ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು
Team Udayavani, May 7, 2019, 11:43 AM IST
ಸಂಡೂರು: ಪುರಸಭಾ ಚುನಾವಣೆಯ ಘೋಷಣೆಯಾಗಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿವೆ. ಆದರೆ ಅಭ್ಯರ್ಥಿಗಳ ಆಯ್ಕೆ ತೀವ್ರ ಕಠಿಣ ಮತ್ತು ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಹೆಚ್ಚುತ್ತಿದೆ.
ಮಂಡಲ ಪಂಚಾಯಿತಿಯಿಂದ ಪಪಂ ನಂತರ ಪುರಸಭೆಯಾಗಿ ಬೆಳೆದ ಸಂಡೂರು ಪುರಸಭೆಯಲ್ಲಿ ಕಳೆದ ಬಾರಿ ಕನಿಷ್ಠ ಬಹುಮತದಿಂದ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಅದರಲ್ಲಿ ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ ಮಧ್ಯದಲ್ಲಿ ಅಶಾಲತಾ ಸೋಮಪ್ಪ ಮತ್ತು ಗಡಂಬ್ಲಿ ಚನ್ನಪ್ಪ ಅಧ್ಯಕ್ಷರಾಗಿ ಅಧಿಕಾರ ನಡೆಸಿದರು. ವಿರೋಧ ಪಕ್ಷದಲ್ಲಿ 12 ಸದಸ್ಯರು ಬಿ.ಎಸ್.ಅರ್ ಪಕ್ಷದಿಂದ ಆಯ್ಕೆಯಾಗಿದ್ದರು. ನಂತರ ಅವರು ಬಿಜೆಪಿ ಪಕ್ಷದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು ವಿಶೇಷವಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿ ಸಚಿವರನ್ನು ಹೊಂದಿದ್ದು ತುಕಾರಾಂ ಅವರ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ಕೈ ಹಿಡಿಯುತ್ತವೆ ಎಂಬ ಭರವಸೆ ಹೊಂದಿದ್ದರೆ, ಬಿಜೆಪಿ ಪಕ್ಷವು ಮೋದಿ ಅಲೆ ಮತ್ತು ಘೋರ್ಪಡೆ ಕುಟುಂಬದಿಂದ ದಿವಂಗತ ಎಂ.ವೈ. ಘೋರ್ಪಡೆಯವರ ಮಗ ಕಾರ್ತಿಕ್ ಘೋರ್ಪಡೆ ನೇತೃತ್ವದಲ್ಲಿ ಚುನಾವಣೆ ಪ್ರಾರಂಭವಾಗಿದ್ದು, ಒಂದು ರೀತಿ ತೀವ್ರ ಪೈಪೋಟಿಗೆ ಸಿದ್ಧವಾಗಿ ನಿಂತಿದೆ ಎನ್ನಬಹುದು.
ಪ್ರತಿ ವಾರ್ಡ್ನಲ್ಲಿಯೂ ತೀವ್ರ ಸ್ಪರ್ಧೆ ಮಾತ್ರ ನಿಶ್ಚಿತವಾಗಿದೆ. ಒಟ್ಟು 30,876 ಮತದಾರರು ಮತದಾನಕ್ಕೆ ಸಿದ್ಧವಾಗಿದ್ದಾರೆ. ಆದರೆ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದನ್ನು ಕಾಯ್ದು ನೋಡಬೇಕು.
ಬಸವರಾಜ ಬಣಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ
ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ