Kengal Hanumanthaiah: ಕೆಂಗಲ್‌ ಹನುಮಂತಯ್ಯ ಜನ್ಮದಿನ ಸ್ಮರಿಸದ ಜಿಲ್ಲೆ


Team Udayavani, Feb 15, 2024, 5:15 PM IST

Kengal Hanumanthaiah: ಕೆಂಗಲ್‌ ಹನುಮಂತಯ್ಯ ಜನ್ಮದಿನ ಸ್ಮರಿಸದ ಜಿಲ್ಲೆ

ರಾಮನಗರ: ಅಧಿಕಾರವನ್ನು ಲೆಕ್ಕಿಸದೆ ಅಖಂಡ ಕರ್ನಾಟಕ ಘೋಷಣೆ ಮಾಡಿದ, ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧವನ್ನು ನಿರ್ಮಾಣ ಮಾಡಿದ, ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿವನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಮರೆತಿದೆಯಾ..?

ಕೆಂಗಲ್‌ ಹನುಮಂತಯ್ಯ ಬಗ್ಗೆ ಜಿಲ್ಲೆಯಲ್ಲಿ ತೋರುತ್ತಿರುವ ಉದಾಸೀನ ಸಾರ್ವಜನಿಕರಲ್ಲಿ ಇಂತಹುದೊಂದು ಪ್ರಶ್ನೆ ಮೂಡಿದೆ. ಫೆ.14 ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನ. ಜಿಲ್ಲೆಯ ಹಾಗೂ ರಾಜ್ಯದ ಪ್ರಮುಖ ರಾಜ ಕಾರಣಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈಕುರಿತು ಪೋಸ್ಟ್‌ಗಳನ್ನು ಹಾಕಿಕೊಂಡದ್ದಾರೆ. ಆದರೆ, ಅವರ ತವರು ನೆಲದಲ್ಲಿ ಕೆಂಗಲ್‌ ಹನುಮಂತಯ್ಯ ಅವರನ್ನು ಸ್ಮರಿಸುವ ಕನಿಷ್ಠ ಕಾರ್ಯವೂ ನಡೆಯದೇ ಇರುವುದು ವಿಷಾದನೀಯ.

ಪ್ರತಿಮೆ ಮತ್ತು ಸಮಾಧಿಗೆ ಧೂಳು ಹೊಡೆದು ಹೂ ಇಡುವವರಿಲ್ಲ: ರಾಮನಗರ ಜಿಲ್ಲೆಯಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮಗಳು ನಡೆದಾಗಲು ನಗರದ ಕೆಂಗಲ್‌ ಹನುಮಂತಯ್ಯ ವೃತ್ತದಲ್ಲಿರುವ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಗೆ ಹಾರ ಹಾಕುವುದು ರಾಜ ಕಾರಣಿಗಳ ವಾಡಿಕೆ. ಇನ್ನು ಕೆಲ ಪ್ರತಿಭಟನೆಗೂ ಕೆಂಗಲ್‌ ಹನುಮಂತಯ್ಯ ಪ್ರತಿಮೆಯೇ ಕೇಂದ್ರಸ್ಥಾನ. ಈ ಪ್ರತಿಮೆಯನ್ನು ಅವರ ಜನ್ಮದಿನದಂದು ಧೂಳು ತೆಗೆಯುವ ಪ್ರಯತ್ನಕ್ಕೂ ಯಾರೂ ಮುಂದಾಗದಿರುವುದು ವಿಷಾದನೀಯವೇ ಸರಿ. ಇನ್ನು ಚನ್ನಪಟ್ಟಣದ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯದ ಸಮೀಪ ಕೆಂಗಲ್‌ ಹನುಮಂತಯ್ಯ ಅವರ ಸಮಾಧಿ ಇದ್ದು, ಈ ಸಮಾಧಿ ಅಭಿವೃದ್ಧಿ ಕಾರ್ಯ ಕೇವಲ ಭರವಸೆಯಾಗೇ ಉಳಿದಿದೆ. ಅವರ ಸಮಾಧಿಗೆ ಪೂಜೆ ಸಲ್ಲಿಸುವವರೂ ಇಲ್ಲವಾಗಿದ್ದು ಸಮಾಧಿ ಸ್ಥಳ ಧೂಳು ತಿನ್ನುತ್ತಿದೆ.

ಜಿಲ್ಲಾಡಳಿತ ಜಾಣಮೌನ: ರಾಜ್ಯದ ಸರ್ಕಾರ ಸುವ ರ್ಣ ಕರ್ನಾಟಕ ರಾಜ್ಯೋತ್ಸವದ ಆಚರಣೆಯಲ್ಲಿದೆ. ಇಂತಹ ಮಹತ್ವದ ಕ್ಷಣಕ್ಕೆ ಕಾರಣೀ ಭೂತ ರಾದ ಪ್ರಮುಖ ವ್ಯಕ್ತಿ ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನವನ್ನು ಸರ್ಕಾರ ಇಷ್ಟೊಂದು ಕಡೆಗಣಿಸುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಸರ್ಕಾರ ಒತ್ತಟ್ಟಿಗಿರಲಿ, ಜಿಲ್ಲಾಡಳಿತವಾಗಲಿ ಕೆಂಗಲ್‌ ಹನುಮಂತ್ಯವರನ್ನು ಸ್ಮರಿಸದೇ ಇರುವುದು ವಿಷಾದನೀಯವೇ ಸರಿ. ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಗೆ ಹಾರ ಹಾಕಿ ಅವರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸದಷ್ಟು ಉದಾಸೀನ ಜಿಲ್ಲಾ ಡಳಿತಕ್ಕೆ ಯಾಕೆ? ಇಂತಹ ಮುತ್ಸದ್ಧಿ ರಾಜಕಾರಣಿಯ ಬಗ್ಗೆ ಈಪರಿಯ ನಿರ್ಲಕ್ಷ್ಯ ಸರಿಯೇ ಎಂದು ಜಿಲ್ಲೆಯ ಜನತೆ ಪ್ರಶ್ನಿಸುತ್ತಿದ್ದಾರೆ.

ಪೋಸ್ಟ್‌ಗೆ ಸೀಮಿತವಾದ ಸ್ಮರಣೆ: ರಾಮನಗರ ಜಿಲ್ಲೆಯಿಂದ ಮೊದಲು ಮುಖ್ಯಮಂತ್ರಿಯಾದವರು ಕೆಂಗಲ್‌ ಹನುಮಂತಯ್ಯ, ಅವರ ಬಳಿಕ ಜಿಲ್ಲೆಯಿಂದ ಮೂರು ಮಂದಿ ನಾಲ್ಕು ಬಾರಿ ಮುಖ್ಯಮಂತ್ರಿ, ಒಬ್ಬರು ಉಪಮುಖ್ಯಮಂತ್ರಿಯಾಗಿದ್ದಾರೆ. ಎಲ್ಲಾ ರಾಜಕೀಯ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನಾಚರಣೆಯ ಬಗ್ಗೆ ಪೋಸ್ಟ್‌ ಹಾಕುವುದಕ್ಕೆ ಸೀಮಿತವಾಗಿದ್ದಾರೆ.

ಜನ್ಮದಿನದ್ದೂ ಗೊಂದಲ : ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನದ ಬಗ್ಗೆ ಗೊಂದಲವಿದೆ. ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನ ಫೆ.14ಎಂದು ಗೂಗಲ್‌ನಲ್ಲಿ ನಮೂದಾಗಿದ್ದರೆ, ಅವರ ಕುಟುಂಬದ ಮೂಲಗಳ ದಾಖಲೆ ಪ್ರಕಾರ ಅವರ ಜನ್ಮದಿನ ಫೆ.10. ಈ ಎರಡೂ ದಿನಗಳ ಬಗ್ಗೆ ಗೊಂದಲ ಇರುವ ಕಾರಣ ಕೆಲ ಮುಖಂಡರು ಫೆ.14 ರಂದು ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನವನ್ನು ಆಚರಿಸಿದರೆ ಮತ್ತೆ ಕೆಲವರು ಫೆ.10ರಂದೇ ಜನ್ಮ ದಿನ ಆಚರಿಸುತ್ತಾರೆ. ಆದರೆ ಜಿಲ್ಲಾಡಳಿತವಾಗಲಿ, ಜಿಲ್ಲೆಯ ಯಾವುದೇ ಸಂಘ ಸಂಸ್ಥೆಗಳಾಗಲಿ ಎರಡೂ ದಿನವೂ ಕೆಂಗಲ್‌ ಹನುಮಂತಯ್ಯ ಅವರನ್ನು ಸ್ಮರಿಸದಿರುವುದು ವಿಷಾದನೀಯವೇ ಸರಿ.

ಕೆಂಗಲ್‌ ಹನುಮಂತಯ್ಯ ಅವರ ಜನ್ಮದಿನ ಫೆ.10. ಗೂಗಲ್‌ನಲ್ಲಿ ತಪ್ಪು ದಿನಾಂಕವನ್ನು ನಮೂದಿ ಸಲಾಗಿದೆ. ಫೆ.10ರಂದು ಕೆಂಗಲ್‌ ಹನುಮಂತಯ್ಯ ಟ್ರಸ್ಟ್‌ ವತಿಯಿಂದ ಸರಳವಾಗಿ ಆಚರಿಸಿದ್ದೇವೆ. ರಾಜ್ಯ ಸರ್ಕಾರ ದಂತಕತೆ, ಪುರಾಣಕತೆಯಲ್ಲಿರುವ ವ್ಯಕ್ತಿಗಳ ಜನ್ಮದಿನವನ್ನು ಆಚರಿಸುತ್ತಿರುವಾಗ, ವಿಧಾನಸೌಧ ನಿರ್ಮಾತೃ, ಕರ್ನಾಟಕ ಏಕೀಕರಣ ಮಾಡಿದ ಮಹಾನ್‌ ವ್ಯಕ್ತಿಯ ಜನ್ಮದಿನಾಚರಣೆಯನ್ನು ನಡೆಸಲು ಉದಾ ಸೀನ ತೋರುತ್ತಿರುವುದು ಯಾಕೆ. ಮುಂದಾದರೂ ಕೆಂಗಲ್‌ ಹನುಮಂತಯ್ಯ ಅವರ ಕೊಡುಗೆಯನ್ನು ಸ್ಮರಿಸಿ ಅವರನ್ನು ಗೌರವಿಸುವಕೆಲಸ ಮಾಡಲಿ. -ಪ್ರೋ.ಎಂ.ಶಿವನಂಜಯ್ಯ, ವಿಶ್ರಾಂತಪ್ರಾಂಶುಪಾಲ, ಅಧ್ಯಕ್ಷರು ಕೆಂಗಲ್‌ ಹನುಮಂತಯ್ಯ ಟ್ರಸ್ಟ್‌ ರಾಮನಗರ

ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.