ಕಾರ್ಯಾರಂಭಕ್ಕೆ ಪ್ರಿಂಟರ್ ಕ್ಲಸ್ಟರ್ ಸಿದ್ಧ
Team Udayavani, Jun 6, 2020, 6:29 AM IST
ಕನಕಪುರ: ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಮತ್ತು ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಹಾರೋಹಳ್ಳಿ ಕೈಗಾರಿಕೆ ಪ್ರದೇಶದ 60 ಎಕರೆ ಜಾಗದಲ್ಲಿ ಪ್ರಿಂಟರ್ ಕ್ಲಸ್ಟರ್ ಸ್ಥಾಪನೆ ಮಾಡಲಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಸಿ.ಆರ್. ಜನಾರ್ದನ್ ತಿಳಿಸಿದರು.
ತಾಲೂಕಿನ ಹಾರೋಹಳ್ಳಿ ಕೈಗಾರಿಕೆ ಪ್ರದೇಶದ ಪ್ರಿಂಟರ್ ಕ್ಲಸ್ಟರ್ ಕಾರ್ಖಾನೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದ 10 ಕೋಟಿ ಹಾಗೂ ರಾಜ್ಯದ 3 ಕೋಟಿ ಮತ್ತು ಪ್ರಿಂಟರ್ ಅಸೋಸಿಯೇಷನ್ನಿಂದ 12 ಕೋಟಿ ಬಂಡವಾಳ ಹೂಡಿ ಭಾರತದಲ್ಲಿ ಮೊದಲ ಬಾರಿಗೆ ಹಾರೋಹಳ್ಳಿ ಕೈಗಾರಿಕೆ ಪ್ರದೇಶದ 60 ಎಕರೆ ವಿಸ್ತೀರ್ ದಲ್ಲಿ ಪ್ರಿಂಟರ್ ಕ್ಲಸ್ಟರ್ ಸ್ಥಾಪಿಸಲಾಗಿದೆ.
ಮುದ್ರಣಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಶಿವಕಾಶಿಗೆ ಹೋಗಬೇಕಿತ್ತು. ಇನ್ನು ಮುಂದೆ ಅಂತಹ ಸೇವೆಗಳು ಇಲ್ಲೇ ಸಿಗಲಿದೆ. ಒಂದು ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶವಿದೆ. ಇದರಿಂದ ಭಾರತದ ಒಟ್ಟು 3 ಲಕ್ಷ ಮುದ್ರಣಾಲಯಗಳು ತಮ್ಮ ಆಧುನಿಕತೆ ಅಳವಡಿಸಿಕೊಳ್ಳಲು ಇದು ಮಾದರಿಯಾಗಲಿದೆ ಎಂದರು. ಕಾರ್ಖಾನೆ ಸಂಪೂರ್ಣವಾಗಿ ಸೇವೆಗೆ ಸಿದಗೊಂಡಿದೆ.
ಲಾಕ್ಡೌನ್ ಮುಗಿದ ನಂತರ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರದ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ದೇಶದ 675 ಜಿಲ್ಲೆಗಳಲ್ಲಿ ರಾಮನಗರ ಜಿಲ್ಲೆಗೆ ಸಿಕ್ಕಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಿ ಎಂದರು. ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಪೇರಿಕಲ್ ಎಂ.ಸುಂದರ್, ನಿರ್ದೇಶಕ ರಾಜ್ಪುರೋಹಿತ್, ಕಾರ್ಯದರ್ಶಿ ಸುಗ್ನಾನ್ ಮೂರ್ತಿ, ಪ್ರಿಂಟರ್ ಕ್ಲಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ