3 ತಿಂಗಳಿಂದ ಸಿಗದ ಮಾಸಾಶನ: ಆರೋಪ
ತಿಂಗಳಲ್ಲಿ ಒಂದು ದಿನ ಪೋಸ್ಟ್ಮ್ಯಾನ್ಗೆ ಕಾಯುವ ಪರಿಸ್ಥಿತಿ
Team Udayavani, Jun 5, 2019, 5:23 PM IST
ಶಹಾಬಾದ: ಮಾಸಾಶನ ಪಡೆಯಲು 60ಕ್ಕೂ ಹೆಚ್ಚು ಫಲಾನುಭವಿಗಳು ಗಿಡದ ಕೆಳಗೆ ಕುಳಿತಿದ್ದರು.
ಶಹಾಬಾದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ ಮಾಸಾಶನ ಕಳೆದ ಮೂರು ತಿಂಗಳಿಂದ ದೊರಕಿಲ್ಲ ಎಂದು ರಾಘವೇಂದ್ರ ಮಂದಿರ ಮುಂಭಾಗ ಮತ್ತು ಪಕ್ಕದ ಗಿಡದ ಕೆಳಗೆ ಮಂಗಳವಾರ ಸೇರಿದ್ದ 60ಕ್ಕೂ ಹೆಚ್ಚು ಫಲಾನುಭವಿಗಳು ಆರೋಪಿಸಿದರು.
ಅಂಚೆ ಕಚೇರಿಯಲ್ಲಿ ಹಣ ನೀಡಬೇಕಾದ ಸಿಬ್ಬಂದಿಯೊಬ್ಬರು ತಮಗೆ ಮನಸ್ಸಿಗೆ ಬಂದ ಸ್ಥಳದಲ್ಲಿ ಕರೆದು ಸತಾಯಿಸುತ್ತಿದ್ದಾರೆಂದು ಫಲಾನುಭವಿಗಳು ಆರೋಪಿಸಿದರು. ಪ್ರತಿ ತಿಂಗಳು ಮಾಸಾಶನ ಪಡೆಯಬೇಕಾದರೆ 100 ರೂ. ಕೊಡಬೇಕು. ಕೊಡದಿದ್ದರೆ ನಮ್ಮ ಮಾಸಾಶನ ಬಂದಿಲ್ಲ ಎಂದು ಸತಾಯಿಸುತ್ತಾರೆ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು. ಅಂಚೆ ಕಚೇರಿ ಸಿಬ್ಬಂದಿ ಕರ್ತವ್ಯ ಮರೆತು ದೇವಸ್ಥಾನ ಮುಂಭಾಗ ಅಥವಾ ಯಾವುದೋ ಗಿಡದ ಕೆಳಗೆ ಕರೆದು ಹಣ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಾಸಾಶನ ಪಡೆಯುವವರು ತಿಂಗಳಲ್ಲಿ ಒಂದು ದಿನ ಪೋಸ್ಟ್ಮ್ಯಾನ್ಗೆ ಕಾಯುವ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಅಂಚೆ ವ್ಯವಸ್ಥಾಪಕರು ಅಂಚೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ ರಾಜನ್ ಆಗ್ರಹಿಸಿದರು.
ಮನವಿ: ನಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಮಾಸಾಶನ ಹಾಕಿದರೆ ಇಷ್ಟೆಲ್ಲ ಸಮಸ್ಯೆಯಾಗಲ್ಲ. ಅಲ್ಲದೇ ಬಿಸಿಲಿನಲ್ಲಿ ಕಾಯುವ ಪರಿಸ್ಥಿತಿ ಬರೊಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬ್ಯಾಂಕ್ ಖಾತೆಗೆ ಹಣ ಹಾಕುವ ಕೆಲಸ ಮಾಡಬೇಕೆಂದು ಫಲಾನುಭವಿಗಳು ಮನವಿ ಮಾಡಿದರು.
ಈಗಾಗಲೇ ನಮ್ಮ ಸಿಬ್ಬಂದಿ ಮೇಲೆ ದೂರುಗಳು ಬಂದಿವೆ. ಮಾಸಾಶನ ವಿತರಣೆಗೆ ಲಂಚ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದರೆ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
•ವಾಣಿ ಕುಲಕರ್ಣಿ,
ಪೋಸ್ಟ್ ಮಾಸ್ಟರ್, ಶಹಾಬಾದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ