ಜೀರ್ಣೋದ್ಧಾರಕ್ಕಾಗಿ ಕಾದಿದೆ ಪುಣ್ಯ ಕ್ಷೇತ್ರ
ಸಂಪೂರ್ಣ ಶಿಥಿಲಗೊಂಡಿದೆ ಬೋರಬಂಡಾ ಗ್ರಾಮದ ತಪೋಸ್ಥಳ-ದಾಸೋಹ ಕೇಂದ್ರ
Team Udayavani, Jul 25, 2019, 10:58 AM IST
ಸೈದಾಪುರ: ಬೋರಬಂಡಾ ಗ್ರಾಮದ ಸಿದ್ಧಲಿಂಗ ಸ್ವಾಮೀಜಿ ಮಠ ಶಿಥಿಲಗೊಂಡ ದೃಶ್ಯ.
ಭೀಮಣ್ಣ ವಡವಟ್ಟ
ಸೈದಾಪುರ: ಎಷ್ಟೋ ಪ್ರಾಚೀನ ಪುಣ್ಯಕ್ಷೇತ್ರಗಳು, ತಪೋಭೂಮಿಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಬೋರಬಂಡಾ ಗ್ರಾಮದ ಹೊರ ವಲಯದಲ್ಲಿರುವ ಸಿದ್ಧಲಿಂಗ ಸ್ವಾಮೀಜಿ ತಪೋಗೈದ ಸ್ಥಳ ಹಾಗೂ ದಾಸೋಹ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದೆ.
ಪ್ರಥಮ ಸಿದ್ಧಲಿಂಗ ಸ್ವಾಮೀಜಿ ಸುದೀರ್ಘ 12 ವರ್ಷಗಳ ಕಾಲ ತಪಸ್ಸನ್ನಾಚರಿಸಿದ ಈ ಕ್ಷೇತ್ರ ಹಾಳು ಬಿದ್ದಿದೆ. ಸುಮಾರು ಮೂರು ಶತಮಾನಗಳ ಹಿಂದೆಯೇ ಗಿರಿನಾಡಿನ ಜನತೆಗೆ ಜ್ಞಾನದಾಸೋಹ-ಅನ್ನದಾಸೋಹಗೈದ ಪುಣ್ಯಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕೆಂಬುದು ಭಕ್ತರ ಬಯಕೆಯಾಗಿದೆ.
ಬತ್ತದ ಬಾವಿ: ಬೋರಬಂಡಾ ಗ್ರಾಮದಲ್ಲಿ ಕಳೆದ ನಾಲ್ಕು ಶತಮಾನಗಳ ಹಿಂದೆ ನಿರ್ಮಿಸಲಾದ ಐತಿಹಾಸಿಕ ಬಾವಿ ಯೊಂದಿದ್ದು, ಸುಮಾರು ಎಂಟು ಗುಂಟೆ ವ್ಯಾಪ್ತಿಯಲ್ಲಿ ಇದನ್ನು ನಿರ್ಮಿಸಲಾಗಿದೆ.ಇದು ಬೃಹದಾಕಾರ ಕಲ್ಲುಗಳಿಂದ ನಿರ್ಮಿಸಲಾಗಿದೆ. ಸುಮಾರು 50 ಅಡಿಗಳಷ್ಟು ಆಳ ಹೊಂದಿದ್ದು, ಎಷ್ಟೇ ಬರ ಆವರಿಸಿದರೂ ಬತ್ತಿದ ಉದಾಹರಣೆ ಇಲ್ಲವೇ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಇತಿಹಾಸ: ಬೋರಬಂಡಾದ ಗುಡ್ಡದ ಬಂಡೆಯೊಂದರ ಕೆಳಗೆ ಅನುಷ್ಠಾನ ಕುಳಿತಿದ್ದ ಸಿದ್ಧಲಿಂಗ ಸ್ವಾಮಿಗಳನ್ನು ಕಾಕಲವಾರ ಸಂಸ್ಥಾನದ ಒಡೆಯ ಲಕ್ಷ್ಮಣಪ್ಪ ದೊರೆ ಭೇಟಿ ಮಾಡಿ ಸಂತಾನ ಭಾಗ್ಯ ಕೊಡುವಂತೆ ಬೇಡಿಕೊಳ್ಳುತ್ತಾನೆ. ಶ್ರೀಗಳ ಆಶೀರ್ವಾದದಂತೆ ರಾಜ ದಂಪತಿಗೆ ಮಕ್ಕಳಾಗುತ್ತವೆ. ಇದರಿಂದ ಸಂತಸಗೊಂಡ ಲಕ್ಷ್ಮಣಪ್ಪ ದೊರೆ ಬೋರಬಂಡಾ ಗುಡ್ಡಗಾಡಿನ ಸುಮಾರು 1600 ಎಕರೆ ಭೂ ಪ್ರದೇಶವನ್ನು ಶ್ರೀ ಮಠಕ್ಕೆ ದಾನವಾಗಿ ಕೊಡುತ್ತಾನೆ. ಆದರೆ ನಂತರದಲ್ಲಿ ಈ ಭೂ ಪ್ರದೇಶ ಸ್ಥಳೀಯ ಜನರ ಪಾಲಾಗಿದ್ದು, ಇದೀಗ ಅಲ್ಪಸ್ವಲ್ಪ ಮಾತ್ರ ಉಳಿದು ಕೊಂಡಿದೆ.
ಬೋರಬಂಡಾ ನಮ್ಮ ಶ್ರೀ ಮಠದ ಸಿದ್ಧಲಿಂಗ ಸ್ವಾಮಿಗಳು ಅನುಷ್ಠಾನ ಮಾಡಿರುವ ಸ್ಥಳವಾಗಿದ್ದು, ಅಲ್ಲಿ ನಿರ್ಮಿಸಲಾದ ಬಾವಿ ಐತಿಹಾಸಿಕ ಸಂಪತ್ತು. ಪೂಜ್ಯರ ಅನುಷ್ಠಾನ ಸ್ಥಳ, ಅನ್ನದಾಸೋಹ ಕೇಂದ್ರ ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿಗರಿಗೆ, ಭಕ್ತರಿಗೆ ಅನುಲಕೂಲವಾಗಬೇಕು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಅತ್ಯವಶ್ಯ.
•ಪಂಚಮ ಸಿದ್ಧಲಿಂಗ ಸ್ವಾಮೀಜಿ, ವಿರಕ್ತಮಠ
ಯಾದಗಿರಿಯಿಂದ ಗುರುಮಠಕಲ್ ಮಾರ್ಗ ನಡುವೆ ಇರುವ ಬೋರಬಂಡಾದ ಸಿದ್ಧಲಿಂಗ ಸ್ವಾಮಿಗಳ ತಪೋಸ್ಥಳ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಸ್ಥಳೀಯ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಮೇಲಿದೆ. ಹೆದ್ದಾರಿ ಪಕ್ಕದಲ್ಲೇ ಇರುವ ಈ ಪುಣ್ಯಸ್ಥಳ ಅಭಿವೃದ್ಧಿ ಪಡಿಸಿದರೆ ಪ್ರಯಾಣಿಕರಿಗೆ, ಭಕ್ತರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ