಟೇ ಅಲ್ಲ, ರತಿ, ಮನ್ಮಥರ ಪ್ರತಿಷ್ಠಾಪನೆಯಿಂದ ಹಿಡಿದು ಹಬ್ಬದ ಮಹತ್ವವನ್ನು ಸಂಪೂರ್ಣವಾಗಿಕಟ್ಟಿಕೊಡುವ ಕೆಲಸ ಮಾಡಲಾಗುತ್ತಿದೆ.

ವಿವಿಧ ಕಾರ್ಯಕ್ರಮ: ಮಾ.29ರವರೆಗೆ ಪ್ರತಿದಿನ ಸಂಜೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ರಾತ್ರಿ ಸಾಂಸ್ಕೃತಿಕಕಾರ್ಯಕ್ರಮ ನಡೆಯುತ್ತಿವೆ. ಮಾ.28ರಂದು ರತಿ, ಮನ್ಮಥರಮೆರವಣಿಗೆ ನಡೆಯಲಿದೆ, ವಿವಿಧ ವೇಷಭೂಷಣ, ಜಾನಪದ ನೃತ್ಯಕಾರ್ಯಕ್ರಮ ಮೆರವಣಿಗೆಯಲ್ಲಿ ಸಾಗಲಿವೆ. ಬೆಳಗ್ಗೆ ಉತ್ಸವ ಹೊರಟು,ಸಂಜೆ ಕಾಮದಹನ ನೆರವೇರಲಿದೆ. ರಾತ್ರಿ 7 ಗಂಟೆಗೆ ರತಿ ಮೆರವಣಿಗೆನಡೆಯುತ್ತದೆ. ಅಂದು ಸ್ವಾಮಿಯ ಆರೋಹಣ, ರತಿ ಮನ್ಮಥರ ಬೆಳ್ಳಿಪಲ್ಲಕ್ಕಿ ಉತ್ಸವ, ಹೋಳಿ ಹಬ್ಬ ಆಚರಣೆ ವಿಜೃಂಭಣೆಯಿಂದ ನೆರವೇರಲಿದೆ.

ವಿಜಯೋತ್ಸವದ ಉತ್ಸವ: ರತಿ ಮನ್ಮಥರ ವಿಜಯೋತ್ಸವದ ಉತ್ಸವವು ಮಂಡಿಪೇಟೆ ಗರುಡಗಂಭದ ಬೀದಿಯಿಂದ ಹೊರಟು ಡೂಂ ಲೈಟ್‌ ವೃತ್ತ ಮಾರ್ಗವಾಗಿ ಮದೀನಾ ಸರ್ಕಲ್‌,ಲಕ್ಷ್ಮೀ ನಾರಾಯಣ ದೇವಸ್ಥಾನ ಪ್ರದಕ್ಷಿಣೆ ಮಾಡಿ, ಎಂ.ಜಿ.ರಸ್ತೆ ತಲುಪಿ, ಡಿ.ಟಿ.ರಾಮು ವೃತ್ತ, ಪೊಲೀಸ್‌ ಠಾಣೆ ಮೂಲಕ ಹೊರಟು ಕಾಳಮ್ಮ ದೇವಸ್ಥಾನ ರಸ್ತೆ, ಕೋಟೆ ಮಾರಮ್ಮ ದೇವಸ್ಥಾನ ರಸ್ತೆಯಲ್ಲಿ ಹೊರಟು ಕರಬಲ ಮೈದಾನ ತಲುಪುತ್ತದೆ. ಅಲ್ಲಿ ಪೂಜೆಯ ನಂತರ ಜೆ.ಸಿ.ರಸ್ತೆ ತಲುಪಲಿದೆ.

ಪ್ರತಿ ದಿನವೂ ರತಿ-ಮನ್ಮಥ ಮೂರ್ತಿಗಳಿಗೆ ಅಲಂಕಾರ: 15 ದಿನ ವಿಶೇಷವಾಗಿ ರತಿ -ಮನ್ಮಥರ ಮೂರ್ತಿಯನ್ನು ಅಲಂಕಾರಮಾಡುವ ಜೊತೆಗೆ ಇಡೀ ಹಬ್ಬಕ್ಕೆ ಹೊಸ ಮೆರಗು ತಂದುಕೊಡುವಮೂಲಕ ಕಾಮನ ಹಬ್ಬದ ಉತ್ಸವ ಸಮಿತಿ ಯಶಸ್ವಿಯಾಗಿಮಾಡಿಕೊಂಡು ಬರುತ್ತಿದೆ. ಇದರ ಜೊತೆಗೆ ಜಾನಪದ,ವೇಷಭೂಷಣ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಬಹುಮಾನ ಸಹನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ. ಪಟ್ಟಣದಲ್ಲಿನಡೆಯುವ ಬಹುತೇಕ ಹಬ್ಬಗಳಲ್ಲಿ ಕಾಮಣ್ಣನ ಹಬ್ಬವೂ ಒಂದಾಗಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಮಿತಿ ಮನವಿ ಮಾಡಿದೆ.

 

ಎಂ.ಶಿವಮಾದು

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.