ರಾತ್ರಿ ವೇಳೆ ಎಟಿಎಂಗಳಿಗೆ ಬೀಗ: ಜನರ ಪರದಾಟ
Team Udayavani, May 6, 2019, 5:38 PM IST
ಮಾಗಡಿ: ಪಟ್ಟಣದಲ್ಲಿ ಎಟಿಎಂಗಳು ಇದ್ದರೂ ಇಲ್ಲದಂತಾಗಿದ್ದು, ನಿಜಕ್ಕೂ ಗ್ರಾಹಕರಿಗೆ ನಿರುಪಯುಕ್ತವಾಗಿದೆ. ದಿನದ 24 ಗಂಟೆಯೂ ಗ್ರಾಹಕರಿಗೆ ಹಣ ತೆಗೆಯಲು ಅನುಕೂಲವಾಗುವಂತದ್ದು, ಎಟಿಎಂಗಳ ಸೇವೆಯನ್ನು ಬ್ಯಾಂಕ್ಗಳು ಒದಗಿಸಿದೆ. ಆದರೆ ಪಟ್ಟಣದಲ್ಲಿರುವ ಬಹುತೇಕ ಎಲ್ಲಾ ಎಟಿಎಂಗಳು ಬೆಳಗ್ಗೆ ಮತ್ತು ರಾತ್ರಿ ವೇಳೆ ಮುಚ್ಚಿರುತ್ತದೆ. ಗ್ರಾಹಕರು ಎಟಿಎಂಗಳಲ್ಲಿ ತುರ್ತು ಅಗತ್ಯ ಹಣ ತೆಗೆಯಲಾಗದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಬ್ಯಾಂಕ್ಗಳ ವ್ಯವಸ್ಥಾಪಕರಂತೂ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಗ್ರಾಹಕರ ಆರೋಪವಾಗಿದೆ.
ಅದರಲ್ಲೂ ವಾರದ ರಜೆದಿನಗಳಂತೂ ಎಟಿಎಂಗಳು ಮುಚ್ಚಿರುವುದರಿಂದ ಗ್ರಾಹಕರು ಎಟಿಎಂಗಳಲ್ಲಿ ಹಣ ಪಡೆಯಲಾಗದೆ ಪರದಾಟದ ಸಮಸ್ಯೆ ಹೇಳತೀರದು, ಬ್ಯಾಂಕ್ ಕಾರ್ಯನಿರ್ವಹಿಸುವುದು ರಜಾ ದಿನ ಹೊರತುಪಡಿಸಿ ಸೋಮವಾರದಿಂದ ಶನಿವಾರ ಕೆಲಸದ ವೇಳೆ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತವೆ.
ಆ ವೇಳೆಗಾದರೂ ಹಣ ಪಡೆಯಲು ಗ್ರಾಹಕರು ಬ್ಯಾಂಕ್ಗೆ ತೆರಳಿ ತರ್ತು ಹಣ ಕೇಳಿದರೆ ಇಲ್ಲಿ ಹಣ ಕೊಡಲಾಗುವುದಿಲ್ಲ, ಎಟಿಎಂ ಬಳಸಿ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಬ್ಯಾಂಕ್ ಸಮಯದಲ್ಲಿ ಮಾತ್ರ ಎಟಿಎಂಗಳು ತೆರೆದುಕೊಳ್ಳುತ್ತದೆ. ಆ ವೇಳೆ ಎಟಿಎಂ ಮುಂದೆ ಗ್ರಾಹಕರು ಸರದಿಯಲ್ಲಿ ನಿಂತಿರುತ್ತಾರೆ. ಕನಿಷ್ಠ 1 ರಿಂದ 2 ಗಂಟೆ ಹಣಕ್ಕಾಗಿ ಎಟಿಎಂ ಮುಂದೆ ನಿಲ್ಲಬೇಕಿರುತ್ತದೆ. ಸಂಜೆಯೋ ಅಥವಾ ರಾತ್ರಿಯೋ ಎಟಿಎಂಗಳಲ್ಲಿ ಹಣ ತೆಗೆದುಕೊಂಡರಾಯಿತು ಎಂದು ರಾತ್ರಿ ಸಮಯದಲ್ಲಿ ಹೋದರೆ ಬಹುತೇಕ ಎಲ್ಲಾ ಎಟಿಎಂಗಳು ಮುಚ್ಚಿರುತ್ತದೆ. ಯಾವ ಎಟಿಎಂಗಳು ಕಾರ್ಯನಿರ್ವಹಿಸುತ್ತಿರುವುದಿಲ್ಲ, ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ ಹಣ ಖಾಲಿಯಾಗಿರುತ್ತದೆ. ಎಟಿಎಂಗಳಲ್ಲಿ ಹಣ ಸಿಗದೆ ಇರುವುದರಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸಬೇಕಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ಎಟಿಎಂಗಳು ದಿನ 24 ಗಂಟೆಯೂ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸೇವೆಗೆ ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಹಕರ ಒಕ್ಕರಲಿನಿಂದ ಮನವಿ ಮಾಡಿ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ