ಹಳ್ಳ ಹಿಡಿದಿರುವ ಆರ್‌ಟಿಇ ಯೋಜನೆ

ಪೋಷಕರ ನಕಲಿ ವಾಸಸ್ಥಳದ ದಾಖಲೆ ಸೃಷ್ಟಿಸಿ ಪ್ರವೇಶಾತಿ | ಅಧಿಕಾರಿಗಳು ಶಾಮೀಲಾಗಿರುವ ಶಂಕೆ

Team Udayavani, May 31, 2019, 10:40 AM IST

Udayavani Kannada Newspaper

ಚನ್ನಪಟ್ಟಣ: ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗಿರುವ ಮಕ್ಕಳಿಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಒಂದೆಡೆಯಾ ದರೆ, ನಕಲಿ ದಾಖಲೆ ಸೃಷ್ಟಿಸಿ, ಕೆಲ ಪ್ರಭಾವಿಗಳು ಆರ್‌ಟಿಇ ಅಡಿ ತಮ್ಮ ಮಕ್ಕಳಿಗೆ ದಾಖಲಾತಿ ಪಡೆಯುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚಿ ದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪ್ರತಿ ಮಗುವಿಗೂ ಕಡ್ಡಾಯ ಹಾಗೂ ಗುಣ ಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯ ದೊಂದಿಗೆ ಸರ್ಕಾರ ಆರ್‌ಟಿಇ ಮೂಲಕ ಬಡ ಮಕ್ಕಳಿಗೆ ವಾಸವಿರುವ ನೆರೆಹೊರೆಯ ಖಾಸಗಿ ಶಾಲೆಗಳಲ್ಲಿ ಹಣ ಪಾವತಿಸಿ, ಉಚಿತ ಕಲಿಕೆಗೆ ಅವಕಾಶಮಾಡಿಕೊಟ್ಟಿದೆ. ಆದರೆ ಕೆಲವರು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರದ ಮೂಲ ಆಶಯಕ್ಕೆ ಧಕ್ಕೆ ತಂದಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಪ್ರವೇಶಾತಿ: ಗ್ರಾಮೀಣ ಭಾಗದಲ್ಲಿ ವಾಸವಿರುವ ಕೆಲ ಸ್ಥಿತಿವಂತರು, ತಾವು ಪಟ್ಟಣ ಪ್ರದೇಶದಲ್ಲಿ ವಾಸಿಸುತ್ತಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರ್‌ಟಿಇ ಅಡಿಯಲ್ಲಿ ತಮ್ಮ ಮಕ್ಕಳಿಗೆ ಪ್ರವೇಶಾತಿ ಪಡೆದಿದ್ದಾರೆ‌. ತಾವು ದಾಖಲು ಮಾಡಬೇಕು ಎಂದುಕೊಂಡಿರುವ ಶಾಲೆಗಳ ಅಕ್ಕ ಪಕ್ಕದಲ್ಲಿಯೇ ವಾಸವಿರುವ ಬಗ್ಗೆ ನಗರಸಭೆಯಲ್ಲಿ ನಕಲಿ ವಾಸಸ್ಥಳ ದೃಢೀಕರಣ ಪಡೆದುಕೊಂಡು ದಾಖಲಾತಿ ವೇಳೆ ಅರ್ಜಿಯೊಂದಿಗೆ ಸಲ್ಲಿಸಿ ಸೀಟು ಪಡೆದು ಸರ್ಕಾರಕ್ಕೆ ವಂಚನೆ ಯೆಸಗಿದ್ದಾರೆ. ಆದರೆ ಮಕ್ಕಳ ಹಾಗೂ ವಾಸಸ್ಥಳದ ದಾಖಲೆ ಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿಯೇ ಸರ್ಕಾರದ ಉದ್ದೇಶ ಹಳ್ಳಹಿಡಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪೋಷಕರ ವಾಸಸ್ಥಳ ದಿಢೀರ್‌ ಸ್ಥಳಾಂತರ: ಪೋಷಕರು ತಮ್ಮ ಮಕ್ಕಳಿಗಾಗಿ ಆರ್‌ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ತಮ್ಮ ಮೂಲ ವಾಸಸ್ಥಳವನ್ನು ಗ್ರಾಮೀಣ ಪ್ರದೇಶದಲ್ಲಿದೆ ಎಂದು ದಾಖಲಿಸಿದ್ದಾರೆ.

ಆದರೆ ತಮ್ಮ ಮಗುವನ್ನು ದಾಖಲಿಸಬೇಕೆಂದಿರುವ ಖಾಸಗಿ ಶಾಲೆಗೆ ತಮ್ಮ ವಾಸಸ್ಥಳ 5 ಕಿಮೀ ಒಳಗೆ ಇದೇ ಎಂದು ದಾಖಲಾತಿಗಳನ್ನು ಪ್ರಭಾವಿಗಳು ಲಗತ್ತಿಸಿದ್ದಾರೆ. ಆದರೆ ದಾಖಲಾತಿ ಸಮಯದಲ್ಲಿ ಅವರ ವಾಸಸ್ಥಳ ಮಾತ್ರ ತಾವು ದಾಖಲಿಸಬೇಕಾದ ಶಾಲೆಯ ಸನಿಹದಲ್ಲೇ ಇದೆ. ದಾಖಲಾತಿಗಾಗಿ ಅವರು ಮನೆ ತೊರೆದು ಶಾಲೆಯ ಸನಿಹಕ್ಕೆ ಬಂದಿದ್ದಾರೋ ಅಥವಾ ಇಲ್ಲವೋ ಎಂಬುದು ಮಾತ್ರ ತಿಳಿಯುತ್ತಿಲ್ಲ. ದಾಖಲಾತಿ ಆದ ನಂತರ ದಿಢೀರನೆ ಅವರ ವಾಸ ಖಾಸಗಿ ಶಾಲೆಯ ಹತ್ತಿರದಿಂದ, ಗ್ರಾಮೀಣ ಭಾಗದ ಮೂಲಸ್ಥಾನಕ್ಕೆ ಸ್ಥಳಾಂತರವಾಗಿರುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಗ್ರಾಮೀಣ ಖಾಸಗಿ ಶಾಲೆಗಳು ಬೇಡ: ಪಟ್ಟಣ ವ್ಯಾಪ್ತಿಯ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪಡೆದುಕೊಂಡಿರುವ ಪ್ರಭಾವಿಗಳಿಗೆ ತಮ್ಮ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿರುವ ಖಾಸಗಿ ಶಾಲೆಗಳು ಕಂಡಿಲ್ಲ. ಬದಲಾಗಿ ಅವರಿಗೆ ಪ್ರತಿಷ್ಠಿತ ಶಾಲೆಗಳೇ ಆಯ್ಕೆಯಾಗಿದ್ದವು. ಅದೇನೇ ಆಗಲಿ ದಾಖಲೆಗಳನ್ನು ತಿರುಚಿಯಾದರೂ ಸರಿ, ದಾಖಲಾತಿ ಪಡೆಯಲೇಬೇಕೆಂಬ ಜಿದ್ದಿಗೆ ಬಿದ್ದು ನಗರಸಭೆ ಅಧಿಕಾರಿಗಳ ಮೂಲಕ ನಕಲಿ ವಾಸಸ್ಥಳ ದೃಢೀಕರಣ ಪಡೆದು ತಮ್ಮ ಮಕ್ಕಳನ್ನು ದಾಖಲು ಮಾಡಿದ್ದಾರೆ.

ಶಾಲಾ ವಾಹನ ವ್ಯವಸ್ಥೆಯನ್ನೂ ಕೇಳ್ತಾರೆ: ಹೇಳಿಕೇಳಿ ಆರ್‌ಟಿಇ ಕಾಯ್ದೆಯಡಿ ದಾಖಲಾಗಿರುವ ವಿದ್ಯಾರ್ಥಿಗಳು ನೆರೆಹೊರೆ ಯವರಾಗಿರಬೇಕು ಎನ್ನುವ ನಿಯಮವಿದೆ. ಪಟ್ಟಣದ ಬಾಲು ಪಬ್ಲಿಕ್‌ ಶಾಲೆಯಲ್ಲಿ ಗುರುವಾರ ನಡೆದ ಆರ್‌ಟಿಇ ಪೋಷಕರ ಸಭೆಯಲ್ಲಿ ಪೋಷಕರೊಬ್ಬರು ವಾಹನ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಗಮನ ಸೆಳೆದರು. ಪಟ್ಟಣದಲ್ಲಿ ವಾಸವಿದ್ದೇವೆಂದು ನಕಲಿ ದಾಖಲೆ ನೀಡಿ, ದಾಖಲು ಮಾಡಿದ್ದೂ ಅಲ್ಲದೆ ಶಾಲೆಗಳ ಆಡಳಿತ ಮಂಡಳಿಗಳಿಗೆ ವಾಹನಗಳ ವ್ಯವಸ್ಥೆಯನ್ನೂ ಉಚಿತವಾಗಿ ನೀಡಬೇಕೆನ್ನುವ ಹಕ್ಕನ್ನು ಕೆಲ ಪೋಷಕರು ಪ್ರತಿಪಾದಿಸುತ್ತಿರುವುದು ಇಡೀ ಯೋಜನೆ ಹಳಿತಪ್ಪಿದೆ ಎಂಬುದಕ್ಕೆ ನಿದರ್ಶನವಾಗಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ನಕಲಿ ದಾಖಲೆ ನೀಡಿ ದಾಖಲಾತಿ ಪಡೆದುಕೊಂಡು, ಸರ್ಕಾರದ ಆಶಯಕ್ಕೆ ಧಕ್ಕೆ ತಂದಿರುವ ಬಗ್ಗೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ದಾಖಲಾತಿಗಳನ್ನು ಪರಿಶೀಲಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ಸಿರಿವಂತರಿಗೂ ಸೀಟು: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣದ ಜತೆಗೆ ಗುಣ ಮಟ್ಟದ ಶಿಕ್ಷಣ ಸಿಗಬೇಕೆಂಬುದು ಆರ್‌ಟಿಇ ಯೋಜನೆ ಆಶಯವಾಗಿದೆ. ಆದರೆ ಅದು ಬಡಮಕ್ಕಳಿಗೆ ಮಾತ್ರವಲ್ಲ, ಸ್ಥಿತಿವಂತರಿಗೂ ಲಭ್ಯವಾಗಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರಸಿದ್ಧಿ ಪಡೆದಿರುವ ಖಾಸಗಿ ಶಾಲೆಗಳಲ್ಲಿ ಸೀಟು ಸಿಕ್ಕಿಲ್ಲ. ಬದಲಾಗಿ ಬಡತನರೇಖೆಗಿಂತ ಮೇಲಿರುವ ವರೂ ತಮ್ಮ ಪ್ರಭಾವ ಬಳಸಿ ದಾಖಲಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಆರ್‌ಟಿಇ ಅಡಿ ದಾಖಲಾತಿಗೆ ಆನ್‌ಲೈನ್‌ ವ್ಯವಸ್ಥೆ ಇರಲಿಲ್ಲ. ಬದಲಾಗಿ ಆಯಾ ಖಾಸಗಿ ಶಾಲೆಗಳೇ ಅರ್ಜಿಯೊಂದಿಗೆ ದಾಖಲಾತಿಗಳನ್ನು ಪಡೆದು, ಶಿಕ್ಷಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡುತ್ತಿದ್ದವು. ಅರ್ಜಿದಾರರು ಶಾಲೆಯ ನೆರೆ ಹೊರೆಯವರಾಗಿದ್ದಾರೆಯೋ ಇಲ್ಲವೋ ಎಂಬ ಬಗ್ಗೆ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕಿತ್ತು. ಆದರೆ ಆ ಕೆಲಸ ಆಗದಿರುವುದೇ ಬಡ ಮಕ್ಕಳು ಮಹತ್ವಾಕಾಂಕ್ಷಿ ಯೋಜನೆಯಿಂದ ವಂಚಿತರಾಗುವಂತಾಗಿದೆ.

●ಎಂ.ಶಿವಮಾದು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.