ಬಿಡದಿಯ ವಿವಿಧ ಬಡಾವಣೆಯಲ್ಲಿ ಸೌಕರ್ಯವೇ ಇಲ್ಲ

ನಾಗರಿಕರೇ ಚಂದಾ ಎತ್ತಿ ಓವರ್‌ ಹೆಡ್‌ ಟ್ಯಾಂಕ್‌ ಸ್ವಚ್ಛತೆ • ಈ ಬಡಾವಣೆಯಲ್ಲಿ ಕಸ ವಿಲೇವಾರಿ ಇಲ್ಲಿ ಅಪರೂಪ

Team Udayavani, May 6, 2019, 5:33 PM IST

ramanagar-tdy-1..

ರಾಮನಗರ ತಾಲೂಕು ಬಿಡದಿಯ ಹೊಂಬಯ್ಯ, ಬಸವರಾಜು ಲೇಔಟ್‌ನಲ್ಲಿ ರಸ್ತೆ ಮಧ್ಯದಲ್ಲೇ ಕೊಳವೆ ಬಾವಿ ಇದೆ.ಅದಕ್ಕೆ ವಿದ್ಯುತ್‌ ಪೂರೈಸುವ ಪ್ಯಾನಲ್ ಬೋರ್ಡಿನ ಬಾಗಿಲು ಕಿತ್ತು ಹೋಗಿದ್ದು, ಅಪಾಯವೊಡ್ಡಿದೆ.

ರಾಮನಗರ: ಬಿಡದಿ, ರಾಮನಗರ ಜಿಲ್ಲೆಯ ಕೈಗಾರಿಕಾ ನಗರವಾಗಿ ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರ. ಅಭಿವೃದ್ಧಿಗಾಗಿ ಗ್ರಾಪಂ ನಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಇಲ್ಲಿನ ಸಮಸ್ಯೆಗಳಿಗೆ ಮಿತಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಯ ಹಿಂಭಾಗ ಇರುವ ಹೊಂಬಯ್ಯ ಮತ್ತು ಬಸವರಾಜ ಲೇ ಔಟ್ ಪುರಸಭೆಯ ನಿರ್ವಹಣೆಯಿಂದ ವಂಚಿತವಾಗಿದೆ.

ಸಮಸ್ಯೆಗಳಿಗೆ ಸ್ಪಲ್ಪವೂ ಮುಕ್ತಿ ಸಿಕ್ಕಿಲ್ಲ: ಸುಮಾರು 20ಕ್ಕೂ ಹೆಚ್ಚು ವರ್ಷಗಳ ಹಿಂದೆ ಈ ಬಡಾವಣೆಳು ರಚನೆಯಾಗಿದೆ. 60ಕ್ಕೂ ಹೆಚ್ಚು ಮನೆಗಳಿವೆ. ಸಧ್ಯ ಪುರಸಭೆಯ ವಾರ್ಡ್‌ 15ರ ವ್ಯಾಪ್ತಿಯಲ್ಲಿದೆ. ರಸ್ತೆ, ಚರಂಡಿ, ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಸ ವಿಲೇವಾರಿಯಂತೂ ಆಗೋದೆ ಇಲ್ಲ. ನೀರು ಸರಬರಾಜು, ವಿದ್ಯುತ್‌ ಸರಬರಾಜು ಸಮಸ್ಯೆಯೂ ಇದೆ. 2 ದಶಕಗಳ ಕಾಲ ಸಮಸ್ಯೆಗಳ ಸರಮಾಲೆಯಲ್ಲಿ ಹೈರಾಣಾಗಿರುವ ಇಲ್ಲಿ ವಾಸಿಸುವ ಕುಟುಂಬಗಳು ಬಿಡದಿ ಪುರಸಭೆಯಾದ ನಂತರ ಅಭಿವೃದ್ಧಿಯಾಗಬಹುದು ಎಂದು ನಂಬಿದ್ದರು. ಆದರೆ ಅವರ ನಂಬಿಕೆ ಹುಸಿಯಾಗಿದೆ. ಪುರಸಭೆ ರಚನೆಯಾಗಿ 2 ವರ್ಷ ಕಳೆದರು ಇಲ್ಲಿನ ಸಮಸ್ಯೆಗಳಿಗೆ ಸ್ಪಲ್ಪವೂ ಮುಕ್ತಿ ಸಿಕ್ಕಿಲ್ಲ. ಚುನಾಯಿತ ಪ್ರತಿನಿಧಿಗಳು ಕಣ್ಣೊರೆಸುವ ಮತ್ತು ಮೂಗಿಗೆ ತುಪ್ಪ ಸವರುವ ಮಾತುಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಅಧಿಕಾರಿಗಳ ಬಗ್ಗೆ ಹೇಳ್ಳೋದೆ ಬೇಡ ಅಂತಾರೆ ಇಲ್ಲಿಯ ನಿವಾಸಿಗಳು.

ರಸ್ತೆಗಳ ಮಧ್ಯೆ ವಿದ್ಯುತ್‌ ಕಂಬಗಳು: ಬಸವರಾಜ ಬಡಾವಣೆ ಮತ್ತು ಹೊಂಬಯ್ಯ ಬಡಾವಣೆಯಲ್ಲಿ ಕೆಲ ರಸ್ತೆಗಳ ಮಧ್ಯೆ ವಿದ್ಯುತ್‌ ಕಂಬಗಳಿವೆ. ಇದು ಬೆಸ್ಕಾಂ ಮತ್ತು ಪುರಸಭೆಯ ಇಂಜಿನಿಯರ್‌ಗಳ ನಡುವಿನ ಸಂಪರ್ಕದ ಕೊರತೆ ತೋರಿಸುತ್ತದೆ. ನೀರು ಪೂರೈಕೆ ವ್ಯವಸ್ಥೆಯ ಭಾಗವಾಗಿರುವ ಕೊಳವೆ ಬಾವಿ ಕೂಡ ರಸ್ತೆ ಮಧ್ಯೆ ಇದೆ. ಕೊಳವೆ ಬಾವಿಗೆ ಅಳವಿಡಿಸಿರುವ ಸ್ವಿಚ್ಚ್ ಬೋರ್ಡ್‌, ಇದಕ್ಕೆ ಕಲ್ಪಿಸಿರುವ ವಿದ್ಯುತ್‌ ಸಂಪರ್ಕ ಸುಸ್ಥಿತಿಯಲ್ಲಿಲ್ಲದೆ ಅಪಾಯವೊಡ್ಡುತ್ತಿದೆ.

ಒಳಚರಂಡಿ ವ್ಯವಸ್ಥೆ ಇಲ್ಲಿಲ್ಲ: ಹೊಂಬಯ್ಯ ಮತ್ತು ಬಸವರಾಜು ಲೇಔಟ್‌ಗಳು ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿವೆ. ಚರಂಡಿಗಳ ಮೂಲಕವೇ ಎಲ್ಲಾ ಕಲ್ಷ್ಮಶಗಳು ಸಾಗುತ್ತಿವೆ. ಚರಂಡಿಗಳ ಮೇಲೆ ಸ್ಲಾಬ್‌ಗಳನ್ನು ಮುಚ್ಚದೆ ಇರುವುದರಿಂದ ಗಬ್ಬು ವಾಸನೆ ಬಡಾವಣೆಗಳನ್ನು ಆವರಿಸಿರುತ್ತದೆ. ಸೊಳ್ಳೆ ಮುಂತಾದ ಕ್ರಿಮಿಕೀಟಗಳು ಆವಾಸ ಸ್ಥಾನವಾಗಿವಿದೆ. ಅಲ್ಲದೆ ಚರಂಡಿಗಳ ಮೂಲಕ ಸಾಗುವ ಮಲೀನ ನೀರು ನೇರ ಶೇಖರಣೆಯಾಗುತ್ತಿರುವುದು ಸರ್ಕಾರಿ ಆಸ್ಪತ್ರೆಯ ಆವರಣದ ಹಿಂಭಾಗದಲ್ಲಿ. ಮಲೀನ ನೀರು ಶೇಖರಣೆಯಾಗಿ ಆಸ್ಪತ್ರೆಯ ರೋಗಿಗಳನ್ನು ಬಾಧಿಸುತ್ತಿದೆ.

ಕಸ ವಿಲೇವಾರಿ ಅಪರೂಪ: ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಈ ಬಡಾವಣೆಗಳಲ್ಲಿ ಕಸ ವಿಲೇವಾರಿದ್ದು ಸಮಸ್ಯೆಯೇ! ಅಪರೂಪಕ್ಕೊಮ್ಮೆ ಇಲ್ಲಿ ಕಸ ವಿಲೇವಾರಿಯಾಗುತ್ತಿದೆ. ಸಮಸ್ಯೆಗಳ ಸರಮಾಲೆಯಲ್ಲೇ ನರಳುತ್ತಿರುವ ಈ ಬಡಾವಣೆಗಳ ಕುಟುಂಬಗಳು ಪದೇ ಪದೆ ಪುರಸಭೆಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಗಮನ ಸೆಳೆದರು ಉಪಯೋಗವಾಗಿಲ್ಲ ಎಂದು ದೂರಿದ್ದಾರೆ.

ಸರ್ಕಾರಿ ಆಸ್ಪತ್ರೆಯ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿದ ನಾಗರಿಕರು

ಬಿಡದಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಓವರ್‌ ಹೆಡ್‌ ನೀರಿನ ಟ್ಯಾಂಕ್‌ ಇದೆ. ಇದನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿದ್ದವು. ಸದರಿ ಟ್ಯಾಂಕಿನಿಂದಲೇ ಆಸ್ಪತ್ರೆಗೆ ಮತ್ತು ಬಸವರಾಜು ಬಡಾವಣೆಗೆ ನೀರು ಪೂರೈಕೆಯಾಗುತ್ತಿತ್ತು. ಕಾಂಕ್ರಿಟ್ ಟ್ಯಾಂಕ್‌ ನಿರ್ವಹಣೆಯ ಇಲ್ಲದೆ ಗಿಡಗಂಟಿಗಳು, ಬಳ್ಳಿಗಳಿಂದ ಆವೃತ್ತವಾಗಿದ್ದವು. ಟ್ಯಾಂಕ್‌ ಸ್ವಚ್ಛತೆಗೆ ಮನವಿ ಮಾಡಿಕೊಂಡರು ಆಸ್ಪತ್ರೆಯ ಅಧಿಕಾರಿಗಳಾಗಲಿ, ಪುರಸಭೆಯ ಅಧಿಕಾರಿಗಳಾಗಲಿ ಗಮನ ಹರಿಸಲಿಲ್ಲ. ಹೀಗಾಗಿ ಬಡಾವಣೆಯ ನಾಗರಿಕರೆ ಪರಸ್ಪರ ಸಹಕಾರದಲ್ಲಿ ಸಂಪನ್ಮೂಲ ಕ್ರೂಢೀಕರಿಸಿ ಟ್ಯಾಂಕ್‌ ಸ್ವಚ್ಛಗೊಳಿಸಿದ್ದಾರೆ. ನಾಗರಿಕರೇ ಕೈಗೊಂಡ ಈ ಕಾರ್ಯ ಪುರಸಭೆಯ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಬಿಡದಿಯ ನಾಗರಿಕರು ಹಿಡಿ ಶಾಪ ಹಾಕಿದ್ದಾರೆ. ಮೈಸೂರು ಅರಸರು ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವಾದ್ದರಿಂದ ಈ ಸ್ಥಳಕ್ಕೆ ಬಡದಿ ಎಂದು ಹೆಸರು ಬಂದಿದೆ ಎಂಬುದು ಇಲ್ಲಿನ ಹಿರಿಯರ ಹೇಳಿಕೆ. ಅರಸರು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳ ಇಂದು ಸ್ವಚ್ಛ ಪರಿಸರ ಕಳೆದುಕೊಳ್ಳುತ್ತಿದೆ. ಜಿಲ್ಲಾಡಳಿತ ತಕ್ಷಣ ಇತ್ತ ಗಮನ ಹರಿಸಿ ಬಿಡದಿಯನ್ನು ಉಳಿಸಬೇಕಾಗಿದೆ.
● ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.