ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಲಿದ್ದಾನೆ ಹಣ್ಣಿನ ರಾಜ


Team Udayavani, Feb 7, 2022, 12:47 PM IST

ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಲಿದ್ದಾನೆ ಹಣ್ಣಿನ ರಾಜ

ಕನಕಪುರ: ಈ ಬಾರಿ ಮಾವಿನ ಫ‌ಸಲು ನಿಗದಿಗಿಂತ ವಿಳಂಬವಾಗಿ ಮಾರುಕಟ್ಟೆ ಪ್ರವೇಶಿಸಲಿದ್ದು ಮಾವು ಕೃಷಿ ಬೆಳೆಗಾದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಮಾವಿನ ಹಣ್ಣು ಮಾರುಕಟ್ಟೆಗೆ ಒಮ್ಮೆಗೆ ಲಗ್ಗೆ ಇಟ್ಟರೆ ವ್ಯಾಪಾರ ಕುಂಠಿತಗೊಳ್ಳುತ್ತದೆ. ಅಂತಹ ಮಾವಿನ ಫ‌ಸಲು ಈ ಬಾರಿ ಒಂದೂವರೆ ತಿಂಗಳು ವಿಳಂಬವಾಗಿ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂಬುದು ಅಧಿಕಾರಿಗಳ ಮಾತು.

ಪ್ರತಿ ವರ್ಷ ನವಂಬರ್‌ ಅಂತ್ಯದಲ್ಲಿ ಅಥವಾ ಡಿಸೆಂಬರ್‌ ತಿಂಗಳಲ್ಲಿ ಮಾವಿನ ಗಿಡದಲ್ಲಿ ಹೂ ಬಿಡಲು ಆರಂಭವಾಗುತ್ತಿತ್ತು. ಮಾರ್ಚ್‌ ತಿಂಗಳಲ್ಲಿ ಮಾವು ಮಾರುಕಟ್ಟೆ ಪ್ರವೇಶ ಮಾಡಿ ಜನರ ಬಾಯಿ ಸಿಹಿಮಾಡುತ್ತಿತು. ಈ ಬಾರಿ ಫೆಬ್ರವರಿಗೆ ತಿಂಗಳಿಗೆ ಕಾಲಿಟ್ಟರು ಮಾವಿನ ಮರಗಳಲ್ಲಿ ಶೇ.50ರಷ್ಟು ಮಾತ್ರ ಹೂ ಬಿಟ್ಟಿದೆ. ಈ ಬಾರಿ ಮಾವಿನಹಣ್ಣು ಏಪ್ರಿಲ್‌ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಮಾವಿನ ದರ ಕುಸಿತ ಭೀತಿ: ರಾಜ್ಯಕ್ಕೆ ಹೋಲಿಸಿದರೆ ಕನಕಪುರ ತಾಲೂಕಿನ ರೈತರು ಬೆಳೆದ ಮಾವು ಮೊದಲು ಮಾರುಕಟ್ಟೆ ಪ್ರವೇಶ ಮಾಡುತ್ತಿತ್ತು. ತಾಲೂಕಿನ ಸಾತನೂರು ಹೋಬಳಿಯ ಉದಾರಹಳ್ಳಿ ಮತ್ತು ವೆಂಕಟರಾಯನದೊಡ್ಡಿ ಸುತ್ತಮುತ್ತಲ ರೈತರು ಬೆಳೆದ ಮಾವು ಮೊದಲು ಮಾರುಕಟ್ಟೆ ಯಲ್ಲಿ ಮಾರಾಟವಾಗುತ್ತಿತ್ತು. ರೈತರಿಗೆ ಆದಾಯವೂ ಹೆಚ್ಚಿತ್ತು. ಪ್ರತಿವರ್ಷ ಕನಕಪುರ ತಾಲೂ ಕಿನಿಂದ ಮಾವು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕವೇ ಕೋಲಾರ, ಚಿಕ್ಕಬಳ್ಳಾಪುರದ ಭಾಗದ ಲ್ಲಿ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಕಾಟದಿಂದ ಕೋಲಾರ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಯ ಮಾವು ಒಂದೇ ಬಾರಿಗೆ ಕಟಾವಾಗುವ ಸಾಧ್ಯತೆ ಇದ್ದು, ಮಾವಿನ ದರಕುಸಿಯಬಹುದು ಎಂದು ಅಂದಾಜಿಸಲಾಗಿದೆ.

ಬೂದುರೋಗದಿಂದ ಬೆಳೆ ರಕ್ಷಣೆ: ಪ್ರತಿ ವರ್ಷ ಚಳಿಗಾಲದಲ್ಲಿ ಬಿಡುತ್ತಿದ್ದ ಮಾವಿನ ಹೂವಿಗೆ ಬೂದುರೋಗದ ಬಾಧೆ ಕಾಡುತ್ತಿತ್ತು. ಇದರಿಂದ ಹೂ ಕಾಯಾಗುವ ಮೋದಲೇ ಉದುರಿ ಇಳುವರಿಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಹೂ ಬಿಡುವುದು ವಿಳಂಬವಾಗಿರುವುದು ಬೂದಿ ರೋಗದಿಂದ ಪಾರಾಗುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ಮಾತು.

ಜೋನಿ ರೋಗದ ಆತಂಕ: ಆದರೆ ಹೂ ಬಿಡುವಾಗ ಉಷ್ಣಾಂಶ ಹೆಚ್ಚಾದರೂ ಮಾವಿಗೆ ಕಂಟಕವೇ ಜೋನಿ ರೋಗ ಕಾಡುವ ಆತಂಕ ಎದುರಾಗಲಿದೆ. ಈಗಾಗಲೇ ಚಳಿಗಾಲ ಮುಗಿಯುತ್ತ ಬಂದಿದೆ ಉಷ್ಣಾಂಶ ಹೆಚ್ಚಾದರೆ ಜೋನಿ ರೋಗ ಜಿಗಿಹುಳ ರೋಗಬಾಧೆ ಹೆಚ್ಚಾಗಿಹೂವಿನ ಮೇಲೆ ದಾಳಿ ಮಾಡಲಿದೆ. ಮಾರ್ಚ್‌ ತಿಂಗಳಲ್ಲಿ ಇದರ ಬಾಧೆ ಹೆಚ್ಚು. ಈಗಾಗಲೇ ಮಾವು ಕೃಷಿ ರೈತರು ಔಷಧಿ ಸಿಂಪಡನೆಗೆ ಮುಂದಾಗಿದ್ದಾರೆ. ಈ ಬಾರಿ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಇದ್ದುದರ ಕುಸಿತ ಕಾಣಬಹುದು ಎಂದು ಹೇಳಲಾಗುತ್ತಿದೆ

ಸಾತನೂರಿನಲ್ಲಿ ಹೆಚ್ಚು ಮಾವು: ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್‌ ತಾಲೂಕಿನಲ್ಲಿ ನಾಲ್ಕೂವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. ಕಸಬಾ ಮತ್ತು ಸಾತನೂರು ಭಾಗದಲ್ಲಿ ಅತಿ ಹೆಚ್ಚು ಮಾವುಬೆಳೆಯುವ ರೈತರಿದ್ದಾರೆ. ನೇರ ಮಾರುಕಟ್ಟೆ ವ್ಯವಸ್ಥೆಗೆ ರೈತರನ್ನು ತರಲುಇಲಾಖೆ ಮಾವಿನ ಮೇಳ ಹಮ್ಮಿಕೊಳ್ಳಲಿದೆ. ಇದು ರೈತರಿಗೆ ಹೆಚ್ಚುಲಾಭ ತರಲಿದೆ. ಕೆಲವು ರೈತರು ಮಾವಿನ ಕಾಯಿಯನ್ನು ಹಣ್ಣು ಮಾಡುವ ತರಬೇತಿ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಇಲಾಖೆ ಅಧಿಕಾರಿಗಳು ಮಾರ್ಚ್‌ ತಿಂಗಳಒಳಗಾಗಿ ತರಬೇತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಾವಿನ ತಳಿ ಎಷ್ಟು ದಿನಕ್ಕೆ ಬೆಳೆ? ಶೇ.25 ರಷ್ಟು ಕಾಯಿ ಕಟ್ಟಿದೆ ಶೇ.75 ರಷ್ಟು ಈಗಷ್ಟೆ ಹೂ ಬಿಟ್ಟಿದೆ. ಪ್ರತಿವರ್ಷ ಏಪ್ರಿಲ್‌ ನಲ್ಲಿ ಕಟಾವು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ, ಜೂನ್‌ಗೆ ಕಟಾವಿಗೆಬರಲಿದೆ. ನಮ್ಮ ಜಿಲ್ಲೆಯಲ್ಲಿ ಸೇಂದೂರ 70 ದಿನಗಳಿಗೆಕಟಾವಾಗುತ್ತಿತ್ತು. ಆದರೆ ಈ ಬಾರಿ ನಿರೀಕ್ಷೆಯಂತೆ ಹೂ ಬಿಟ್ಟಿಲ್ಲ.ಶೇ.50ರಷ್ಟು ಇಳುವರಿ ಕುಂಟಿಠವಾಗಿದೆ. ಬಾದಾಮಿ 120ದಿನ,ರಸಪೂರಿ 90ದಿನಗಳಲ್ಲಿ ಕಟಾವಾಗಲಿದೆ. ಈ ಬಾರಿ ಸ್ವಲ್ಪ ವಿಳಂಬವಾಗಲಿದೆ.

ಬಾದಾಮಿ ಬೆಳೆಯ ಕೇಂದ್ರ: ಮಾವಿನಲ್ಲಿ ಹಲವಾರು ವಿಧಗಳಿವೆ. ರಾಮನಗರ ಜಿಲ್ಲೆಯಲ್ಲಿ ಶೇ.80ರಷ್ಟು ಬಾದಾಮಿ ಬೆಳೆಯುವ ರೈತರಿದ್ದಾರೆ. ಉಳಿದ ಶೇ.20ರಷ್ಟು ರಸಪೂರಿ ನೀಲಂ ಸೇಂದೂರ,ತೋತಾಪುರಿ ಬೆಳೆಯಿದೆ ಆದರೆ ಅತಿ ಹೆಚ್ಚು ಬೇಡಿಕೆ ಮತ್ತು ಆದಾಯಬರುವುದು ಬಾದಾಮಿ ತಳಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಮಾವಿಗೆ ನೆರೆಯ ರಾಜ್ಯಗಳಲ್ಲಿ ಬೇಡಿಕೆ ಇದೆ. ನಮ್ಮ ಜಿಲ್ಲೆಯಲ್ಲಿಬೆಳೆಯುವ ಬಾದಾಮಿಗೆ ಮಹಾರಾಷ್ಟ್ರ ,ಡೆಲ್ಲಿ, ಹೈದರಾಬಾದ್‌, ಕೇರಳರಾಜ್ಯಗಳಲ್ಲೂ ಮಾರುಕಟ್ಟೆ ಇದೆ. ರೇಷ್ಮೆ ನಗರಿ ಎಂದುಖ್ಯಾತಿಪಡೆದಿರುವ ರಾಮನಗರ ಜಿಲ್ಲೆ ಮಾವು ಕೃಷಿಯಲ್ಲೂ ಮುಂದಿರುವುದು ಜಿಲ್ಲೆಗೆ ಮತ್ತೂಂದು ಹೆಗ್ಗಳಿಕೆಯಾಗಿದೆ.

ಶೇ.25 ರಷ್ಟು ಕಾಯಿ ಕಟ್ಟಿದೆ ಶೇ.75 ರಷ್ಟು ಈಗಷ್ಟೆ ಹೂ ಬಿಟ್ಟಿದೆ. ಪ್ರತಿವರ್ಷ ಏಪ್ರಿಲ್‌ನಲ್ಲಿ ಕಟಾವುಆರಂಭವಾಗುತ್ತಿತ್ತು. ಆದರೆ ಈ ಬಾರಿ ಮೇ, ಜೂನ್‌ಗೆ ಕಟಾವಿಗೆ ಬರಲಿದೆ. ಚಿಕ್ಕಬಳ್ಳಾಪುರ ಕೋಲಾರಭಾಗದಲ್ಲಿರುವ ತಳಿಗಳೆ ಬೇರೆ ನಮ್ಮ ಜಿಲ್ಲೆಯಲ್ಲಿರುವತಳಿಗಳೆ ಬೇರೆ. ನಮ್ಮ ಜಿಲ್ಲೆ ಮಾವಿಗೆ ಹೆಚ್ಚು ಬೇಡಿಕೆ ಇದೆ ಹಾಗಾಗಿ ವಿಳಂಬವಾದರೂ ಬೆಲೆ ಕುಸಿತದ ಆತಂಕವಿಲ್ಲ -ಮಂಜು, ಉಪಾಧ್ಯಕ್ಷರು ಮಾವು ಬೆಳೆಗಾರರ ಸಂಘ

ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ಮಾವುಕಟಾವಾಗುತ್ತಿತ್ತು. ಆದರೆ ನಿರಂತರವಾಗಿಸುರಿದ ಮಳೆಯಿಂದಾಗಿ ಶೀತ ಹೆಚ್ಚಾಗಿ ಫೆ.ಕಾಲಿಟ್ಟಿದ್ದರು ಈಗಷ್ಟೆ ಶೇ.50ರಷ್ಟು ಮಾವುಹೂ ಬಿಟ್ಟಿದೆ. ಈ ಬಾರಿ ಮಾವು ಮಾರುಕಟ್ಟೆಪ್ರವೇಶ ಮಾಡುವುದು ವಿಳಂಬವಾಗಲಿದೆ. ಹೆಚ್ಚು ಇಳುವರಿ ಬರುವ ನೀರಿಕ್ಷೆಯೂ ಇದೆ. -ಹರೀಶ್‌ , ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ

-ಬಿ.ಟಿ.ಉಮೇಶ್‌, ಬಾಣಗಹಳ್ಳಿ

ಟಾಪ್ ನ್ಯೂಸ್

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

DKSHI (2)

Pen drive case; ಮುಗಿಸೋದೇ ಕುಮಾರಸ್ವಾಮಿ ಕೆಲಸ: ಡಿ.ಕೆ.ಶಿವಕುಮಾರ್ ಆಕ್ರೋಶ

2–sscl-result

SSLC Result: ಮೇ.9 ರಂದು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

1-qweqweqw

Charmadi Ghat; ಎರಡನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.