ಕೇಳುವವರಿಲ್ಲ ರಾಮಮ್ಮನ ಕೆರೆ ಗೋಳು


Team Udayavani, May 9, 2019, 4:10 PM IST

ram-1

ಚನ್ನಪಟ್ಟಣ: ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಪ್ರಸಿದ್ಧ್ದವಾದ ರಾಮಮ್ಮನ ಕೆರೆಯು ಅವನತಿಯತ್ತ ಸಾಗಿದೆ. ಪಟ್ಟಣದ ಕಲುಷಿತ ನೀರು, ಒಣ ಹಾಗೂ ಹಸಿ ತ್ಯಾಜ್ಯ ಪ್ರತಿನಿತ್ಯ ರಾಮಮ್ಮನ ಕೆರೆ ಒಡಲಿಗೆ ಸೇರುತ್ತಿದ್ದರೆ, ಇನ್ನೊಂದೆಡೆ ಅತಿಕ್ರಮಣದಿಂದಲೂ ಕೆರೆ ತನ್ನ ವಿಸ್ತಾರವನ್ನು ಕಳೆದುಕೊಳ್ಳುತ್ತಿದೆ. ಆದರೂ ಸಂಬಂಧಿಸಿದ ಅಧಿಕಾರಿ ಗಳಗಲಿ ಅಥವಾ ಜನಪ್ರತಿನಿಧಿಗಳಾಗಲಿ ಕಿಂಚಿತ್ತೂ ರಾಮಮ್ಮನ ಕೆರೆಯತ್ತ ಚಿತ್ತ ಹರಿಸಿಲ್ಲ.

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಿಗಳಿಗೆ ಆಹ್ಲಾದಕರ ವಾತಾವರಣ ಕಲ್ಪಿಸುತ್ತಿರುವ ಕೆರೆ, ತನ್ನ ಅಚ್ಚುಕಟ್ಟು ಪ್ರದೇ ಶದ ರೈತರ ಬೆಳೆಗೆ ಜೀವಾಳವಾಗಿದೆ. ಆದರೆ ಪಟ್ಟಣದ ಚರಂಡಿ ನೀರು ಕೆರೆಯನ್ನು ಸೇರು ತ್ತಿದ್ದು, ರೈತರು ಮತ್ತು ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ. ಇಷ್ಟೇ ಅಲ್ಲದೆ ಕೋಳಿ ತ್ಯಾಜ್ಯ, ಕಟ್ಟಡಗಳ ಅನುಪಯುಕ್ತ ವಸ್ತುಗಳು, ಕಸ, ಒಣತ್ಯಾಜ್ಯ ಕೆರೆಯ ಬದಿಯಲ್ಲಿ ಶೇಖರಣೆಯಾಗುತ್ತಿದೆ.

ಕಸ, ಕೊಳಚೆ ನೀರು, ಹಸಿ ತ್ಯಾಜ್ಯ ನೀರಿಗೆ ಸೇರಿಕೊಂಡು ದುರ್ನಾತ ಹರಡುತ್ತಿದೆ. ಅಷ್ಟೆ ಅಲ್ಲದೆ ಕಟ್ಟಡಗಳ ಮಣ್ಣು, ಇಟ್ಟಿಗೆ, ಕಾಂಕ್ರೀ ಟ್, ಅನುಪಯುಕ್ತ ವಸ್ತುಗಳು ಕೆರೆಯ ಬದಿ ಯಲ್ಲಿ ಬೇಕಾಬಿಟ್ಟಿಯಾಗಿ ಬಿಸಾಡಲಾಗು ತ್ತಿದೆ. ಇದರಿಂದಾಗಿ ಕೆರೆಯ ವಿಸ್ತಾÃ ಕಡಿಮೆ ಯಾಗುತ್ತಿದೆ. ಕೆರೆಯ ಮೇಲೆ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಸಣ್ಣ ನೀರಾ ವರಿ ಇಲಾಖೆ, ನಗರಸಭೆ, ಕೆರೆಯ ವ್ಯಾಪ್ತಿ ಯಲ್ಲಿ ಬರುವ ಗ್ರಾಮ ಪಂಚಾಯಿತಿಗಳು ಗಮನಹರಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿವೆ.

ಇಗ್ಗಲೂರು ಜಲಾಶಯದಿಂದ ಕುಡಿಯುವ ನೀರು ಯೋಜನೆಯಡಿ ನೀರು ತುಂಬಿಸ ಲಾಗಿದೆ. ಆದರೆ ಪಟ್ಟಣದ ನಾಲ್ಕೈದು ವಾರ್ಡುಗಳ ಚರಂಡಿ ನೀರು ಕೆರೆಯಂಗಳ ಸೇರುತ್ತಿರುವುದರಿಂದ ಶುದ್ಧ ನೀರುವ ಕಲ್ಮಶ ಗೊಳ್ಳುತ್ತಿದೆ. ನಗರಸಭೆ, ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿ ಎರಡರ ವ್ಯಾಪ್ತಿಯಲ್ಲಿ ಕೆರೆ ಆವರಿಸಿದೆ. ಸುತ್ತಮುತ್ತಲ ನಾಲ್ಕೈದು ಗ್ರಾಮಗಳಿಗೆ ಕೆರೆಯಿಂದಾಗಿ ನೀರಿನ ಸಮಸ್ಯೆ ಇಲ್ಲ. ಹಾಗೆಯೇ ಅಂತರ್ಜಲ ಮಟ್ಟವೂ ಸಹ ಸುಧಾರಣೆ ಕಂಡಿದೆ. ಆದರೆ ನಿರ್ವಹಣೆ ಇಲ್ಲದೆ ಈ ಕೆರೆ, ಪಟ್ಟಣದ ಬಸ್‌ ನಿಲ್ದಾಣದ ಸನಿಹದಲ್ಲಿಯೇ ಇರುವ, ಕೊಳಕನ್ನೆಲ್ಲ ತನ್ನೊಳಗೆ ಸೇರಿಸಿಕೊಂಡು ಇಲ್ಲದಂತಿರುವ ಮತ್ತೂಂದು ಶೆಟ್ಟಹಳ್ಳಿ ಕೆರೆಯಾಗುವ ಭೀತಿ ಎದುರಿಸುತ್ತಿದೆ.

ರಾಮಮ್ಮನಕೆರೆ ಮೀನು ಎಂದರೆ ಮುಗಿಬಿದ್ದು ಖರೀದಿ ಮಾಡುತ್ತಿದ್ದ ಜನ, ಇದೀಗ ರಾಮಮ್ಮನ ಕೆರೆ ಮೀನು ಎಂದರೆ ಹೆದರುವ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ನೀರಿಗೆ ಸೇರುತ್ತಿರುವ ಕಲುಷಿತ ನೀರು ಹಾಗೂ ಹಸಿತ್ಯಾಜ್ಯ. ಕಲುಷಿತ ನೀರಿನಿಂದಾಗಿ ಮತ್ಸೋದ್ಯಮಕ್ಕೂ ಸಹ ಇಲ್ಲಿ ಹಿನ್ನಡೆಯಾಗಿದೆ. ನೀರಿನಲ್ಲಿ ಸೇರುತ್ತಿರುವ ಕೊಳಕನ್ನೆಲ್ಲಾ ತಿಂದು ಮೀನು ಬೆಳೆಯುವುದರಿಂದ ತಿನ್ನುವವರ ಆರೋಗ್ಯ ಕ್ಕೂ ಸಂಚಕಾರ ತಂದೊಡ್ಡುದ್ದು ಜನರಲ್ಲಿ ಆತಂಕ ಮೂಡಿಸಿದೆ.

ಅಕ್ರಮ ಒತ್ತುವರಿಯ ಭೂತ: ಇವೆಲ್ಲವು ಗಳೊಂದಿಗೆ ಅಕ್ರಮ ಒತ್ತುವರಿ ಭೂತ ಸಹ ಈ ಕೆರೆಯನ್ನು ಬಿಟ್ಟಿಲ್ಲ. ಕೆರೆಯ ಪೂರ್ವಕ್ಕೆ ಸಾಕಷ್ಟು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವ ಕೆಲಸವೂ ಸಹ ಇದು ವರೆಗೆ ಆಗಿಲ್ಲ. ಇದೇ ಭಾಗದಲ್ಲಿ ಕೆರೆಯ ಅಂಗಳದಲ್ಲೇ ಮುಳ್ಳಿನ ಪೊದೆಗಳು ಬೆಳೆದು ಕೊಂಡಿದ್ದು, ಬಳ್ಳಿಗಳು ನೀರಿನೊಳಗೆ ಸೇರಿ ಕೊಂಡು ನೀರು ಕೊಳೆಯಲು ಅನುವು ಮಾಡಿಕೊಡುತ್ತಿವೆ.

ಕೆರೆಯ ಸುತ್ತಮುತ್ತಲ ಪ್ರದೇಶ, ಏರಿ, ತೂಬು, ನೀರು ಹರಿಯುವ ಕಾಲುವೆ ಹೀಗೆ ಸಂಬಂಧಿಸಿದ ಎಲ್ಲ ಕಾರ್ಯಗಳ ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ತಾಲೂಕಿನ ಕೆರೆಗಳಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿದೆ. ಪ್ರತಿ ಕೆರೆಗಳ ಬಳಿಯಲ್ಲೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇವೆ. ಯಾವುದನ್ನೂ ಸರಿಪಡಿಸುವ ಗೋಜಿಗೆ ಇಲಾಖೆ ಹೋಗಿಲ್ಲ.

ಅನಾಹುತ ಸಂಭವಿಸಿದರೆ ಬರುವ ಅಕಾರಿಗಳು ಸುಸ್ಥಿತಿಯಲ್ಲಿದ್ದಾಗ ನಿರ್ವಹಣೆ ಮಾಡಿದರೆ ಇದಾಗುತ್ತಿರಲಿಲ್ಲ ಎನ್ನುವ ಆಲೋಚನೆಯನ್ನೂ ಮಾಡುತ್ತಿಲ್ಲ. ಹಾಗೆಯೇ ತನ್ನ ವ್ಯಾಪ್ತಿಯ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿರುವ, ಪಟ್ಟಣದ ತ್ಯಾಜ್ಯವನ್ನು ಅವಕಾಶ ಮಾಡಿಕೊಟ್ಟಿರುವ ನಗರಸಭೆಯೂ ಸಹ ಕೆರೆಯ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಇನ್ನು ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿಯೂ ಎರಡೂ ಇಲಾಖೆಗಳಿಗೆ ಕೆರೆಯ ಸಮಸ್ಯೆ ಸರಿಪಡಿಸುವಂತೆ ತಿಳಿಸುವ ಕೆಲಸವನ್ನೂ ಮಾಡಿಲ್ಲ. ಇದರಿಂದಾಗಿಯೇ ಕೆರೆ ಸಮಸ್ಯೆ ಗಳನ್ನು ಹೊದ್ದಿಕೊಂಡು ಮೂಕರೋಧನೆ ಅನುಭವಿಸುತ್ತಿದೆ. ಇನ್ನಾದರೂ ಸಂಬಂಧ ಪಟ್ಟವರು ಕೆರೆಯ ನಿರ್ವಹಣೆ ಮಾಡಿ, ಅಸ್ತಿತ್ವವನ್ನು ಉಳಿಸಲು ಮುಂದಾಗಬೇಕಿದೆ.

ಎಂ.ಶಿವಮಾದು

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Magadi; Mother-son passed away due to gas leak from geyser

Magadi; ಗೀಸರ್ ನಿಂದ ಅನಿಲ ಸೋರಿಕೆಯಿಂದ ಮೃತಪಟ್ಟ ತಾಯಿ – ಮಗ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

1-train

Train;ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ: ಪ್ರಯಾಣಿಕರಿಗೆ ಅನಾನುಕೂಲ

HD-Kumaraswamy

Bengaluru South; ನಾನು ಅಧಿಕಾರಕ್ಕೆ ಬಂದಾಗ ಇವರಿಟ್ಟ ಹೆಸರು ಕಿತ್ತೆಸೆಯುವೆ: ಎಚ್‌ಡಿಕೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.