ಅರಣ್ಯ ರಕ್ಷಣೆಗೆ ಇಲಾಖೆ 24×7 ಅಲರ್ಟ್‌

ಕಾಡ್ಗಿಚ್ಚಿನ ಮೇಲೆ ನಿಗಾ ಇಡಲು ಸ್ಯಾಟ್‌ಲೈಟ್‌ ನೆರವು „ ಜಿಲ್ಲೆಯಲ್ಲಿ ಬೆಂಕಿ ಅನಾಹುತ ಸಂಭವಿಸದಂತೆ ಎಚ್ಚರ

Team Udayavani, Jan 16, 2020, 4:11 PM IST

16-January-22

ರಾಮನಗರ: ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ, ಅದರ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸಜ್ಜಾಗುತ್ತಿದೆ.

ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ದೊಡ್ಡ ಮಟ್ಟದ ಬೆಂಕಿ ಅನಾಹುತಗಳು ಜಿಲ್ಲೆಯ ಅರಣ್ಯದಲ್ಲಿ ಘಟಿಸಿಲ್ಲ ಎಂಬುದೇ ಸಮಾಧಾನ. ಆದರೂ ಇಲಾಖೆ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಕಳೆದ ವರ್ಷಗಳಲ್ಲಿ ರಾಮನಗರ ವಿಭಾಗದಲ್ಲಿ ಒಟ್ಟು ಸುಮಾರು 5 ಹೆಕ್ಟೇರ್‌ ನಷ್ಟು ಮಾತ್ರ ಕಾಡು ಬೆಂಕಿಗಾಹುತಿಯಾಗಿದೆ.

ಕ್ವಿಕ್‌ ರೆಸ್ಪಾನ್ಸ್‌ ವಾಹನ ಖರೀದಿಗೆ ಪ್ರಸ್ತಾವನೆ: ಬೆಂಕಿ ರೇಖೆ ನಿರ್ಮಾಣ (ಫೈರ್‌ಲೈನ್‌), ಬೆಂಕಿ ವೀಕ್ಷಕರ ನೇಮಕ (ಫೈರ್‌ ವಾಚರ್ಸ್‌) ಮತ್ತು ಬೆಂಕಿ ನಂದಕ ಯಂತ್ರ(ಫೈರ್‌ ಬ್ಲೋಯರ್) ಮುಂತಾದ ಮುಂಜಾಗೃತ ಕ್ರಮಗಳನ್ನು ಸಿದ್ದಪಡಿಸಿಕೊಳ್ಳುತ್ತಿದೆ. ಅಗ್ನಿ ಶಾಮಕ ದಳಗಳ ಬಳಿ ಜೀಪ್‌ ರೀತಿಯ ಚಿಕ್ಕ ವಾಹನಗಳಿವೆ. ಇಂತಹ ವಾಹನಗಳಲ್ಲಿ ನೀರಿನ ಟ್ಯಾಂಕ್‌ ಮತ್ತು ಅಗ್ನಿ ನಂದಕ ಪರಿಕರಗಳು ಇರುತ್ತವೆ. ಇದಕ್ಕೆ ಕ್ವಿಕ್‌ ರೆಸ್ಪಾನ್ಸ್‌ ವೆಹಿಕಲ್‌ ಎನ್ನಲಾಗುತ್ತದೆ. ಇಂತಹ ವಾಹನವನ್ನು ಖರೀದಿಸಲು ಇಲಾಖೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶೇ 99 ಕಾಡ್ಗಿಚಿಗೆ ಮಾನವನೇ ಕಾರಣ! ಮಾನವ ಕಾಡಂಚಿನಲ್ಲಿ ಓಡಾಡುವಾಗ ಬೀಡಿ, ಸಿಗರೇಟು ಸೇದಿ ಬೀಸಾಡುವುದು, ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮೋಜು-ಮಸ್ತಿ ಸಂದರ್ಭದಲ್ಲಿ ಅಡುಗೆ ಮಾಡಿ ಕೊಳ್ಳುವುದು, ಉದ್ದೇಶ ಪೂರ್ವಕವಾಗಿಯೇ ಬೆಂಕಿ ಹಚ್ಚುವುದು, ಕಾಡಂಚಿನಲ್ಲಿರುವ ಹೊಲ, ಗದ್ದೆಗಳಲ್ಲಿ ಕಳೆ ಮುಂತಾದ ಬೇಡದ ಗಿಡಗಳ ನಾಶಕ್ಕೆ ಬೆಂಕಿ ಹೊತ್ತಿಸುವುದರಿಂದ ಅರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ.

ಬೆಂಕಿ ಅನಾಹುತ ಮೂರು ವಿಧ: ಗ್ರೌಂಡ್‌ ಫೈರ್‌ (ತರಗು, ಹುಲ್ಲಿಗೆ ಬೆಂಕಿ), ಮಿಡ್‌ ಫೈರ್‌ (ಪೊದೆ, ಲಂಟಾನ ಇತ್ಯಾದಿಗೆ ಬೆಂಕಿ), ಕ್ರೌನ್‌ ಫೈರ್‌ (ಮರಗಳ ತುದಿಯಲ್ಲಿ ಕಾಣಸಿಕೊಳ್ಳುವ ಬೆಂಕಿ) ಎಂಬ ಮೂರು ವಿಧದ ಕಾಡ್ಗಿಚನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಈ ಪೈಕಿ ಅತ್ಯಂತ ಅಪಾಯಕಾರಿ ಕ್ರೌನ್‌ ಫೈರ್‌. ಮರಗಳ ಮೇಲಾºಗದಲ್ಲಿ ಬೆಂಕಿ ಉರಿದು, ಅಕ್ಕ ಪಕ್ಕದ ಮರಗಳಿಗೂ ಅದು ವ್ಯಾಪಿಸುತ್ತವೆ. ಮೇಲ್ಬಾಗ ಉರಿದಂತೆಲ್ಲ ಅವುಗಳ ಕೊಂಬೆ, ಎಲೆಗಳು ಕೆಳಗೆ ಬೀಳುತ್ತವೆ. ಹೀಗಾಗಿ ಇವುಗಳ ನಿಯಂತ್ರಣ ಸುಲಭವಲ್ಲ, ಹೆಲಿ ಕಾಪ್ಟರ್‌ಗಳ ಮೂಲಕ ನೀರು ಸುರಿದು
ನಂದಿಸುವುದೊಂದೆ ಉಪಾಯ!

ರಾಮನಗರ ಜಿಲ್ಲೆಯಲ್ಲಿ ಹುಲ್ಲು, ತರಗುಗಳಿಂದ ಕೂಡಿದ ಕುರುಚುಲು ಕಾಡಿನ ಪ್ರಮಾಣವೇ ಅಧಿಕವಿದ್ದು, ಹುಲ್ಲು, ತರಗಿಗೆ ಬೆಂಕಿ ಹೊತ್ತಿಕೊಂಡಾಗ ಅವು ನೆಲದಲ್ಲೇ (ಗ್ರೌಂಡ್‌ ಫೈರ್‌) ಹರಡುತ್ತಾ ಹೋಗುತ್ತದೆ. ಈ ರೀತಿಯ ಬೆಂಕಿಯನ್ನು ನಂದಿಸಲು ಬೆಂಕಿ ರೇಖೆಗಳು (ಫೈರ್‌ ಲೈನ್‌) ಸಹಕಾರಿ. ಇತ್ತೀಚಿನ ದಿನಗಳಲ್ಲಿ ಇಲಾಖೆ ಫೈರ್‌ ಬ್ಲೋಯೆರ್‌ಗಳನ್ನು ಖರೀದಿಸಿದ್ದು, ಈ ಬ್ಲೋಯೆರ್‌ಗಳು ಗಾಳಿಯನ್ನು ಊದಿ ಬೆಂಕಿ ನಂದಿಸುತ್ತವೆ.

22 ಕಿಮೀ ಫೈರ್‌ ಲೈನ್‌ ನಿರ್ಮಾಣ: ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ ಪಕ್ಕ, ಕಾಡಿನೊಳಗಿನ ಕಾಲು ದಾರಿಗಳು, ಬೆಂಕಿ ಸಂಭಾವ್ಯ ಇರುವ ಸ್ಥಳಗಳನ್ನು ಗುರುತಿಸಲಾಗಿರುತ್ತದೆ. ಅಗತ್ಯ ವಿದ್ದಷ್ಟು ಉದ್ಧ ಮತ್ತು ಮೂರು ಮೀಟರ್‌ ಅಗಲಕ್ಕೆ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಹುಲ್ಲು, ತರಗು
ಗಿಡಗಳನ್ನು ನಾಶ ಪಡಿಸುತ್ತಾರೆ, ಇದು ಬೆಂಕಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಹರಡುವುದನ್ನು ತಡೆಯುತ್ತದೆ. ರಾಮನಗರ ಜಿಲ್ಲೆಯಲ್ಲಿ ಎಲ್ಲಾ 5 ರೇಂಜ್‌ ಗಳಲ್ಲೂ ಇಲಾಖೆ ಸುಮಾರು 122 ಕಿಮೀ ಉದ್ದದ ಫೈರ್‌ ಲೈನ್‌ ನಿರ್ಮಾಣ ಮಾಡಲು ಆರಂಭಿಸಿದೆ.

60ಕ್ಕೂ ಫೈರ್‌ ವಾಚರ್ ನಿಯೋಜನೆ: ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿಯನ್ನು ಪತ್ತೆ ಹಚ್ಚಲು ಇಲಾಖೆ 60ಕ್ಕೂ ಹೆಚ್ಚು ಫೈರ್‌ ವಾಚರ್‌ಗಳನ್ನು ನಿಯೋಜಿಸುತ್ತಿದೆ. ತನ್ನದೇ ಸಿಬ್ಬಂದಿ ಜೊತೆಗೆ ತತ್ಕಾಲಿಕವಾಗಿ ಬೇರೆಯವನ್ನು ನೇಮಿಸಿಕೊಂಡು ನಿಯೋಜಿಸಲಾಗುತ್ತದೆ. ತಲಾ ಗುಂಪಿನಲ್ಲಿ ಮೂವರು ವಾಚರ್‌ಗಳಿದ್ದು, ವಾಚ್‌ ಟವರ್‌ಗಳು, ಫಾರೆಸ್ಟ್‌ ಐ ಪಾಯಿಂಟ್‌ಗಳಲ್ಲಿ ಇವರ ನಿಯೋಜನೆಯಾಗುತ್ತದೆ.

ಇವರು ತಮ್ಮ ವ್ಯಾಪ್ತಿಯೊಳಗಿನ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡರೆ, ತಕ್ಷಣ ಆ ವಿಚಾರವನ್ನು ತಮ್ಮ ಹಿರಿಯ ಅಧಿಕಾರಿಗಳ ಗಮನ ಸೆಳೆಯುತ್ತಾರೆ. ಬೆಂಕಿ ನಂದಿಸಲು ಕಾರ್ಯ ಪ್ರವೃತ್ತರಾಗುತ್ತಾರೆ.

ಟಾಪ್ ನ್ಯೂಸ್

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.